ಫೆ. 16 -18 : ಶ್ರೀ ಸತ್ಯ ಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ತೃತೀಯ ವರ್ಷದ ವರ್ಧಂತ್ಯೋತ್ಸವ

ಕಾರ್ಕಳ : ಸಾರ್ವಜನಿಕ ಶ್ರೀ ಸತ್ಯ ಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಮಿತಿಯ ತೃತೀಯ ವರ್ಷದ ವರ್ಧಂತ್ಯೋತ್ಸವ ತ್ಸವ ಫೆ.16 ರಿಂದ 18 ರವರೆಗೆ ನಡೆಯಲಿದೆ.

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಕೆ. ಕಿಶೋರ್‌ ಶಾಂತಿ ಅವರ ನೇತೃತ್ವದಲ್ಲಿ ವೈದಿಕ ಕಾರ್ಯ ನೆರವೇರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಫೆ. 16 ರಂದು ಸಂಜೆ 6 ರಿಂದ ರಾತ್ರಿ ಗಂಟೆ 9 ರವರೆಗೆ ಸಮಿತಿಯ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9 ರಿಂದ ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರು ನಿರ್ದೇಶನದಲ್ಲಿ ನಮ್ಮ ಕಲಾವಿದರ್ ಬೆದ್ರ ಇವರಿಂದ ʼಕುಸಲ್ದ ಗೊಬ್ಬುʼ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮ
ಫೆ. 17 ರ ಗುರುವಾರ ಬೆಳಿಗ್ಗೆ 6.30 ರಿಂದ ದೈವಗಳ ಸಾನಿಧ್ಯದಲ್ಲಿ ಸ್ವಸ್ತಿ ಪುಣ್ಯಾಹ, 7.15 ರಿಂದ ತೋರಣ ಮುಹೂರ್ತ, 8.05ರಿಂದ ನಾಗದೇವರಿಗೆ ತನು ಪಂಚಾಮೃತ, 9.15 ಕ್ಕೆ ಗಣಹೋಮ, 10.5 ರಿಂದ ನವಕ ಕಲಶ, ಪ್ರಧಾನ ಹೋಮ, ದೈವಗಳಿಗೆ ಪರ್ವ ಪೂಜೆ, ಪ್ರಸನ್ನ ಪೂಜೆ, ರಾತ್ರಿ 9 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, 10ರಿಂದ ಸತ್ಯಸಾರಮಣಿ ಹಲೇರಾ ಪಂಜುರ್ಲಿ ದೈವಗಳಿಗೆ ಗಗ್ಗರ ಸೇವೆ ತದನಂತರ ಒಂಟಿಗುಳಿಗ, ಚಾಮುಂಡಿ ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆಯಲಿರುವುದು.

ಫೆ.18ರ ಶುಕ್ರವಾರ ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ, 9.30ರಿಂದ ಮಂತ್ರದೇವತೆ ದೈವದ ಗಗ್ಗರ ಸೇವೆ ನಂತರ ಮಹಾಕಾಳಿ ದೈವದ ಗಗ್ಗರ ಸೇವೆ ನಡೆಯಲಿರುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.





























































































































































































































error: Content is protected !!
Scroll to Top