ಕಲಾವಿದ ಪ್ರವೀಣ್ ಆಚಾರ್ಯರಿಗೆ ವಿಶ್ವ ರಂಗನಾಯಕ ಬಿರುದು
ಕಾರ್ಕಳ : ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜಸೇವಾ ಸಂಘ ನೀರೆ ಬೈಲೂರು ಇದರ 43ನೇ ವಾರ್ಷಿಕ ಮಹಾಸಭೆ ಫೆ. 1ರಂದು ಬೈಲೂರು ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ತುಳು ರಂಗಭೂಮಿ ಕಲಾವಿದ, ನಾಟಕ ರಚನೆಕಾರ ಪ್ರವೀಣ್ ಆಚಾರ್ಯ ನೆಲ್ಲಿಕಟ್ಟೆ ಅವರಿಗೆ ವಿಶ್ವ ರಂಗನಾಯಕ ಬಿರುದು ನೀಡಿ ಗೌರವಿಸಲಾಯಿತು. ಈ ಸಂದರ್ಭ ಸಂಘದ ಪದಾಧಿಕಾರಿಗಳು, ಸಮುದಾಯದ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
























































































