• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕಾರ್ಕಳ ಸುದ್ದಿ

ಎ. 22 : ಕೌಡೂರು ಬೆಜಲಾಡಿ ಬ್ರಹ್ಮಸ್ಥಾನದಲ್ಲಿ ಬ್ರಹ್ಮಮಂಡಲೋತ್ಸವ

ಉಡುಪಿ : ಕೌಡೂರು ಬೆಜಲಾಡಿ ಬ್ರಹ್ಮಸ್ಥಾನದಲ್ಲಿ ಏ. 22ರ ಬುಧವಾರದಂದು ನಾಗಬ್ರಹ್ಮ ದೇವರಿಗೆ ಹಾಲಿಟ್ಟು ಸೇವೆ ಹಾಗೂ ಬ್ರಹ್ಮಮಂಡಲೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ​ಬೆಳಿಗ್ಗೆ 8 ಗಂಟೆಯಿಂದ ಪಂಚಗವ್ಯ, ಪುಣ್ಯಾಹವಾಚನ, ಪವಮಾನ ಹೋಮ, ಕೂಷ್ಮಾಂಡ ಯಾಗ, ತಲಹೋಮ ಹಾಗೂ ಪ್ರಾಯಶ್ಚಿತ್ತ ಹೋಮ ನಡೆಯಲಿವೆ. ನಾಗಬ್ರಹ್ಮ ದೇವರ ಸಾನಿಧ್ಯ ವೃದ್ಧಿಗೋಸ್ಕರ ಪಂಚ ವಿಂಶತಿ ಕಲಶಾಧಿವಾಸ, ಕಲಾಸಾನಿಧ್ಯ ಪ್ರಧಾನ ಹೋಮ, ಆಶ್ಲೇಷಾ ದಾನ, ವಟುಬ್ರಾಹ್ಮಣ ಹಾಗೂ ಸುಹಾಸಿನಿ ಪೂಜೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ ಮತ್ತು […]

ಎ. 22 : ಕೌಡೂರು ಬೆಜಲಾಡಿ ಬ್ರಹ್ಮಸ್ಥಾನದಲ್ಲಿ ಬ್ರಹ್ಮಮಂಡಲೋತ್ಸವ Read More »

ಮದ್ಯಪಾನದ ವ್ಯಸನಿ ಆತ್ಮಹತ್ಯೆ

ಅಜೆಕಾರು: ಅತಿಯಾದ ಮದ್ಯಪಾನದ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ವೃದ್ಧರೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮರ್ಣೆ ಗ್ರಾಮದ ಕುಂಟಿನಿ ಎಂಬಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಆನಂದ ಸೆರ್ವೆಗಾರ್ (65) ಮೃತಪಟ್ಟವರು. ಇವರು ಕಳೆದ 15 ವರ್ಷಗಳಿಂದ ಮರ್ಣೆ ಗ್ರಾಮದ ವಸಂತ ಶೆಟ್ಟಿ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.​ಆನಂದ ಅವರು ವಿಪರೀತ ಮದ್ಯಪಾನದ ಚಟ ಹೊಂದಿದ್ದರು.ಏಪ್ರಿಲ್ 19ರ ರಾತ್ರಿ ಮಧ್ಯಾವಧಿಯಲ್ಲಿ ಮನೆಯ ಮುಂಭಾಗದ ಮಾವಿನ ಮರದ ಕೊಂಬೆಗೆ ತಮ್ಮ ಪಂಚೆಯಿಂದ (ವೇಸ್ಟಿ)

ಮದ್ಯಪಾನದ ವ್ಯಸನಿ ಆತ್ಮಹತ್ಯೆ Read More »

ಕಾರ್ಮಿಕನ ಅಸಹಜ ಸಾವು

ಕಾರ್ಕಳ: ತಾಲೂಕಿನ ಈದು ಗ್ರಾಮದ ನಿವಾಸಿಯೊಬ್ಬರು ಸೋಮವಾರ ಕೆಲಸದ ಮನೆಯಲ್ಲೇ ತೀವ್ರ ಅಸ್ವಸ್ಥಗೊಂಡು ಮೃತಪಟ್ಟ ಪಟ್ಟಿದ್ದಾರೆ.ಈದು ನಿವಾಸಿ ಆನಂದ (58) ಮೃತಪಟ್ಟವರು. ಕಳೆದ ಏಳು ತಿಂಗಳಿನಿಂದ ನಿಟ್ಟೆ ಗ್ರಾಮದ ಬಜಕಳ ಹೊಸಮನೆ ಗುತ್ತಿನ ಸುಮಿತ್ರಾ ಹೆಗ್ಡೆ ಎಂಬುವವರ ಮನೆಯಲ್ಲಿ ಇವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಎಂಟು ವರ್ಷಗಳಿಂದ ಅವರು ಕುಟುಂಬದಿಂದ ಪ್ರತ್ಯೇಕವಾಗಿ ವಾಸವಿದ್ದರು ಎಂದು ತಿಳಿದುಬಂದಿದೆ.​ಸೋಮವಾರ ಬೆಳಿಗ್ಗೆ 10:30ರ ಸುಮಾರಿಗೆ ಮಲಗಿದ್ದ ಆನಂದ ಅವರು ಎದ್ದಿರಲಿಲ್ಲ. ಸುಮಿತ್ರಾ ಹೆಗ್ಡೆ ಅವರು ಎಬ್ಬಿಸಲು ಹೋದಾಗ ಆನಂದ ಅವರು

ಕಾರ್ಮಿಕನ ಅಸಹಜ ಸಾವು Read More »

ಮಕ್ಕಳಿಗೆ ಧಾರ್ಮಿಕ ವಿಚಾರ ತಿಳಿಸಿಕೊಡುವ ಕಾರ್ಯವಾಗಲಿ – ಪೇಜಾವರ ಶ್ರೀ

ಹೆಬ್ರಿ : ಬಾಲ್ಯದಲ್ಲಿ ನೀಡಿದ ಸಂಸ್ಕಾರ, ಶಿಕ್ಷಣ ಭವಿಷ್ಯದಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಎಳವೆಯಲ್ಲೇ ಮಕ್ಕಳಿಗೆ ಧಾರ್ಮಿಕ ವಿಚಾರವನ್ನು ತಿಳಿಸಿಕೊಡುವ ಮೂಲಕ ಆದರ್ಶ ವ್ಯಕ್ತಿತ್ವ ತುಂಬುವ ಕಾರ್ಯವಾಗಬೇಕೆಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.ಅವರು ಎ. 21ರಂದು ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಶ್ರೀ ಪೇಜಾವರ ಮಠ, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು, ಶಿಬಿರ ಸಮಿತಿ ಹೆಬ್ರಿ ಸಹಯೋಗದಲ್ಲಿ ನಡೆಯುತ್ತಿರುವ ಧಾರ್ಮಿಕ ಶಿಕ್ಷಣ ಶಿಬಿರದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.ಗೋಶಾಲೆ ಟ್ರಸ್ಟ್ ನ ವಿದ್ವಾನ್

ಮಕ್ಕಳಿಗೆ ಧಾರ್ಮಿಕ ವಿಚಾರ ತಿಳಿಸಿಕೊಡುವ ಕಾರ್ಯವಾಗಲಿ – ಪೇಜಾವರ ಶ್ರೀ Read More »

ಕಾರ್ಕಳ ನಗರ ಠಾಣೆ ಎಎಸ್‌ಐ ಆಗಿ ಮೂರ್ತಿ ಪದೋನ್ನತಿ

ಕಾರ್ಕಳ : ಅಜೆಕಾರು ಪೊಲೀಸ್ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಮೂರ್ತಿ ಕೆ. ಅವರು ಪದೋನ್ನತಿ ಹೊಂದಿ ಕಾರ್ಕಳ ನಗರ ಠಾಣೆ ಎಎಸ್‌ಐ ಆಗಿ ಅಧಿಕಾರ ವಹಿಸಿದ್ದಾರೆ. 1996ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡಿರುವ ಮೂರ್ತಿ ಅವರು ಮಂಗಳೂರು, ಕಾರ್ಕಳ ಸೇರಿದಂತೆ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಕಾರ್ಕಳ ನಗರ ಠಾಣೆ ಎಎಸ್‌ಐ ಆಗಿ ಮೂರ್ತಿ ಪದೋನ್ನತಿ Read More »

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಪ್ರಗತಿಯ ಪಥದಲ್ಲಿ ಮೂರು ದಶಕಗಳ ಸಾರ್ಥಕ ಪಯಣ

1996ರ ಏಪ್ರಿಲ್‌ನಲ್ಲಿ ಪರಮಪೂಜ್ಯ ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ಮಂಗಲಾರ್ಪಣೆಗೊಂಡ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಇಂದು ಸಹಕಾರಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ. ಕಾರ್ಕಳದ ಜೋಡುರಸ್ತೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆ, ಪ್ರಸ್ತುತ ಎಂಟು ಶಾಖೆಗಳ ಮೂಲಕ ಜನಸೇವೆಯಲ್ಲಿ ನಿರಂತರವಾಗಿದೆ. ಈ ಪೈಕಿ ನಾಲ್ಕು ಶಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಿರುವುದು ಸಂಸ್ಥೆಯ ಭದ್ರತೆಗೆ ಸಾಕ್ಷಿಯಾಗಿದೆ.​ಮೂಲಸೌಕರ್ಯ ಮತ್ತು ಪ್ರಗತಿ:ಸಂಸ್ಥೆಯು ಮೂಲಸೌಕರ್ಯಕ್ಕೆ ಸದಾ ಆದ್ಯತೆ ನೀಡುತ್ತಾ ಬಂದಿದ್ದು, 2016ರಲ್ಲಿ ನಿರ್ಮಿಸಿದ 600 ಆಸನಗಳ ಸುಸಜ್ಜಿತ ಸಭಾಭವನವು

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಪ್ರಗತಿಯ ಪಥದಲ್ಲಿ ಮೂರು ದಶಕಗಳ ಸಾರ್ಥಕ ಪಯಣ Read More »

ಮಹಿಳಾ ಮೀಸಲಾತಿ ಹೆಸರಲ್ಲಿ ಬಿಜೆಪಿ ರಾಜಕೀಯ ನಾಟಕ: ಶುಭದ ರಾವ್ ಆಕ್ರೋಶ

ಕಾರ್ಕಳ: ಮಹಿಳಾ ಮೀಸಲಾತಿ ಮಸೂದೆಯ ಹಿಂದೆ ಬಿಜೆಪಿ ನಿಗೂಢ ರಾಜಕೀಯ ಕಾರ್ಯಸೂಚಿಯನ್ನು ಹೊಂದಿದೆ. ಕ್ಷೇತ್ರ ಪುನರ್ ವಿಂಗಡಣೆಯ ನೆಪದಲ್ಲಿ ಅಧಿಕಾರ ಹಿಡಿಯಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಮಹಿಳೆಯರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಟೀಕಿಸಿದ್ದಾರೆ.​ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2023 ರಲ್ಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡು, ರಾಷ್ಟ್ರಪತಿಗಳ ಅಂಕಿತ ಪಡೆದಿರುವ ಮಸೂದೆಯನ್ನು ಈವರೆಗೆ ಜಾರಿಗೊಳಿಸದೆ ಕಾಲಹರಣ ಮಾಡಲಾಗಿದೆ. ಈಗ ಪಂಚರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆ ತರಾತುರಿಯಲ್ಲಿ ಈ ವಿಷಯವನ್ನು

ಮಹಿಳಾ ಮೀಸಲಾತಿ ಹೆಸರಲ್ಲಿ ಬಿಜೆಪಿ ರಾಜಕೀಯ ನಾಟಕ: ಶುಭದ ರಾವ್ ಆಕ್ರೋಶ Read More »

ಕಾರ್ಕಳ: ಬೀಗ ಹಾಕಿದ ಮನೆಗೆ ಕನ್ನ; ಸ್ಕೂಟರ್ ಕಳವು

ಕಾರ್ಕಳ: ಇಲ್ಲಿನ ಕಸಬಾ ಗ್ರಾಮದ ಆನಂದ ನಗರದಲ್ಲಿ ಮನೆಯ ಬೀಗ ಮುರಿದ ಕಳ್ಳರು, ಮನೆಯೊಳಗೆ ಇಟ್ಟಿದ್ದ ದ್ವಿಚಕ್ರ ವಾಹನದ ಕೀಯನ್ನು ಬಳಸಿ ಹೊರಗೆ ನಿಲ್ಲಿಸಿದ್ದ ಸ್ಕೂಟರನ್ನು ಕಳವು ಮಾಡಿರುವ ಘಟನೆ ನಡೆದಿದೆ.ಘಟನೆಯ ವಿವರ:ಆನಂದ ನಗರದ ‘ಸ್ಟಾರ್ ಕೇಬಲ್ ನೆಟ್‌ವರ್ಕ್’ ಸಮೀಪದ ಕರಿಯಕಲ್ಲು ನಿವಾಸಿ ಹರೀಶ್ ಶೆಟ್ಟಿ (46) ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಉಜಿರೆಯಲ್ಲಿ ಕೆಲಸ ಮಾಡಿಕೊಂಡಿರುವ ಇವರು, ಏಪ್ರಿಲ್ 16ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ತೆರಳಿದ್ದರು. ಏಪ್ರಿಲ್ 19ರಂದು ಬೆಳಿಗ್ಗೆ ಸಂಬಂಧಿಕರು ಕರೆ

ಕಾರ್ಕಳ: ಬೀಗ ಹಾಕಿದ ಮನೆಗೆ ಕನ್ನ; ಸ್ಕೂಟರ್ ಕಳವು Read More »

ಸರಳ ಮೋಟರ್ಸ್ ಮಾಲಕ ಎಂ. ಕೆ. ರತ್ನಾಕರ್‌ ನಿಧನ

ಕಾರ್ಕಳ : ಸರಳ ಮೋಟಾರ್ಸ್‌ ಮಾಲಕ, ಕಾರ್ಕಳ ದಾನಶಾಲೆ ನಿವಾಸಿ ಎಂ.ಕೆ. ರತ್ನಾಕರ್‌ (82) ಎ. 19ರಂದು ನಿಧನ ಹೊಂದಿದರು. ಕಾರ್ಕಳದ ಗ್ರಾಮೀಣ ಪ್ರದೇಶಗಳಿಗೆ ಪ್ರಥಮವಾಗಿ ಬಸ್‌ ಸೇವೆ ಕಲ್ಪಿಸಿದ ರತ್ನಾಕರ್‌ ಅವರು ತನ್ನ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದಾಗಿ ಜನಾನುರಾಗಿಯಾಗಿದ್ದರು. ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭವೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸಾರ್ವಜನಿಕರು ಮೃತರ ಅಂತಿಮ ದರ್ಶನ ಪಡೆಯಲು ಕಾರ್ಕಳ ದಾನಶಾಲೆಯ ಮನೆಯಲ್ಲಿ ಬೆಳಿಗ್ಗೆ 10 ಗಂಟೆಯವರೆಗೆ ಅವಕಾಶವಿದ್ದು, ತದನಂತರ ಮರೋಡಿಯಲ್ಲಿ 1 ಗಂಟೆಗೆ ಅಂತ್ಯಕ್ರಿಯೆ

ಸರಳ ಮೋಟರ್ಸ್ ಮಾಲಕ ಎಂ. ಕೆ. ರತ್ನಾಕರ್‌ ನಿಧನ Read More »

ಸಿಬಿಎಸ್‌ಇ ಫಲಿತಾಂಶ – ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

ಕಾರ್ಕಳ : 2025–26ರ ಸಿಬಿಎಸ್‌ಇ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರವು ಸತತವಾಗಿ ಶೇ. 100 ಫಲಿತಾಂಶ ದಾಖಲಿಸಿಕೊಂಡು ಬಂದಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಮನಸ್ವಿ ಎಂ. ದೇವಾಡಿಗ 92.6% ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.ಅನನ್ಯ ನಾಯಕ್ 91.4% ಅಂಕ ಗಳಿಸುವುದರೊಂದಿಗೆ ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಸ್ವಪ್ನಿಲ್ ಶೆಟ್ಟಿ 91%, ಪರೀಕ್ಷಿತ್ ಬಿ. ಶೆಟ್ಟಿಗಾರ್ 90.8%, ವೃದ್ಧಿ ಪೈ 89.8%, ವಿಯೋನ್ ಶನಲ್ ಡಿ.

ಸಿಬಿಎಸ್‌ಇ ಫಲಿತಾಂಶ – ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ Read More »

error: Content is protected !!
Scroll to Top