Author name: newskarkala desk

ಗೌತಮ್ ಜ್ಯೋತ್ಸ್ನಾಗೆ ಪಿಎಚ್‌ಡಿ ಪದವಿ

ಕಾರ್ಕಳ : ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿಯ ಹಳೆ ವಿದ್ಯಾರ್ಥಿ ಗೌತಮ್ ಜ್ಯೋತ್ಸ್ನಾ ಅವರು ಕುವೆಂಪು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಗೆ ಭಾಜನರಾಗಿರುತ್ತಾರೆ. ಕುವೆಂಪು ವಿವಿಯ ಪ್ರಾಧ್ಯಾಪಕ ಡಾ. ನಾಗ್ಯಾ ನಾಯ್ಕ್ ಬಿ. ಎಚ್. ಅವರ ಮಾರ್ಗದರ್ಶನದಲ್ಲಿ ಗೌತಮ್‌ ಅವರು ಮಂಡಿಸಿದ ನೋಶನ್ಸ್ ಆಫ್ ರಿಯಾಲಿಟಿ ಇನ್ ದ ಫೀಲ್ಡ್ ಆಫ್ ಸ್ಟಾನ್ಲಿಕ್ಯೂಬ್ರಿಕ್ (ಸ್ಟಾನ್ಲಿಕ್ಯೂಬ್ರಿಕ್‌ನ ಸಿನಿಮಾಗಳಲ್ಲಿ ವಾಸ್ತವದ ಬಿಂಬಗಳು) ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವ ವಿದ್ಯಾಲಯವು ಡಾಕ್ಟರೇಟ್‌ ಪದವಿ ಘೋಷಿಸಿದೆ. ಗೌತಮ್‌

ಗೌತಮ್ ಜ್ಯೋತ್ಸ್ನಾಗೆ ಪಿಎಚ್‌ಡಿ ಪದವಿ Read More »

ಆ. 5 : ಮಂಗಳೂರು 144 ಸೆಕ್ಷನ್ ಜಾರಿ

ಕಾರ್ಕಳ : ಆ. 5ರಂದು ರಾಮ ಮಂದಿರದ ಭೂಮಿ ಪೂಜೆ ಜರುಗುವ ಹಿನ್ನೆಲೆಯಲ್ಲಿ ಅಂದು ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ವಿಕಾಶ್ ಕುಮಾರ್ ನಿಷೇಧಾಜ್ಣೆ ಜಾರಿಗೊಳಿಸಿದ್ದು, ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಾಗಿದೆ.

ಆ. 5 : ಮಂಗಳೂರು 144 ಸೆಕ್ಷನ್ ಜಾರಿ Read More »

ಕೆರ್ವಾಶೆ : ಮಟ್ಕಾ ಅಡ್ಡೆಗೆ ದಾಳಿ

ಅಜೆಕಾರು : ಕೆರ್ವಾಶೆ ಪೇಟೆಯಲ್ಲಿನ ಫಾಸ್ಟ್‌ಫುಡ್‌ ಅಂಗಡಿಯೊಂದರ ಬಳಿ ಮಟ್ಕಾ ಜುಗಾರಿ ಆಟದಲ್ಲಿ ನಿರತನಾಗಿದ್ದ ಓರ್ವನನ್ನು ಅಜೆಕಾರು ಪೊಲೀಸರು ಆ. 3ರಂದು ವಶಕ್ಕೆ ಪಡೆದಿರುತ್ತಾರೆ. ಜುಗಾರಿ ನಡೆಯುತ್ತಿರುವ ಕುರಿತು ದೊರೆತ ಮಾಹಿತಿ ಮೇರೆಗೆ ಎಸ್‌ಐ ಸುದರ್ಶನ ದೊಡಮನಿ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿದ್ದ ಇಬ್ಬರು ಪರಾರಿಯಾಗಿದ್ದು, ಆರೋಪಿ ಪೂಂಜಾಂಜಿ ನೂರಾಲ್‌ಬೆಟ್ಟು ಪ್ರದೀಪ ಹೆಗ್ಡೆ (30)ನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತನಿಂದ 2260 ರೂ. ವಶಕ್ಕೆ ಪಡೆಯಲಾಗಿದ್ದು, ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರ್ವಾಶೆ : ಮಟ್ಕಾ ಅಡ್ಡೆಗೆ ದಾಳಿ Read More »

ನಂದಳಿಕೆ : ಕಾರು-ಲಾರಿಗೆ ಢಿಕ್ಕಿ

ಕಾರ್ಕಳ : ಕಾರ್ಕಳ ತಾಲೂಕು ನಂದಳಿಕೆ ಬಳಿಯಲ್ಲಿ ಕಾರೊಂದು ಲಾರಿಗೆ ಢಿಕ್ಕಿ ಹೊಡೆದ ಘಟನೆ ಆ. 2ರಂದು ಸಂಭವಿಸಿದೆ. ಕಾರ್ಕಳ ಕಡೆಯಿಂದ ಬೆಳ್ಮಣ್‌ ಕಡೆಗೆ ಸಾಗುತ್ತಿದ್ದ ಕಾರು (KA-19-MA-2963) ಲಾರಿಗೆ (KA-20-AA-4107) ಢಿಕ್ಕಿ ಹೊಡೆದಿದ್ದು, ಪರಿಣಾಮ ಲಾರಿಯ  ಮುಂಭಾಗ ಹಾಗೂ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು ಸಣ್ಣಪುಣ್ಣ ಗಾಯಗೊಂಡಿರುತ್ತಾರೆ ಎಂದು ತಿಳಿದುಬಂದಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಳಿಕೆ : ಕಾರು-ಲಾರಿಗೆ ಢಿಕ್ಕಿ Read More »

ನಿತ್ಯ ಭವಿಷ್ಯ: 04-08-2020

ಮೇಷ ಉದ್ಯೋಗದಲ್ಲಿ ಅನೇಕ ಅಡೆತಡೆಗಳು ಬರುತ್ತಲೇ ಇರುತ್ತವೆ. ಬದಲಾವಣೆ ಆದರೂ ಆಶ್ಚರ್ಯವಿಲ್ಲ. ಮೂಗಿನ ನೇರದಲ್ಲಿ ಸಿಟ್ಟು ಒಳ್ಳೆಯದಲ್ಲ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸ್ವಾಭಾವಿಕ. ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಲಿದ್ದೀರಿ. ವೃಷಭ ಉದ್ಯೋಗ ವ್ಯವಹಾರದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಆದಾಯ ಹೆಚ್ಚಾಗಲಿದೆ. ದೈವ ಬಲ ಸಾಧಾರಣವಾಗಿದ್ದು, ನಿಮ್ಮ ಕುಲದೇವರ ದರ್ಶನ ಮಾಡಿರಿ. ಈ ಮಧ್ಯೆ ಅಷ್ಟಮದ ಕೇತುವಿನ ಪ್ರತಿಕೂಲತೆಯಿಂದ ಆಗಾಗ ಆರೋಗ್ಯದ ಕಡೆಗೆ ಗಮನವಿರಲಿ. ಮಿಥುನ ಅಷ್ಟಮದಲ್ಲಿ ಶನಿ ಇರುವುದರಿಂದ ಆರೋಗ್ಯ ಆರ್ಥಿಕ ವಿಚಾರಗಳ ಬಗ್ಗೆ ನಾನಾ ರೀತಿಯ ಖರ್ಚುವೆಚ್ಚಗಳಿಂದ

ನಿತ್ಯ ಭವಿಷ್ಯ: 04-08-2020 Read More »

ಇಶಾ ಎಚ್‌. ಕುಂದರ್ ಗೆ ಸನ್ಮಾನ

ಕಾರ್ಕಳ : ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ. 96. 83 ಫಲಿತಾಂಶ ಪಡೆದ ಜ್ಞಾನಸುಧಾ ಶಿಕ್ಷಣ ಸಂ‍ಸ್ಥೆಯ ವಿದ್ಯಾರ್ಥಿನಿ ಇಶಾ ಎಚ್‌. ಕುಂದರ್ ಅವರನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸನ್ಮಾನಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್‌, ಕುಕ್ಕುಂದೂರು ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರಾಜೇಶ್‌ ರಾವ್‌, ಜ್ಯೋತಿ ರಮೇಶ್‌, ಮಾಜಿ ಸದಸ್ಯ ಯೋಗೀಶ್‌ ಸಾಲ್ಯಾನ್‌, ಪ್ರಸಾದ್‌ ಐಸಿರ, ಪ್ರಸನ್ನ, ಸ್ನೇಹೇಶ್‌ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತಂದೆ ಹರೀಶ್‌ ಕುಂದರ್‌,

ಇಶಾ ಎಚ್‌. ಕುಂದರ್ ಗೆ ಸನ್ಮಾನ Read More »

ರಶ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 50 ಸಾವಿರ ರೂ. ದೇಣಿಗೆ

ಕಾರ್ಕಳ : ರಶ್ಮಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ವಿಜೇತ ವಸತಿಯುತ ವಿಶೇಷ ಶಾಲೆಗೆ ರೂ. 50 ಸಾವಿರ ದೇಣಿಗೆ ನೀಡಲಾಯಿತು. ರಶ್ಮಿ ಚಾರಿಟೇಬಲ್‌ ಅಧ್ಯಕ್ಷೆ ಸಾವಿತ್ರಿ ರಾಜು, ಟ್ರಸ್ಟ್‌ ನಿರ್ದೇಶಕ, ಉದ್ಯಮಿ ಡಿ. ಆರ್. ರಾಜು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರಿಗೆ ಹಸ್ತಾಂತರಿಸಿದರು. ಕರುಣಾಕರ್ ಶೆಟ್ಟಿ ದಾವಣಗೆರೆ, ಬಾಲಕೃಷ್ಣ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಶ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 50 ಸಾವಿರ ರೂ. ದೇಣಿಗೆ Read More »

ಕರಿಯಕಲ್ಲು ರುದ್ರಭೂಮಿಯಲ್ಲಿ ಶ್ರಮದಾನ

ಕಾರ್ಕಳ : ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರ ಭೂಮಿಗೆ ಸ್ಥಳೀಯರು ಸುಣ್ಣಬಣ್ಣ ಬಳಿಯುವ ಕಾರ್ಯ ಮಾಡಿದರು. ಪುರಸಭೆ ಮಾಜಿ ಸದಸ್ಯ ಪ್ರಕಾಶ್‌ ರಾವ್‌ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಜ್ಞಾನದೇವ, ದಾಮೋದರ್‌ ರಾವ್‌ ಜೋಡುಕಟ್ಟೆ, ಸುರೇಶ್‌ ಕುಲಾಲ್‌, ರಾಜೇಶ್‌ ರಾವ್‌, ರಮೇಶ್‌ ಪೂಜಾರಿ, ನಾಗೇಶ್‌ ರಾವ್‌, ರಾಜೇಶ್‌ ಶೆಟ್ಟಿ, ಸಂತೋಷ್‌ ರಾವ್‌, ಕೃಷ್ಣ ನಾಯ್ಕ್‌, ಗಿರೀಶ್‌ ರಾವ್‌, ರಾಜಾರಾಂ, ಸುರೇಂದ್ರ ರಾವ್‌, ಪ್ರಜ್ವಲ್‌ ಆಲ್ವಿನ್‌ ಡಿʼಸೋಜಾ, ಹರೀಶ್‌ ಪೂಜಾರಿ, ತಾರಾನಾಥ್‌, ಸತೀಶ್‌ ರಾವ್‌ ಪಾಲ್ಗೊಂಡರು.

ಕರಿಯಕಲ್ಲು ರುದ್ರಭೂಮಿಯಲ್ಲಿ ಶ್ರಮದಾನ Read More »

ಕಾರ್ಕಳದಲ್ಲಿ ಸೋಮವಾರ ಭಾರಿ ಮಳೆ

ಕಾರ್ಕಳ : ಕಾರ್ಕಳ ತಾಲೂಕಿನಾದ್ಯಂತ ಸೋಮವಾರ ಭಾರಿ ಮಳೆಯಾಗುತ್ತಿದ್ದು, ನದಿ, ತೊರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಕಾರ್ಕಳ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ವಾತಾವರಣ ತಂಪಾಗಿದೆ. ರವಿವಾರ ಸಾಧಾರಣ ಮಳೆಯಾಗಿದ್ದು, ಸೋಮವಾರ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ರವಿವಾರ ಕಾರ್ಕಳದಲ್ಲಿ 43.6 ಮಿ.ಮೀ., ಇರ್ವತ್ತೂರು-34.2 ಮಿ.ಮೀ., ಅಜೆಕಾರು-52.4ಮಿ.ಮೀ., ಬೆಳಂಜೆ-40.8 ಮಿ.ಮೀ., ಸಾಣೂರು-41.8 ಮಿ.ಮೀ., ಕೆದಿಂಜೆ-49.2 ಮಿ.ಮೀ., ಮುಳಿಕ್ಕಾರು-45.4 ಮಿ.ಮೀ., ಕೆರ್ವಾಶೆ-48.2 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಸಂದರ್ಭ ವರುಣನ ಆರ್ಭಕ್ಕೆ ಹಲವು ಪ್ರದೇಶಗಳು

ಕಾರ್ಕಳದಲ್ಲಿ ಸೋಮವಾರ ಭಾರಿ ಮಳೆ Read More »

ಮುಖ್ಯಮಂತ್ರಿ ಅವರಿಗೂ ಕೊರೊನಾ ಪಾಸಿಟಿವ್

ಕಾರ್ಕಳ :  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟರ್ ಹಾಗೂ ಫೇಸ್ಬುಕ್ ಪುಟಗಳಲ್ಲಿ ಮುಖ್ಯಮಂತ್ರಿಯವರು ಸ್ಪಷ್ಟ ಪಡಿಸಿದ್ದಾರೆ. ‘ನನ್ನ ಕೋವಿಡ್ 19 ಪರೀಕ್ಷಾ ವರದಿಯು ಪಾಸಿಟಿವ್ ಎಂದು ಬಂದಿದೆ. ಈ ಸೋಂಕಿಗೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ’ ಎಂದು ಅವರು ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರಿಗೂ ಕೊರೊನಾ ಪಾಸಿಟಿವ್ Read More »

error: Content is protected !!
Scroll to Top