ಕುಸ್ತಿ ಪಂದ್ಯಾಟ : ಕ್ರೈಸ್ಟ್‌ಕಿಂಗ್‌ ವಿದ್ಯಾಸಂಸ್ಥೆಯ ಸುದೀಕ್ಷಾ – ದ್ರುವೀತ್ ರಾಜ್ಯ ಮಟ್ಟಕ್ಕೆ

ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಉಪನಿರ್ದೇಶಕರ ಕಚೇರಿ, ಜಿಲ್ಲಾ ಪಂಚಾಯತ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರದ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ 14/17ರ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ದ್ರುವೀತ್ ಹಾಗೂ ಬಾಲಕಿಯರ ವಿಭಾಗದಲ್ಲಿ ಎಂಟನೇ ತರಗತಿಯ ಸುದೀಕ್ಷಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಏಳನೇ ತರಗತಿಯ ಮೊಹಮ್ಮದ್ ಹಿಶಾಮ್ ಖಾನ್ ಮತ್ತು ಸಾದ್ವಿ ನಾಯಕ್, ಹತ್ತನೇ ತರಗತಿಯ ರೇಚಲ್ ಡಿ’ಸೋಜ ಮತ್ತು ಲೆನಿಷಾ ಮೆಂಡೋನ್ಸಾ ಬೆಳ್ಳಿ ಪದಕ, ಆರನೇ ತರಗತಿಯ ಮೊಹಮ್ಮದ್ ಅತಿಫ್ ಮತ್ತು ಪ್ರೀತಿ ಪೂಜಾರಿ, ಏಳನೇ ತರಗತಿಯ ಮಾನಸ್, ಒಂಬತ್ತನೇ ತರಗತಿಯ ಸಾನ್ವಿ ಎಂ. ನಾಯಕ್ ಕಂಚಿನ ಪದಕಗಳನ್ನು ಪಡೆದಿದ್ದಾರೆ.































































































error: Content is protected !!
Scroll to Top