ಹೆಬ್ರಿ ಬಂಟರ ಸೌಹಾರ್ದ ಸಹಕಾರಿ ಸಂಘದ ಕಚೇರಿ ಉದ್ಘಾಟನೆ

ಹೆಬ್ರಿ : ಹೆಬ್ರಿ ವಿನೂ ನಗರದಲ್ಲಿನ ಶ್ರೀ ದುರ್ಗಾ ಆರ್ಕೆಡ್‍ನಲ್ಲಿ ಹೆಬ್ರಿ ಬಂಟರ ಸೌಹಾರ್ದ ಸಹಕಾರಿ ಸಂಘದ ಕಚೇರಿ ಆ. 17ರಂದು ಉದ್ಘಾಟನೆಗೊಂಡಿತು.  ಎ.ಪಿ.ಎಂ. ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಸಾದ್ ಬಲ್ಲಾಳ್ ನೂತನ ಕಚೇರಿ ಉದ್ಘಾಟಿಸಿದರು. ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಕೆ. ಶಾಂತರಾಮ ಸೂಡ, ಸಂಘದ ಗೌರವಾಧ್ಯಕ್ಷ ರಮಾನಂದ ಹೆಗ್ಡೆ, ಬಂಟರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಮಹಿಳಾ ಸಂಘದ ಅಧ್ಯಕ್ಷೆ  ಬಾನು ಪಿ. ಬಳ್ಳಾಲ್‌, ಯುವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ, ಹೆಬ್ರಿ ಬಂಟರ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಪ್ರವೀಣ್ ಬಲ್ಲಾಳ್‌, ಬಿ. ಕರುಣಾಕರ ಶೆಟ್ಟಿ, ಸುಧಾಕರ್ ಶೆಟ್ಟಿ ಶೇಡಿಮನೆ, ಬಿ.ಹರ್ಷ ಶೆಟ್ಟಿ ಬೇಳಂಜೆ, ಸುಮಾ ಎನ್. ಅಡ್ಯಂತಾಯ, ಶುಭಾವತಿ, ಅಶೋಕ್ ಶೆಟ್ಟಿ ಪಡುಕುಡೂರು, ಸಂದೀಪ್ ಶೆಟ್ಟಿ ಎಣ್ಣೆಹೊಳೆ, ಸುಕೇಶ್ ಶೆಟ್ಟಿ ಹೆಬ್ರಿ, ಸತೀಶ್ ಶೆಟ್ಟಿ ಬೇಳಂಜೆ, ಶುಭದರ ಶೆಟ್ಟಿ ಮುದ್ರಾಡಿ, ಸಂಘದ ಕಾರ್ಯನಿರ್ವಹಣಾಧಿಕಾರಿ  ಮಹಾಬಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಂಟರ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ ಸ್ವಾಗತಿಸಿ, ಸಹಕಾರಿ ನಿರ್ದೇಶಕ ಶಂಕರ್ ಶೆಟ್ಟಿ ಮುನಿಯಾಲು ಕಾರ್ಯಕ್ರಮ ನಿರೂಪಿಸಿದರು. ಚಾರ ವಾದಿರಾಜ್ ಶೆಟ್ಟಿ ವಂದಿಸಿದರು.

ಸಂಘದ ಲಾಭಾಂಶದಲ್ಲಿ ವಿದ್ಯಾರ್ಥಿ ವೇತನ, ಅಸಹಾಯರಿಕೆ ನೆರವು, ಸಮಾಜಮುಖಿ ಕಾರ್ಯಗಳಿಗೆ ಬಳಸಲಾಗುವುದು. ಸಹಕಾರಿ ಸಂಘದ ಅಭಿವೃ‍ದ್ಧಿ ನಿಟ್ಟಿನಲ್ಲಿ ಸಮಾಜ ಎಲ್ಲರೂ ಸಹಕಾರ ನೀಡಬೇಕು. ಈ ಮೂಲಕ ಸಂಘವನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸಬೇಕು.

ಉದಯ ಕುಮಾರ್‌ ಶೆಟ್ಟಿ ಮುನಿಯಾಲು
ಅಧ್ಯಕ್ಷರು, ಬಂಟರ ಸೌಹಾರ್ದ ಸಹಕಾರಿ ಸಂಘ ಹೆಬ್ರಿ





























































































































































































































error: Content is protected !!
Scroll to Top