ದಿಲ್ಲಿ, ಆ.1 : ಮಕ್ಕಳಿಗೆ ಗುಣಮಟ್ಟದ ಉತ್ತು ಮೌಲಿಕ ಶಿಕ್ಷಣ ಫದಗಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಮುಖ ಹೆಜ್ಜೆಯಾಗಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಶ್ಲಾಘಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪುಟ ಅಂಗೀಕರಿಸಿರಿವುದಕ್ಕೆ ಹರ್ಷ ವ್ಯಕ್ತಪಡಿಸಿದ ಅವರು ವೈವಿಧ್ಯತೆ ಮತ್ತು ಸ್ಥಳೀಯ ಅಂಶಗಳನ್ನು, ಭಾರತದ ಶಾಸ್ತ್ರೀಯ ಭಾಷೆಗಳ ಮಹತ್ವವನ್ನು ಈ ನೀತಿ ಗುರುತಿಸಿದೆ. ಹೊಸ ನೀತಿಯಲ್ಲಿ ಮಾತೃಭಾಷೆ ಉತ್ತು ಬಹುಭಾಷಾ ಸಿದ್ಧಾಂತಕ್ಕೆ ಒತ್ತು ನೀಡಲಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.































