• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕ್ರೀಡೆ

ಡ್ರೀಮ್‌ 11 ತೆಕ್ಕೆಗೆ ಐಪಿಎಲ್‌ ಪ್ರಾಯೋಜಕತ್ವ

ಮುಂಬಯಿ, ಆ. 18: ವಿವೊ ನಿರ್ಗಮನದಿಂದ ತೆರವಾಗಿದ್ದ ಐಪಿಎಲ್‌ ಟೈಟಲ್‌ ಪ್ರಾಯೋಜಕತ್ವ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಭಾರತೀಯ ಮೂಲದ್ದೇ ಆದ ಡ್ರೀಮ್‌ 11 ಎಂಬ ಕಂಪೆನಿಯ ತೆಕ್ಕೆಗೆ ಬಿದ್ದಿದೆ ಪ್ರಾಯೋಜಕತ್ವದ ಅವಕಾಶ. ಡ್ರೀಮ್‌ 11 ಕ್ರೀಡಾಕ್ಷೇತ್ರದಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಕಂಪನಿ. ಕ್ರಿಕೆಟ್‌, ಕಬಡ್ಡಿ, ಫುಟ್ಭಾಲ್‌ ಮತ್ತು ಬಾಸ್ಕಟ್‌ ಬಾಲ್‌ ಆಟಗಳನ್ನು ಪ್ರೋತ್ಸಾಹಿಸುತ್ತಿದೆ. ಎಂ.ಎಸ್.ಧೋನಿ ಬ್ರಾಂಟ್‌ ಅಂಬಾಸಡರ್‌ ಆಗಿರುವ ಈ ಕಂಪನಿಯ ಪ್ರಧಾನ ಕಚೇರಿ ಮುಂಬಯಿಯಲ್ಲಿದೆ.   ಡ್ರೀಮ್ 11 ಈ ಬಾರಿ ರೂ.222 ಕೋಟಿ […]

ಡ್ರೀಮ್‌ 11 ತೆಕ್ಕೆಗೆ ಐಪಿಎಲ್‌ ಪ್ರಾಯೋಜಕತ್ವ Read More »

ಮೊದಲ ರನ್‌ ಔಟ್ ಗೂ ಕೊನೆಯ ರನ್‌ ಔಟ್‌ಗೂ  ನಡುವೆ ಎನಿತು ಅಂತರ…

ಕಳೆದ ವರ್ಷ ಜು.9ರಂದು ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವೆ  ಓವಲ್‌ನಲ್ಲಿ  ನಡೆದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ಧೋನಿ ಔಟ್‌ ಆದ ಸನ್ನಿವೇಶವನ್ನೊಮ್ಮೆ  ಸ್ಮೃತಿಗೆ ತಂದುಕೊಳ್ಳಿ.ಮಾರ್ಟಿನ್‌ ಗಪ್ಟಿಲ್‌ ಎಸೆದ ಚೆಂಡಿಗೆ ರನ್‌ ಔಟ್‌ ಆಗಿ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಧೋನಿ ಪೆವಿಲಿಯನ್‌ ಗೆ ಹೋದಾಗ  ಶತಕೋಟಿ ಭಾರತೀಯರ ಗೆಲುವಿನ ಆಸೆಯೂ ಕಮರಿ ಹೋಗಿತ್ತು. ಅಲ್ಲಿಗೆ ಭಾರತದ ವಿಶ್ವಕಪ್‌ ಅಭಿಯಾನವೂ ಮುಗಿದಿತ್ತು. ಅದರೆ ಯಾರೂ ಧೋನಿಯನ್ನು ಬ್ಲೂ ಜೆರ್ಸಿಯಲ್ಲಿ ಕೊನೆಯದಾಗಿ ನೋಡುತ್ತಿರುವ ಕ್ಷಣವೂ ಇದೇ ಎಂದು ಕನಸು

ಮೊದಲ ರನ್‌ ಔಟ್ ಗೂ ಕೊನೆಯ ರನ್‌ ಔಟ್‌ಗೂ  ನಡುವೆ ಎನಿತು ಅಂತರ… Read More »

ಇಂದಿನ ಐಕಾನ್…  ಭಾರತದ ಜಿಮ್ನಾಸ್ಟಿಕ್ ಮಿರಾಕಲ್ ದೀಪಾ ಕರ್ಮಾಕರ್

ಐದು ಅಡಿಗೂ ಒಂದಿಂಚು ಕಡಿಮೆ ಎತ್ತರವಿರುವ ಆ ಪುಟ್ಟ ಹುಡುಗಿಯ ಪುಟ್ಟ ದೇಹದಲ್ಲಿ ಎಷ್ಟೊಂದು ಎನರ್ಜಿ ಇದೆ  ಎಂದು ಗೊತ್ತಾಗಬೇಕಾದರೆ ಆಕೆ ಜಿಮ್ನ್ಯಾಸ್ಟಿಕ್ ಕಣಕ್ಕೆ ಬರಬೇಕು.  ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಮತ್ತು ಪದಕವನ್ನು ಗೆದ್ದ ಮೊದಲ ಮಹಿಳಾ ಜಿಮ್ನ್ಯಾಸ್ಟಿಕ್ ಪಟು ಎಂಬ ಕೀರ್ತಿ ಆಕೆಗೆ ಈಗಾಗಲೇ ದೊರೆತಿದೆ. ಆಕೆ ನಮ್ಮ ಇಂದಿನ ಐಕಾನ್ ದೀಪಾ ಕರ್ಮಾಕರ್. ಇಂದು ಆಕೆಗೆ 27ನೆಯ ಹುಟ್ಟು ಹಬ್ಬ! ಭಾರತದ ಈಶಾನ್ಯ ರಾಜ್ಯಗಳಲ್ಲಿ ಅತೀ  ಸುಂದರವಾದ ಸಿಕ್ಕಿಂ ಅವಳ ರಾಜ್ಯ. ಆಕೆ

ಇಂದಿನ ಐಕಾನ್…  ಭಾರತದ ಜಿಮ್ನಾಸ್ಟಿಕ್ ಮಿರಾಕಲ್ ದೀಪಾ ಕರ್ಮಾಕರ್ Read More »

ಯಾರಾಗಬಹುದು ಬಿಸಿಸಿಐ ಪ್ರಾಯೋಜಕರು?

–ಟೈಟಲ್‌ ಫ್ರಾಂಚೈಸಿಗಾಗಿ ನಡೆಯುತ್ತಿದೆ ದಿಗ್ಗಜ ಕಂಪನಿಗಳ ನಡುವೆ ಪೈಪೋಟಿ ಗಲ್ಫ್‌ ದೇಶದಲ್ಲಿ ಈ ಸಲ ನಡೆಯುವ  ಐಪಿಎಲ್ ಕೂಟದ ಪ್ರಾಯೋಜಕರು ಯಾರು? ಕ್ರಿಕೆಟ್‌ ಅಭಿಮಾನಿಗಳ ತಲೆತಿನ್ನುತ್ತಿರುವ  ಈ ಪ್ರಶ್ನೆ ಬಗ್ಗೆ ಬಿಸಿಸಿಐಯೂ ತಲೆ ಕೆಡಿಸಿಕೊಂಡಿದೆ. ಐಪಿಎಲ್‌  ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಬಿಸಿಸಿಐ ಪಾಲಿಗೆ  ಇದೊಂದು ಹೊಸ ಸವಾಲಾಗಿ ಪರಿಣಮಿಸಿದೆ. ಲಡಾಖ್‌ ಗಡಿಯಲ್ಲಿ ಚೀನ ಕಿರಿಕ್‌ ತೆಗೆದು ರಂಪಾಟ ಮಾಡಿದ ಬಳಿಕ ಚೀನ ಉತ್ಪನ್ನಗಳನ್ನು ನಿಷೇಧಿಸಬೇಕೆಂಬ ಕೂಗು ಮುಗಿಲು ಮುಟ್ಟಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಪ್ರಾಯೋಜಕರಾಗಿರುವ ಚೀನದ ವಿವೊ

ಯಾರಾಗಬಹುದು ಬಿಸಿಸಿಐ ಪ್ರಾಯೋಜಕರು? Read More »

ಐಪಿಎಲ್‌ನಿಂದ ವಿವೊ ಪ್ರಾಯೋಜಕತ್ವ ಕೈಬಿಡಲು ಸಂಘ ಪರಿವಾರ ಒತ್ತಾಯ

ದಿಲ್ಲಿ, ಆ.4 : ಈ ವರ್ಷದ ಐಪಿಎಲ್‌ ಆವೃತ್ತಿಯನ್ನು ಯುಎಇಯಲ್ಲಿ ನಡೆಸಲು ಬಿಸಿಸಿಐ ತಯಾರಿ ನಡೆಸುತ್ತಿರುವಂತೆಯೇ ಕೂಟದ ಪ್ರಾಯೋಜಕತ್ವವನ್ನು ಚೀನದ ಕಂಪೆನಿಯೊಂದಕ್ಕೆ ವಹಿಸಿರುವುದನ್ನು ಸಂಘ ಪರಿವಾರಕ್ಕೆ ಸೇರಿದ ಸಂಘಟನೆಯೊಂದು  ಬಲವಾಗಿ ಆಕ್ಷೇಪಿಸಿದೆ. ಚೀನದ ವಿವೊ ಮೊಬೈಲ್‌ ಕಂಪನಿ ಐಪಿಎಲ್‌ ಕೂಟವನ್ನು ಪ್ರಾಯೋಜಿಸುತ್ತಿದೆ.ಭಾರತ ಮತ್ತು ಚೀನದ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆರ್‌ ಎಸ್‌ ಎಸ್‌ ಅಂಗ ಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್‌ ವಿವೊ ಕಂಪನಿಯನ್ನು ಪ್ರಾಯೋಜಕತ್ವದಿಂದ ಹೊರಗಿಡಬೇಕೆಂದು ಆಗ್ರಹಿಸಿಸದೆ. ಲಡಾಖ್‌ ಗಡಿಯಲ್ಲಿ ಚೀನ ಮಾಡಿದ ರಂಪಾಟದ ಬಳಿಕವೂ

ಐಪಿಎಲ್‌ನಿಂದ ವಿವೊ ಪ್ರಾಯೋಜಕತ್ವ ಕೈಬಿಡಲು ಸಂಘ ಪರಿವಾರ ಒತ್ತಾಯ Read More »

ವನಿತೆಯರಿಗೂ ನಡೆಯಲಿದೆ ಐಪಿಎಲ್

–ನವಂಬರ್‌ ನಲ್ಲಿ ನಡೆಯುವ ಸಾಧ್ಯತೆ ದಿಲ್ಲಿ, ಆ. 2 : ಬಿಸಿಸಿಐ  ಪುರುಷರ ಐಪಿಲ್ ಕ್ರಿಕೆಟ್ ಲೀಗ್ ನಂತೆಯೇ ವನಿತೆಯರ  ಐಪಿಎಲ್ ಟೂರ್ನಿಯನ್ನೂ ಕೂಡ ಆಯೋಜನೆ ಮಾಡಲಿದೆ. ಈ ವಿಚಾರವನ್ನು ಸ್ವತಃ   ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಗಂಗೂಲಿ  ಮಹಿಳಾ ಐಪಿಎಲ್ ಅಥವಾ ಅದೇ ರೀತಿಯ ಚಾಲೆಂಜರ್ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧವಾಗಿದೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಶೀಘ್ರದಲ್ಲೇ ಮಹಿಳಾ ಐಪಿಎಲ್ ಟೂರ್ನಿಯ ಕುರಿತು ವೇಳಾಪಟ್ಟಿ ಯೋಜಿಸುತ್ತೇವೆ ಎಂದು

ವನಿತೆಯರಿಗೂ ನಡೆಯಲಿದೆ ಐಪಿಎಲ್ Read More »

ಸೆ.19ರಿಂದ ಐಪಿಎಲ್‌ ಕೂಟ –ನ.8ಕ್ಕೆ ಫೈನಲ್‌

ದಿಲ್ಲಿ:ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳು  ಒಂದೊಂದಾಗಿ ಶುರುವಾಗುತ್ತಿವೆ.ಇದೀಗ ಐಪಿಎಲ್‌ ಸರದಿ. ಗಲ್ಫ್‌ ದೇಶದಲ್ಲಿ ಈ ಸಲದ ಐಪಿಎಲ್‌ ಕೂಟಗಳು  ನಡೆಯಲಿವೆ.ಪೋರ್ಣ ಪ್ರಮಾಣದ ಐಪಿಎಲ್‌ ಕೂಟವನ್ನೇ ನಡೆಸುವುದಾಗಿ ಹೇಳಿದ್ದ ಬಿಸಿಸಿಐ ಇದೀಗ  ಕೂಟದ ದಿನಾಂಕವನ್ನು ಘೋಷಿಸಿ ಕ್ರಿಕೆಟ್‌ ಪ್ರೇಮಿಗಳಲ್ಲಿ ಪುಳಕವುಂಟು ಮಾಡಿದೆ.    ಇಂಡಿಯನ್ ಪ್ರೀಮಿಯರ್ ಲೀಗ್‌ನ 2020 ಆವೃತ್ತಿಯು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ ಮತ್ತು ಫೈನಲ್ ನವೆಂಬರ್ 8 ರಂದು ನಡೆಯಲಿದೆ. ಈ ಪಂದ್ಯಾವಳಿ ಯುಎಇಯಲ್ಲಿ ನಡೆಯಲಿದ್ದು, ಭಾರತ ಸರ್ಕಾರದಿಂದ ಅನುಮತಿ ಬಾಕಿ ಉಳಿದಿದೆ. ಎಮಿರೇಟ್ಸ್

ಸೆ.19ರಿಂದ ಐಪಿಎಲ್‌ ಕೂಟ –ನ.8ಕ್ಕೆ ಫೈನಲ್‌ Read More »

ಕೊರೊನಾ ನಡುವೆಯೂ ಈ ಸಲ ಪೂರ್ಣ ಪ್ರಮಾಣದ ಐಪಿಎಲ್‌

ಮುಂಬಯಿ :ಅಂತೂ ಇಂತೂ ಈ ಸಲ ಐಪಿಎಲ್‌ ನಡೆಯುವುದು ಖಾತರಿಯಾಗಿದೆ. ಆದರೆ ಅದರ ಸ್ವರೂಪ ಗೇಗಿರಬಹುದು ಎಂಬ ಅಂದಾಜು ಇನ್ನೂ ಯಾರಿಗೂ ಇಲ್ಲ. ಫುಲ್ ಮ್ಯಾಚ್ ಇರುತ್ತಾ? ಅಥವಾ ಸಮಯದ ಅಭಾವದ ಕಾರಣ ಪಂದ್ಯಗಳನ್ನು ಕಡಿತ ಮಾಡಲಾಗುತ್ತಾ? ಇತ್ಯಾದಿ ಅನುಮಾನಗಳು ಅಭಿಮಾನಿಗಳಲ್ಲಿದೆ. ಇದಕ್ಕೆ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಉತ್ತರಿಸಿದ್ದಾರೆ. ಈ ಬಾರಿ ಐಪಿಎಲ್ ಸಂಪೂರ್ಣ ಪಂದ್ಯಗಳು ನಡೆಯಲಿವೆ. ಒಟ್ಟಾರೆ 60 ಪಂದ್ಯಗಳು ನಡೆಯಲಿವೆ. ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಮೈದಾನಕ್ಕೆ ಪ್ರವೇಶ  ಸಿಗುವ ಸಾಧ್ಯತೆ ಕಡಿಮೆ. ಆದರೆ

ಕೊರೊನಾ ನಡುವೆಯೂ ಈ ಸಲ ಪೂರ್ಣ ಪ್ರಮಾಣದ ಐಪಿಎಲ್‌ Read More »

2020ರಲ್ಲಿ ಇಲ್ಲ 20-20 ವಿಶ್ವಕಪ್‌

ದುಬೈ: ಕೋವಿಡ್​ 19ನಿಂದಾಗಿ ಐಸಿಸಿ ಟಿ20 ವಿಶ್ವಕಪ್ 2020 ಟೂರ್ನಿಯನ್ನು ಮುಂದೂಡಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಪ್ರಕಟಿಸಿದೆ. ಈ ಪಂದ್ಯಾವಳಿ ಈ ವರ್ಷ ಅಕ್ಟೋಬರ್ 18 ರಿಂದ ನವೆಂಬರ್ 15ರ ನಡುವೆ ಆಸ್ಟ್ರೇಲಿಯಾದಲ್ಲಿ ನತೆಯಬೇಕಿತ್ತು. ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಈ ಟೂರ್ನಿಯನ್ನು ಕೋವಿಡ್​ 19 ಹಾವಳಿಯಿಂದಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಐಸಿಸಿ ಘೋಷಿಸಿದೆ. ಇದೇ ವೇಳೆ ಭಾರತದಲ್ಲಿ ಆಡಲಿರುವ 2023ರ ವಿಶ್ವಕಪ್ ಸೇರಿದಂತೆ ಮುಂದೆ ಬರುವ ಮೂರು ವಿಶ್ವಕಪ್​ಗಳ ಪರಿಷ್ಕೃತ ದಿನಾಂಕವನ್ನು ಸಹ ಐಸಿಸಿ ಬಹಿರಂಗಪಡಿಸಿದೆ.

2020ರಲ್ಲಿ ಇಲ್ಲ 20-20 ವಿಶ್ವಕಪ್‌ Read More »

ಜೆರ್ಸಿಯಲ್ಲಿ ವೈದ್ಯರ ಹೆಸರು –ಕೊರೊನಾ ವಾರಿಯರ್ಸ್ ಗೆ ಇಂಗ್ಲಂಡ್‌ ಕ್ರಿಕೆಟಿಗರ ವಿಶಿಷ್ಟ ಗೌರವ

ಲಂಡನ್: ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಲಿಳಿದಿರುವ ಇಂಗ್ಲೆಂಡ್ ಕ್ರಿಕೆಟಿಗರು ತಮ್ಮ ಜೆರ್ಸಿಯಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರ ಹೆಸರು ಬರೆಯಿಸಿಕೊಂಡು ಗೌರವ ಸಲ್ಲಿಸುತ್ತಿದ್ದಾರೆ. ಈ ವೇಳೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಜೆರ್ಸಿಯಲ್ಲಿ ಭಾರತೀಯ ಮೂಲದ ವೈದ್ಯ ಡಾ. ವಿಕಾಸ್ ಕುಮಾರ್ ಎಂಬವರ ಹೆಸರು ಇರುವುದನ್ನು ಅಭಿಮಾನಿಗಳು ಪತ್ತೆ ಮಾಡಿದ್ದಾರೆ. ಅರ್ಲಿಂಗ್ಟನ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ವಿಕಾಸ್ ಕುಮಾರ್ ದೆಹಲಿ ಮೂಲದವರು. ಭಾರತೀಯ ವೈದ್ಯನಿಗೆ ಇಂಗ್ಲೆಂಡ್ ನಾಯಕ ಗೌರವ

ಜೆರ್ಸಿಯಲ್ಲಿ ವೈದ್ಯರ ಹೆಸರು –ಕೊರೊನಾ ವಾರಿಯರ್ಸ್ ಗೆ ಇಂಗ್ಲಂಡ್‌ ಕ್ರಿಕೆಟಿಗರ ವಿಶಿಷ್ಟ ಗೌರವ Read More »

error: Content is protected !!
Scroll to Top