ಅಪಘಾತ : ಸುಂದರ ರೈ ಮಂದಾರ ಪಾರು

0

ಮಂಗಳೂರು, ಆ. 2: ಬಂಟ್ವಾಳ  ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿ ಎಂಬಲ್ಲಿ ಇಂದು ಮಧಾಹ್ನ ಕಾರು ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಕಲಾವಿದರು ಪವಾಡಸದೃಶವಾಗಿ ಪಾರಾಗಿದ್ದಾರೆ.

ತುಳು ಚಲನಚಿತ್ರ ಹಾಸ್ಯ ನಟರಾದ ಸುಂದರ ರೈ ಮಂದಾರ ಮತ್ತು ಚಂದ್ರಹಾಸ ಅನಂತಾಡಿ ಅವರು ಕಾರಿನಲ್ಲಿ ಮಂಗಳೂರಿನಿಂದ ಮಾಣಿಯ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅತಿಯಾದ ಮಳೆ ಸುರಿಯುತ್ತಿದ್ದ ಕಾರಣ ಚಾಲಕನಿಗೆ ರಸ್ತೆ ಸರಿಯಾಗಿ ಕಾಣದೆ ಅಪಘಾತ ಸಂಭವಿಸಿದೆಯೇ  ಅಥವಾ ಕಾರಿನ ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡಿದೆಯೆ ಎನ್ನುವುದು ಇನ್ನಷ್ಟೇ  ತಿಳಿದು ಬರಬೇಕಾಗಿದೆ. ವಿಟ್ಲ ಪೊಲೀಸರು ತನಿಖೆ  ಮಾಡುತ್ತಿದ್ದಾರೆ.

Previous articleಪತ್ರಕರ್ತ ಶರತ್‌ ಶೆಟ್ಟಿ ಅವರಿಗೆ ಶ್ರೀನಿವಾಸ್‌ ಭಟ್‌ ಪ್ರಶಸ್ತಿ
Next articleನಿತ್ಯ ಭವಿಷ್ಯ 03-08-2020

LEAVE A REPLY

Please enter your comment!
Please enter your name here