ಮರ್ಣೆ ಗ್ರಾ.ಪಂ.ನಲ್ಲಿ ಹಕ್ಕುಪತ್ರ ವಿತರಣೆ

ಕಾರ್ಕಳ : ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲಾನುಭವಿಗಳಿಗೆ ಪಂಚಾಯತ್‌ ಸಭಾಭವನದಲ್ಲಿ ಜು. 31ರಂದು ಹಕ್ಕುಪತ್ರ ವಿತರಣೆ ನಡೆಯಿತು. ಶಾಸಕ ವಿ. ಸುನಿಲ್‌ ಕುಮಾರ್‌ ಅವರು 30 ಮಂದಿ ಫಲಾನುಭವಿಗೆ ಹಕ್ಕುಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು ಕಾರ್ಕಳ ತಾಲೂಕಿನಲ್ಲಿ ನಿವೇಶನ ರಹಿತರನ್ನು ಗುರುತಿಸಿ ಅಂಥಹ ಕುಟುಂಬಗಳಿಗೆ ನಿವೇಶನದೊಂದಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಜಿ.ಪಂ. ಸದಸ್ಯರಾದ ಉದಯ ಎಸ್. ಕೋಟ್ಯಾನ್, ಎ.ಪಿ.ಎಂ.ಸಿ. ಉಪಾಧ್ಯಕ್ಷ ರತ್ನಾಕರ ಅಮೀನ್, ಪ್ರಭಾರ ಉಪ ತಹಶೀಲ್ದಾರ್‌ ಮಂಜುನಾಥ ನಾಯಕ್, ಗ್ರಾ.ಪಂ. ಆಡಳಿತಾಧಿಕಾರಿ ಶ್ರೀನಿವಾಸ್, ಪಿಡಿಒ ತಿಲಕ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌತಮ್ ನಾಯಕ್ ಸ್ವಾಗತಿಸಿ, ತಾ.ಪಂ. ಉಪಾಧ್ಯಕ್ಷ ಹರೀಶ್ ನಾಯಕ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಗ್ರಾಮಕರಣಿಕರ ತಾರೇಶ್ ಫಲಾನುಭವಿಗಳ ಪಟ್ಟಿ ವಾಚಿಸಿದರು. ರಾಘವೇಂದ್ರ ಆಚಾರ್ಯ ನಿರೂಪಿಸಿ, ವಂದಿಸಿದರು. ಸಿಬ್ಬಂದಿಗಳಾದ ಉದಯ್, ಚಂದ್ರಶೇಖರ, ವಸಂತ, ರಿಯಾಜ್ ಸಹಕರಿಸಿದರು.

error: Content is protected !!
Scroll to Top