ನಿಟ್ಟೆ : ಬೈಕ್‌ – ಕಾರು ಡಿಕ್ಕಿ, ಸವಾರನಿಗೆ ಗಾಯ

ಕಾರ್ಕಳ : ನಿಟ್ಟೆ ಗರಡಿ ಬಳಿ ಬೈಕ್‌ ಕಾರು ಡಿಕ್ಕಿಯಾಗಿ ಸವಾರ ಗಾಯಗೊಂಡಿರುವ ಘಟನೆ ಆ. 7 ರಂದು ಸಂಭವಿಸಿದೆ. ಪರಪ್ಪಾಡಿಯ ಮಂಜುನಾಥ ಶೆಟ್ಟಿ ಅವರು ನಿಟ್ಟೆ ಕಾಲೇಜಿನಲ್ಲಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ಬರುತ್ತಿದ್ದಾಗ ಗರಡಿ ಬಳಿ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮಂಜುನಾಥ ಶೆಟ್ಟಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಗಾಜ್ರೀಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.







































































error: Content is protected !!
Scroll to Top