ಜ. 16 : ಕೆರ್ವಾಶೆ ಹುರ್ಮಲಕಟ್ಟ ನಾಗಬ್ರಹ್ಮಸ್ಥಾನ ಪುನ: ಪ್ರತಿಷ್ಠೆ

ಕಾರ್ಕಳ : ಕೆರ್ವಾಶೆ ಹುರ್ಮಲಕಟ್ಟ ನಾಗಬ್ರಹ್ಮಸ್ಥಾನದಲ್ಲಿ ನವೀಕರಿಸಿರುವ ಸಪರಿವಾರ ಶ್ರೀ ನಾಗಬ್ರಹ್ಮಾದಿ ದೇವರುಗಳ ಪುನಃ ಪ್ರತಿಷ್ಠಾ ಪೂರ್ವಕ ಸಾನಿಧ್ಯ ಕಲಶಾಭಿಷೇಕ ಜ.16ರಂದು ಬೆಳಿಗ್ಗೆ ಬ್ರಹ್ಮಶ್ರೀ ಎಡಪದವು ಸುಬ್ರಹ್ಮಣ್ಯ ತಂತ್ರಿ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್‌ ಅವರ ನೇತೃತ್ವದಲ್ಲಿ ಜರುಗಲಿದೆ.
ಜ.16 ರ ಮುಂಜಾನೆ 5.30 ರಿಂದ ಪ್ರತಿಷ್ಠಾ ಕಲಶ, ಪ್ರತಿಷ್ಠಾ ಹೋಮ, ಬ್ರಹ್ಮಾದಿ ದೇವರ ಪ್ರತಿಷ್ಠಾವಿಧಿ, 6.54ಕ್ಕೆ ಪವಮಾನ ಹೋಮ, ಸಾನಿಧ್ಯ ಕಲಶಾಧಿಗಳ ಪ್ರತಿಷ್ಠಾ, ಪ್ರಧಾನ ಹೋಮಗಳು, ಪೂರ್ವಾಹ್ನ 11.50ಕ್ಕೆ ಪಂಚಾಮೃತ ಸಹಿತ ಅಭಿಷೇಕಗಳು, ಆಶ್ಲೇಷಾ ಬಲಿ, ಮಹಾಪೂಜಾ, ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ಜರುಗಲಿರುವುದು ಎಂದು ಕೆರ್ವಾಶೆ ಹುರ್ಮಲಕಟ್ಟ ನಾಗಬ್ರಹ್ಮಸ್ಥಾನ ಜೀರ್ಣೋದ್ಧಾರ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.





























































































































































































































error: Content is protected !!
Scroll to Top