ಕಾರ್ಕಳ ಬಿಜೆಪಿಯಿಂದ ಬೃಹತ್ ಮತಪ್ರಚಾರ ಅಭಿಯಾನ

209 ಬೂತ್‌ನಲ್ಲಿ 10 ಸಾವಿರ ಕಾರ್ಯಕರ್ತರಿಂದ ಪ್ರಚಾರ – ಮತಯಾಚನೆ

ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದಾದ್ಯಂತ ರವಿವಾರ ಬಿಜೆಪಿ ವತಿಯಿಂದ ವಿಶೇಷ ಮಹಾ ಪ್ರಚಾರ ಅಭಿಯಾನ ನಡೆಯಿತು. ಹಿರಿಯರು, ಕಿರಿಯರು, ಮಹಿಳೆಯರು, ಯುವಕರು, ಯುವತಿಯರು ಹೀಗೆ ಒಟ್ಟು 10 ಸಾವಿರಕ್ಕೂ ಮಿಕ್ಕಿದ ಕಾರ್ಯಕರ್ತರು ಮತ ಪ್ರಚಾರದಲ್ಲಿ ಪಾಲ್ಗೊಂಡರು. ಕಾರ್ಕಳ, ಹೆಬ್ರಿ ತಾಲೂಕುಗಳ 34 ಗ್ರಾಮ ಪಂಚಾಯತ್ ವ್ಯಾಪ್ತಿಯ 209 ಬೂತ್‌ಗಳಲ್ಲಿ, ಪ್ರತಿ ಬೂತ್‌ಗಳಲ್ಲಿ 75 ರಿಂದ 100 ಮಂದಿ ಕಾರ್ಯಕರ್ತರು ಸೇರಿ  ಪ್ರಚಾರ  ಅಭಿಯಾನ ನಡೆಸಿದರು.

ಬಿಸಿಲನ್ನು ಲೆಕ್ಕಿಸದೇ ಸಹಸ್ರಾರು ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆಗಳಿಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಸಾಧನೆ,  ಕ್ಷೇತ್ರದಲ್ಲಿ  ಶಾಸಕ, ಸಚಿವ ವಿ. ಸುನಿಲ್‌ ಕುಮಾರ್ ಅವರು ಕಳೆದ 5 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿದರು. ಮುಳುಗು ಸೇತುವೆಗಳಿಗೆ ಮುಕ್ತಿ, ಪ್ರತಿ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ, ಪ್ರತಿ ಮನೆಗೂ ಕುಡಿಯುವ ನೀರು, ಅಂತರ್ಜಲ ಮಟ್ಟ ಏರಿಕೆಗೆ 209 ಕಿಂಡಿ ಅಣೆಕಟ್ಟು ನಿರ್ಮಾಣ, ಆಸ್ಪತ್ರೆಗಳಲ್ಲಿ ಐಸಿಯು, ಮಕ್ಕಳ ಐಸಿಯು ಘಟಕ, ಕೊರೊನಾ ಸಂದರ್ಭ ಆರೋಗ್ಯ ನಿರ್ವಹಣೆ, ಮಕ್ಕಳ ಕಲಿಕೆಗೆ ಮಗ್ಗಿ ಪುಸ್ತಕ ವಿತರಣೆ, ವಾತ್ಸಲ್ಯ ಯೋಜನೆಯಡಿ ಮಕ್ಕಳ ಆರೋಗ್ಯ ತಪಾಸಣೆ, ಶಾಲೆಗಳ ಕಟ್ಟಡ ಉನ್ನತೀಕರಣ, ಐಟಿಐ ಕಾಲೇಜು, ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ, ಯಕ್ಷರಂಗಾಯಣ, ಸ್ವರ್ಣ ನದಿಗೆ ಅಣೆಕಟ್ಟು, 25 ಸಾವಿರಕ್ಕೂ ಅಧಿಕ ಇಂಗುಗುಂಡಿ ನಿರ್ಮಾಣ, ಮೊರಾರ್ಜಿ, ವಸತಿ ಶಾಲೆ,  ಪಾಲಿಟೆಕ್ನಿಕ್  ಕಾಲೇಜು  ಹೀಗೆ  ಶಿಕ್ಷಣ, ಉದ್ಯೋಗಕ್ಕೆ ಒತ್ತು  ನೀಡಿದ  ಬಗ್ಗೆ ಹಾಗೂ ಬಡವರಿಗೆ 94ಸಿ, 94ಸಿಸಿಯಲ್ಲಿ ಹಕ್ಕುಪತ್ರ ವಿತರಣೆ, ಸರಕಾರಿ ಕಟ್ಟಡಗಳ ಆಧುನೀಕರಣ, ಪ್ರತಿ ಗ್ರಾಮಗಳಲ್ಲಿ  ಸಮುದಾಯ ಭವನ ನಿರ್ಮಾಣ, ದೈವ-ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಹಾಗೂ ಕಾರ್ಕಳ ಉತ್ಸವ, ಪರಶುರಾಮ ಥೀಂ ಪಾರ್ಕ್,  ಪಾರ್ಕ್‌ಗಳ ನಿರ್ಮಾಣ  ಕೆರೆಗಳ ಅಭಿವೃದ್ಧಿಗಳ ಕುರಿತು ವಹಿಸಿದ ಕಾಳಜಿಯ  ಸಮಗ್ರ ಮಾಹಿತಿಯನ್ನು ಮತದಾರರಿಗೆ ನೀಡಿ ಈ ಬಾರಿಯ ಚುನಾವಣೆಯಲ್ಲಿ ಮತೊಮ್ಮೆ ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿ ಕಾರ್ಡ್ ಬಗ್ಗೆ ಜನ ನಂಬದಂತೆ ಹಾಗೂ ಅವರ ಅಪಪ್ರಚಾರಗಳಿಗೆ ಕಿವಿಗೊಡದೆ ಅಭಿವೃದ್ಧಿಯನ್ನು ಬೆಂಬಲಿಸುವಂತೆ ವಿನಂತಿಸಿದರು. ಕಣ್ಣು ಕೋರೈಸುವ ಬಿಸಿಲಲ್ಲೂ ಉತ್ಸಾಹ ಕಳೆದುಕೊಳ್ಳದೆ ಮತಯಾಚನೆ ಮಾಡಿದರು. ಕೇಸರಿ ಶಾಲು, ಟೋಪಿ, ಕರಪತ್ರಗಳನ್ನು ಹಿಡಿದು ಮನೆಮನೆಗೆ ಸಾಗಿದರು. ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್, ಕ್ಷೇತ್ರ ಬಿಜೆಪಿ ಸಮಿತಿ, ವಿವಿಧ ಮೋರ್ಚಾ, ಘಟಕದ ಪದಾಧಿಕಾರಿಗಳು, ಬೂತ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌‌ ಇಂದು ರೆಂಜಾಳ, ಮಿಯ್ಯಾರು, ಬಜಗೋಳಿ, ಮುಡಾರು, ಸಾಣೂರು ಸೇರಿದಂತೆ ಕ್ಷೇತ್ರದ ವಿವಿಧ ಭಾಗದಲ್ಲಿ ಮನೆ ಭೇಟಿ ಮಾಡಿ ಮತಯಾಚನೆ ಮಾಡಿದರು.

ಪುರಸಭಾ ವ್ಯಾಪ್ತಿಯ 13ನೇ ವಾರ್ಡ್‌ನಲ್ಲಿ ಮಹಾಸಂಪರ್ಕ ಅಭಿಯಾನ
ಯರ್ಲಪಾಡಿ ಗೋವಿಂದೂರು ವಾರ್ಡ್‌ ವ್ಯಾಪ್ತಿಯ ಕಾರ್ಯಕರ್ತರಿಂದ ಮಹಾ ಸಂಪರ್ಕ ಅಭಿಯಾನ
ಯರ್ಲಪಾಡಿ ಗರಡಿ ವಾರ್ಡ್‌ ವ್ಯಾಪ್ತಿಯ ಕಾರ್ಯಕರ್ತರಿಂದ ಮಹಾ ಸಂಪರ್ಕ ಅಭಿಯಾನ
ಹೆಬ್ರಿ ಶಿವಪುರದಲ್ಲಿ ಮಹಾ ಸಂಪರ್ಕ ಅಭಿಯಾನದಲ್ಲಿ ಕಾರ್ಯಕರ್ತರು
ಶಿವಪುರ ನಾಯರ್‌ ಕೋಡ್‌ ವಾರ್ಡ್‌ನ ಕಾರ್ಯಕರ್ತರಿಂದ ಅಭಿಯಾನ
ರೆಂಜಾಳ ಗ್ರಾಮದಲ್ಲಿ ನಡೆದ ಮಹಾಸಂಪರ್ಕ ಅಭಿಯಾನ
ಪರಪ್ಪು ವಾರ್ಡ್‌ನಲ್ಲಿ ಮಹಾಸಂಪರ್ಕ ಅಭಿಯಾನದಲ್ಲಿ ಮನೆ ಭೇಟಿ
ನಕ್ರೆಯಲ್ಲಿ ಮಹಾಸಂಪರ್ಕದಲ್ಲಿ ಭಾಗಿಯಾದ ಕಾರ್ಯಕರ್ತರು
ಕುಂಟಾಡಿಯಲ್ಲಿ ಕಾರ್ಯಕರ್ತರಿಂದ ಮಹಾ ಪ್ರಚಾರ ಅಭಿಯಾನ
ಕಾರ್ಕಳ ನಗರ ವ್ಯಾಪ್ತಿಯಲ್ಲಿ ಮಹಾಸಂಪರ್ಕ ಅಭಿಯಾನ
ಕಾರ್ಕಳ ನಗರ ವ್ಯಾಪ್ತಿಯಲ್ಲಿ ಮಹಾಸಂಪರ್ಕ ಅಭಿಯಾನ
ಮಹಾಸಂಪರ್ಕ ಅಭಿಯಾನದಲ್ಲಿ ಭಾಗಿಯಾದ ಜೋಡುರಸ್ತೆಯ ಕಾರ್ಯಕರ್ತರು
ಕುಕ್ಕುಂದೂರು ಜಯಂತಿ ನಗರ ವಾರ್ಡ್‌ನಲ್ಲಿ ಕಾರ್ಯಕರ್ತರಿಂದ ಮಹಾಸಂಪರ್ಕ ಅಭಿಯಾನ
ಇರ್ವತ್ತೂರು ಗ್ರಾಮದಲ್ಲಿ ನಡೆದ ಮಹಾಸಂಪರ್ಕ ಅಭಿಯಾನ ಅಂಗವಾಗಿ ಮನೆ ಭೇಟಿ
ಹೆಬ್ರಿ ಭಾಗದಲ್ಲಿ ಮಹಾಸಂಪರ್ಕ ಅಭಿಯಾನದಲ್ಲಿ ಕಾರ್ಯಕರ್ತರು
ಕಕ್ಕುಂದೂರು ದುರ್ಗಾ ನಗರದ ಟಪ್ಪಾಲುಕಟ್ಟೆ ವಾರ್ಡ್‌ನಲ್ಲಿ ಅಭಿಯಾನದಲ್ಲಿ ಭಾಗಿಯಾದ ಕಾರ್ಯಕರ್ತರು
ಮುನಿಯಾಲಿನಲ್ಲಿ ಕಾರ್ಯಕರ್ತರಿಂದ ಮಹಾಸಂಪರ್ಕ ಅಭಿಯಾನ
ಬೋಳ ಗ್ರಾಮದಲ್ಲಿ ಕಾರ್ಯಕರ್ತರಿಂದ ಮಹಾಸಂಪರ್ಕ ಅಭಿಯಾನ
ಬೆಳ್ಮಣ್‌ ವ್ಯಾಪ್ತಿಯಲ್ಲಿ ಮಹಾಸಂಪರ್ಕ ಅಭಿಯಾನ ನಡೆಸಿದ ಕಾರ್ಯಕರ್ತರು
ಅಜೆಕಾರು ಭಾಗದಲ್ಲಿ ಮಹಾಸಂಪರ್ಕ ಅಭಿಯಾನ






































































error: Content is protected !!
Scroll to Top