ಅಮೃತ್‌ ಸರೋವರ್‌ ಯೋಜನೆಯಡಿ ಕಾರ್ಕಳ ಹೆಬ್ರಿಯ 19 ಕೆರೆಗಳ ಅಭಿವೃದ್ಧಿ

ಉಡುಪಿ : ಪ್ರಧಾನ ಮಂತ್ರಿ ಮಿಷನ್‌ ಅಮೃತ್‌ ಸರೋವರ್‌ ಯೋಜನೆಯಡಿ ಕಾರ್ಕಳದ 14 ಹಾಗೂ ಹೆಬ್ರಿಯ 5 ಕೆರೆಗಳು ಅಭಿವೃದ್ಧಿಗೊಳ್ಳಲಿದೆ.
ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ 2 ಕೆರೆಗಳು, ಇನ್ನಾ, ಕಣಜಾರು, ಎರ್ಲಪಾಡಿ, ದುರ್ಗ, ನಿಟ್ಟೆ, ಬೋಳ, ಕುಕ್ಕುಂದೂರು, ಕೌಡೂರು, ಸಾಣೂರು, ಮರ್ಣೆ, ಮುಲ್ಲಡ್ಕ, ಕಾಂತೇಶ್ವರದ ಕೆರೆ ಹಾಗೂ ಹೆಬ್ರಿ ತಾಲೂಕಿನ ಮುದ್ರಾಡಿ, ಕೆರೆಬೆಟ್ಟು, ಚಾರ, ಬೆಳಂಜೆ, ಶಿವಪುರದ ಕೆರೆಯನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಮತ್ತು ಹೂಳೆತ್ತುವ ಕಾರ್ಯ ಮಾಡಲಾಗುವುದು. ಆ ಕೆರೆಯ ಪಕ್ಕದಲ್ಲಿ ಸ್ವಾತಂತ್ರೋತ್ಸವ ಆಚರಿಸುವುದರೊಂದಿಗೆ ಬಾಕಿ ಕೆರೆಗಳ ಅಭಿವೃದ್ದಿಪಡಿಸಲಾಗುವುದು ಜಿ.ಪಂ. ಮೂಲದಿಂದ ತಿಳಿದುಬಂದಿದೆ.









































































































































































error: Content is protected !!
Scroll to Top