ಮುಂಬಯಿ, ಸೆ. 9: ಶಿವಸೇನೆಗೆ ಸಡ್ಡು ಹೊಡೆದಿರುವ ನಟಿ ಕಂಗನಾ ರಣಾವತ್ ಅವರ ಕಚೇರಿಯನ್ನು ಅನಧಿಕೃತ ನಿರ್ಮಾಣ ಎಂಬ ಕಾರಣ ಹೇಳಿ ನೆಲಸಮಗೊಳಿಸುವ ಕೆಲಸವನ್ನು ಬಿಎಂಸಿ ಪ್ರಾರಂಭಿಸಿದ್ದು, ಈ ನಡುವೆ ನಟಿ ನ್ಯಾಯಾಲಯದ ಮೆಟ್ಟಿಲೇರಿ ನೆಲಸಮ ಕಾರ್ಯಾಚರಣೆಗೆ ತಡೆಯಾಜ್ಞೆ ತರುವಲ್ಲಿ ಸಫಲರಾಗಿದ್ದಾರೆ.
ಇಂದು ಬೆಳಗ್ಗೆಯೇ ಬಿಎಂಸಿ ಅಧಿಕಾರುಗಳು ಜೆಸಿಬಿ ಯಂತ್ರಗಳು ಮತ್ತು ಸಿಬಂದಿಗಳ ಜೊತೆ ಬಂದು ನೆಲಸಮ ಕಾರ್ಯಾಚರಣೆ ಪ್ರಾರಂಭಿಸಿದರು. ಈ ಚಿತ್ರಗಳನ್ನು ಸ್ವತಃ ಕಂಗನಾ ತನ್ನ ಟ್ವಿಟ್ಟರ್ನಲ್ಲಿ ಹಾಕಿ ನನ್ನ ಕಚೇರಿಯನ್ನು ಕೆಡವಬಹುದು, ಆದರೆ ನನ್ನ ಛಲವನ್ನು ಕೆಡಹಲಾರಿರಿ ಎಂದು ಬರೆದುಕೊಂಡಿದ್ದಾರೆ.
ಈ ನಡುವೆ ಕಂಗನಾ ವಕೀಲರು ಕೋರ್ಟ್ ಮೆಟ್ಟಿಲೇರಿ ಕಾರ್ಯಾಚರಣೆಗೆ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.






















