ಕಾರ್ಕಳ : ಬಜಗೋಳಿಯಲ್ಲಿ ರಿಕ್ಷಾ ಡಿಕ್ಕಿ, ಸೈಕಲ್‌ ಸವಾರ ಮೃತ್ಯು

ಕಾರ್ಕಳ: ಸೈಕಲ್ ಗೆ ಆಟೊ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಬಜಗೋಳಿಯ ಮುಡಾರು ಅಬ್ಬೆಂಜಾಲು ಎಂಬಲ್ಲಿ‌ ಸಂಭವಿಸಿದೆ. ಮೃತ ಸೈಕಲ್ ಸವಾರನನ್ನು ನೋಣಯ್ಯ ಎಂದು ಗುರುತಿಸಲಾಗಿದೆ. ಇವರು ಡಿ. 22ರ ಸಂಜೆ 7 ಗಂಟೆ ಸುಮಾರಿಗೆ ಸೈಕಲ್‌ನಲ್ಲಿ ಸಾಗುತ್ತಿದ್ದ ವೇಳೆ ಬಜಗೋಳಿಯಿಂದ ಕಡಾರಿಗೆ ಹೋಗುತ್ತಿದ್ದ ರಿಕ್ಷಾ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸಮೇತವಾಗಿ ರಸ್ತೆಗೆ ಬಿದ್ದ ನೋಣಯ್ಯ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































































































error: Content is protected !!
Scroll to Top