ಕಾರ್ಕಳ : ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಖಾಸಗೀಕರಣಗೊಳಿಸುವ ಸರಕಾರದ ನಿಲುವನ್ನು ವಿರೋಧಿಸಿ ಅ. 5ರಂದು ಕಾರ್ಕಳ ಮೆಸ್ಕಾಂ ಉಪವಿಭಾಗ ಕಚೇರಿ ಮೆಸ್ಕಾಂ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಮೆಸ್ಕಾಂ ನೌಕರರ ಸಂಘ ಕಾರ್ಕಳ ಜಿಲ್ಲಾ ಸದಸ್ಯ ರಮೇಶ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಕೈಗೆ ಕಪ್ಪು ಪಟ್ಟಿ ಧರಿಸಿ, ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು. ಜಿಲ್ಲಾ ಮೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಸಂಪತ್, ಪಿ.ಜೆ. ರಾಜು, ಸೋಮಯ್ಯ ಪೂಜಾರಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿದ್ಯುಚ್ಛಕ್ತಿ ಮಂಡಳಿ ಖಾಸಗೀಕರಣಕ್ಕೆ ವಿರೋಧ : ಕಾರ್ಕಳದಲ್ಲಿ ಮೆಸ್ಕಾಂ ಸಿಬ್ಬಂದಿ ಪ್ರತಿಭಟನೆ






































































