• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಬರಹ

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 1,88,404 ಮತದಾರರು

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 90,356 ಪುರುಷರು, 98,048 ಮಹಿಳೆಯರು ಸೇರಿ 1,88,404 ಮತದಾರರಿದ್ದಾರೆ. 6,784 ಮಂದಿ ಹೊಸದಾಗಿ ಸೇರ್ಪಡೆಯಾದವರಾಗಿದ್ದಾರೆ. 209 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮಾ. 30ರಂದು ಪ್ರಕಟಿಸಿದ ಮತದಾರರ ಪಟ್ಟಿಯ ಪರಿಷ್ಕೃತ ಮಾಹಿತಿಯಲ್ಲಿ ಈ ವಿವರಗಳನ್ನು ನೀಡಲಾಗಿದೆ. ಎ. 10 ರವರೆಗೆ ಅವಕಾಶಹೊಸ ಮತದಾರರ ಸೇರ್ಪಡೆಗೆ ಎ. 10 ರವರೆಗೆ ಅವಕಾಶವಿದ್ದು, 2023 ಜನವರಿಗೆ 18 ವರ್ಷ ತುಂಬಿದವರು (31-03-2005ಕ್ಕಿಂತ ಮೊದಲು ಜನಿಸಿದವರು) ಮತದಾನದ ಗುರುತಿನ ಕಾರ್ಡ್‌ ಪಡೆಯಲು ಅರ್ಹರಾಗಿರುತ್ತಾರೆ. ಗುರುತಿನ ಚೀಟಿ […]

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 1,88,404 ಮತದಾರರು Read More »

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಆಲ್‌ ದಿ ಬೆಸ್ಟ್….

ವಿದ್ಯಾರ್ಥಿಗಳೇ ….ನಮಸ್ಕಾರ.. ಮೊದಲಾಗಿಮನದುಂಬಿ ಹಾರೈಸುವೆ ಗೆಲುವು….ನಿಮ್ಮದಾಗಲಿ ನಿಮ್ಮ ಭವಿಷ್ಯದ ಸುಂದರ ಕನಸುಗಳು ಸಾಕಾರಗೊಳಿಸಲು ಕಾಲ ಕೂಡಿ ಬಂದಿದೆ. ಪ್ರೌಢ ಚಿಂತನೆಯುಳ್ಳ ಪ್ರೌಢ ವಿದ್ಯಾರ್ಥಿಗಳು ನೀವಾಗಿದ್ದೀರಿ….ಶೈಕ್ಷಣಿಕ ವರ್ಷದ ಕೊನೆಯಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ನೀವೂ ಅರ್ಹರಾಗಿದ್ದೀರಿ, ಸಿದ್ಧರಾಗಿದ್ದೀರಿ. ಪ್ರವೇಶ ಪತ್ರವನ್ನು ಪಡೆದಿರುವಿರಿ.ನಿಮ್ಮ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕಾಲ ಕೂಡಿ ಬಂದಿದೆ ಎಂದು ಅಭಿಮಾನ ಪಟ್ಟುಕೊಳ್ಳಿ. ಜಿಲ್ಲಾಡಳಿತ ಶಿಕ್ಷಣ ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಆಲ್‌ ದಿ ಬೆಸ್ಟ್…. Read More »

ಪಾನ್‌ – ಆಧಾರ್‌ ಕಾರ್ಡ್‌ ಲಿಂಕ್‌ ಅನಿವಾರ್ಯ ಆದರೆ ಗೊಂದಲ ಬೇಡ

✒️ ನಳಿನಿ ಎಸ್.‌ ಸುವರ್ಣ ಪ್ಯಾನ್‌ – ಆಧಾರ್‌ ಕಾರ್ಡ್‌ ಪ್ರಸ್ತುತ ಜೀವನದ ಬಹುದೊಡ್ಡ ಅವಶ್ಯಕತೆಗಳಲ್ಲಿ ಒಂದಾಗಿ ಪರಿಣಮಿಸಿದೆ. ಆರ್ಥಿಕ ವಹಿವಾಟುಗಳಲ್ಲಿ ಪಾನ್‌ ಕಾರ್ಡ್‌ ಪ್ರಮುಖ ಆಧಾರವಾದರೆ, ಆಧಾರ್‌ ಕಾರ್ಡ್‌ ಪಾನ್‌ ಕಾರ್ಡ್‌ಗೆ ಪ್ರಮುಖ ಆಧಾರವಾಗಿದೆ. ಈ ನಿಟ್ಟಿನಲ್ಲಿ ಪಾನ್‌ ಆಧಾರ್‌ ಲಿಂಕ್‌ ಮಾಡಲು ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿತ್ತು. 1000 ರೂಪಾಯಿ ದಂಡದೊಂದಿಗೆ ಮಾರ್ಚ್ 31ವರೆಗೆ ಗಡುವು ನೀಡಲಾಗಿದ್ದು, ಈಗ ಜೂನ್‌ 30, 2023 ರವೆರೆಗೆ ಗಡುವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ

ಪಾನ್‌ – ಆಧಾರ್‌ ಕಾರ್ಡ್‌ ಲಿಂಕ್‌ ಅನಿವಾರ್ಯ ಆದರೆ ಗೊಂದಲ ಬೇಡ Read More »

ಗಣಿಗಾರಿಕೆ ವಿಶೇಷ ಸಂಚಿಕೆ ಬಿಡುಗಡೆ

ಕಾರ್ಕಳ : ಕ್ವಾರಿ ಆ್ಯಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರ ಕಾನೂನು ಬದ್ಧ ಗಣಿಗಾರಿಕೆ ಎಂಬ ವಿಶೇಷ ಸಂಚಿಕೆಯು ಮಾ. 27ರಂದು ಪರ್ಪಲೆ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ರವೀಂದ್ರ ಶೆಟ್ಟಿ ಬಜಗೋಳಿ ಅವರ ನೇತೃತ್ವದಲ್ಲಿ ಕಾನೂನು ಬದ್ಧ ಗಣಿಗಾರಿಕೆಗಾಗಿ ರಾಜ್ಯಾದ್ಯಂತ ಹೋರಾಟ ನಡೆದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಡಿ ಸರಕಾರದಿಂದ ಅಂಗೀಕರಿಸುವಲ್ಲಿ ಯಶಸ್ವಿಯಾದ ಸಾಹಸ ಗಾಥೆಯನ್ನು ವಿವರಿಸುವ ಕುರಿತು ಮಾಧ್ಯಮ ಬಿಂಬ ಪತ್ರಿಕೆಯು ವಿಶೇಷ ಸಂಚಿಕೆಯನ್ನು ಹೊರತಂದಿದೆ. ಹಿರಿಯರಾದ ಬೋಳ

ಗಣಿಗಾರಿಕೆ ವಿಶೇಷ ಸಂಚಿಕೆ ಬಿಡುಗಡೆ Read More »

ಧಾರ್ಮಿಕ ಲೋಕ ಬೆಳಗಿದ ಸೂರ್ಯ ಅಸ್ತಂಗತ

ಚಾರುಕೀರ್ತಿ ಭಟ್ಟಾರಕ ಶ್ರೀಗಳಿಗೆ ನುಡಿನಮನ ಜಗತ್ತನ್ನೇ ಬೆಳಗುತ್ತಿರುವ ಸೂರ್ಯ ನಮ್ಮಂತಹ ಅಸಂಖ್ಯಾತ ಭಾವುಕ ಮನಸ್ಸಿಗೆ ಕತ್ತಲೆ ತುಂಬಿಬಿಟ್ಟ. ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಪರಮ ಪೂಜ್ಯ ಭಟ್ಟಾರಕರು ನಮ್ಮನ್ನು ಅಗಲಿದ್ದಾರೆ ಎನ್ನುವ ಸುದ್ದಿಯನ್ನು ಬುದ್ಧಿ ಸ್ವೀಕರಿಸಿದರೂ ಮನಸ್ಸು ನಿರಾಕರಿಸುತ್ತಿದೆ.ಶ್ರವಣ ಬೆಳಗೊಳದ ಬಂಡೆ ಬಂಡೆಯೂ ಇಂದು ಸ್ವಾಮೀಜಿಯ ಅಗಲಿಕೆಯ ನೋವನ್ನು ಅನುಭವಿಸುತ್ತಿದೆ ಎಂದರೆ ಅತಿಶಯೋಕ್ತಿ ಖಂಡಿತ ಅಲ್ಲ. ಏಕೆಂದರೆ ಲೋಕ ವಿಖ್ಯಾತ ಭಗವಾನ್ ಬಾಹುಬಲಿಯ ಕ್ಷೇತ್ರವನ್ನು ಇಷ್ಟು ಸಮರ್ಪಕವಾಗಿ, ಸರ್ವಜನ ಭಕ್ತಿಯಿಂದ ನಡೆದುಕೊಳ್ಳುವ ಶ್ರೀ ಮಠದ ಸ್ವಾಮೀಜಿ ಆಗುವುದು

ಧಾರ್ಮಿಕ ಲೋಕ ಬೆಳಗಿದ ಸೂರ್ಯ ಅಸ್ತಂಗತ Read More »

ಅಯೋಧ್ಯೆ ಮತ್ತು ಕಾರ್ಕಳಕ್ಕೆ ಕೊಂಡಿಯಾದ ಕೃಷ್ಣಶಿಲೆ

ಶಿಲ್ಪಿಗಳ ತವರೂರಿನಿಂದ ಪ್ರಭು ಶ್ರೀರಾಮನ ವಿಗ್ರಹಕ್ಕೆ ತೆರಳಿದ ಶಿಲಾಕಲ್ಲು ಕಾರ್ಕಳ : ಶಿಲ್ಪಕಲೆಗಳ ತವರೂರು ಎಂದೇ ಪ್ರಸಿದ್ಧಿಯಾಗಿರುವ ಕರಿಯಕಲ್ಲಿನ ನಾಡು ಕಾರ್ಕಳದ ಕೃಷ್ಣಶಿಲೆಗೆ ಅಯೋಧ್ಯೆಯ ರಾಮನಾಗುವ ಭಕ್ತಿಯೋಗ. ಕಾರ್ಕಳದ ಶಿಲಾಕಲ್ಲಿನಿಂದ ಅಯೋಧ್ಯೆಯಲ್ಲಿ ರಾಮಲಲ್ಲಾನ ವಿಗ್ರಹ ರೂಪ ಪಡೆಯುವುದರೊಂದಿಗೆ ಭಾರತದ ಇತಿಹಾಸದಲ್ಲಿ ಕಾರ್ಕಳದ ಹೆಸರು ಅಜರಾಮರವಾಗಿ ಉಳಿಯಲಿದೆ. 2020 ಆಗಸ್ಟ್‌ 5 ರಂದು ಪ್ರಧಾನಿ ನರೇಂದ್ರ ಮೋದಿಯಿಂದ ಶಂಕುಸ್ಥಾಪನೆಯಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭರದಿಂದ ನಿರ್ಮಾಣ ಆಗುತ್ತಿರುವ ಪ್ರಭು ಶ್ರೀ ರಾಮಚಂದ್ರರ ಭವ್ಯ ದೇಗುಲದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾನ ಮೂರ್ತಿಗೆ

ಅಯೋಧ್ಯೆ ಮತ್ತು ಕಾರ್ಕಳಕ್ಕೆ ಕೊಂಡಿಯಾದ ಕೃಷ್ಣಶಿಲೆ Read More »

ಐಟಿ, ಇ.ಡಿ. ದಾಳಿಗೆ ದೇವೆ ಗೌಡ, ಕುಮಾರ ಸ್ವಾಮಿ ಕಾರಣ : ಡಿಕೆಶಿ ಆರೋಪ

ದೇವೆ ಗೌಡರ ಕುಟುಂಬ ಆಸ್ತಿ ಮಾಡಿಲ್ವಾ ಎಂದು ಪ್ರಶ್ನೆ ಬೆಂಗಳೂರು : ನನ್ನ ಮೇಲೆ ಐಟಿ, ಇ.ಡಿ. ದಾಳಿ ನಡೆಯಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾರಣ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಡಿಕೆಶಿ, ದೇವೇಗೌಡ ಮತ್ತು ಕುಮಾರಸ್ವಾಮಿ ಹಣ, ಆಸ್ತಿ ಮಾಡಿಲ್ವಾ?ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್‌ ಪಕ್ಷ. ಇವೆಲ್ಲಾ ಅವರಿಗೆ ನೆನಪಾಗುತ್ತಿಲ್ಲ. ಧರ್ಮಸಿಂಗ್‌ ಮುಖ್ಯಮಂತ್ರಿ ಆಗಿದ್ದಾಗ ನನ್ನನ್ನು ಸಂಪುಟದಿಂದ ಹೊರಗಿಡಲು ಜೆಡಿಎಸ್‌ ವರಿಷ್ಠರೇ ಕಾರಣ.

ಐಟಿ, ಇ.ಡಿ. ದಾಳಿಗೆ ದೇವೆ ಗೌಡ, ಕುಮಾರ ಸ್ವಾಮಿ ಕಾರಣ : ಡಿಕೆಶಿ ಆರೋಪ Read More »

ವಿದ್ಯಾರ್ಥಿಗಳ ಹಿತದೃಷಿಯಿಂದ

ನಮ್ಮ ಪ್ರತಿಭಟನೆ ಹಕ್ಕುಗಳಿಗಾಗಿ ಇರಬೇಕೆ ಹೊರತು – ವಿದ್ಯಾರ್ಥಿಗಳ ವಿರುದ್ಧ ಅಲ್ಲ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರೇ ನಮ್ಮ ನಡೆ ಸರಿಯೇ? ಪ್ರತಿಭಟನೆ, ಹೋರಾಟ ಸಂವಿಧಾನ ನೀಡಿರುವ ಹಕ್ಕು. ಹಾಗಾಗಿ ಮುಷ್ಕರ ತಪ್ಪಲ್ಲ. ಆದರೆ ಕೊರೋನ ಮಹಾಮಾರಿಯಿಂದ ಹಳಿತಪ್ಪಿದ ಶಿಕ್ಷಣದಿಂದ ವಂಚಿತರಾಗಿರುವ ಅದೆಷ್ಟೋ ವಿದ್ಯಾರ್ಥಿಗಳು ಒಂದು ಹಂತದಲ್ಲಿ ಇದೀಗ ಕಲಿಕಾಕ್ರಮಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಕಲಿಕಾಚೇತರಿಕೆಯಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳು ಬೆಳವಣಿಗೆಯಲ್ಲಿದ್ದಾರೆ. ನಮ್ಮ ಪ್ರತಿಭಟನೆ ಸರಕಾರಕ್ಕೆ ಹಕ್ಕುಗಳಿಗಾಗಿ ಇರಬೇಕೆ ಹೊರತು, ವಿದ್ಯಾರ್ಥಿಗಳ ವಿರುದ್ಧ ಅಲ್ಲ. ಮುಖ್ಯವಾಗಿ ಇದೀಗ ಪ್ರಥಮ

ವಿದ್ಯಾರ್ಥಿಗಳ ಹಿತದೃಷಿಯಿಂದ Read More »

ದಾರಿ ದೀಪ : ತಾಳ್ಮೆ ಇದ್ದರೆ ಗೆದ್ದೆ – ಇಲ್ಲದಿದ್ದರೆ ಬಿದ್ದೆ

ಜಗತ್ತಿನ ಅತೀ ದೊಡ್ಡ ಪ್ರಾರ್ಥನೆ ತಾಳ್ಮೆ ನಮ್ಮ ಜೀವನ ಅವಸರದ ಹೆಜ್ಜೆಯ ಮೇಲೆ ಸಾಗುತ್ತಿದೆ. ಇಂದಿನ ದಾರಿಯಲ್ಲಿ ನರನಾಡಿಗಳಲ್ಲಿನ ಗಡಿಬಿಡಿಯ ತಕಧಿಮಿತ ಹೇಳತೀರದು. ಪರೀಕ್ಷೆ ಬರೆದವನಿಗೆ ಬೇಗ ಅಂಕ ಬರಬೇಕೆಂಬ ನಿರೀಕ್ಷೆ, ಪಾಠ ಮಾಡುವ ಶಿಕ್ಷಕನಿಗೆ ಒಮ್ಮೆ ಪಾಠ ಮುಗಿಸಿ ಬಿಡುವ ಧಾವಂತ. ಬಂಡವಾಳ ಹೂಡಿಕೆ ಮಾಡಿ ಕಂಪನಿ ನಿರ್ಮಾಣ ಮಾಡಿದವನಿಗೆ ಕಡಿಮೆ ವರ್ಷದಲ್ಲಿ ಅತೀ ಹೆಚ್ಚು ಲಾಭ ಬರಬೇಕೆಂಬ ಹೆಬ್ಬಯಕೆ. ಬ್ಯಾಂಕಿನಲ್ಲಿ ಉಳಿತಾಯ ಮಾಡಿದವನಿಗೆ ಲಾಭಾಂಶ ತ್ವರಿತಗತಿಯಲ್ಲಿ ದೊರಕಲೆಂಬ ಕನವರಿಕೆ. ಮನೆ ಕಟ್ಟಲು ಇಳಿದರೆ ಮನೆ

ದಾರಿ ದೀಪ : ತಾಳ್ಮೆ ಇದ್ದರೆ ಗೆದ್ದೆ – ಇಲ್ಲದಿದ್ದರೆ ಬಿದ್ದೆ Read More »

error: Content is protected !!
Scroll to Top