ವಿಶಾಖಪಟ್ಟಣ, ಆ. 1 : ಇಲ್ಲಿನ ಸಿಂಧಿಯಾ ಬಡಾವಣೆಯಲ್ಲಿರುವ ಹಿಂದುಸ್ಥಾನ್ ಶಿಪ್ಯಾರ್ಡ್ ನಲ್ಲಿ ಕ್ರೇನ್ ಪಲ್ಟಿಯಾಗಿ 11 ಮಂದಿ ಸಾವಿಗೀಡಾಗಿರುವ ಘಟನೆ ಸಂಭವಿಸಿದೆ.
ಕ್ರೇನ್ ನ ಸಾಮರ್ಥ್ಯ ಪರಿಶೀಲನೆ ಮಾಡುತ್ತಿರುವಾಗ ಅದು ಪಲ್ಟಿಯಾಗಿದೆ. ಮೃತರಲ್ಲಿ ನಾಲ್ವರು ಹಿಂದುಸ್ಥಾನ್ ಶಿಪ್ ಯಾರ್ಡ್ ನ ಖಾಯಂ ಉದ್ಯೋಗಿಗಳು ಮತ್ತು ಉಳಿದವರು ಗುತ್ತಿಗೆ ಕಾರ್ಮಿಕರು. ಮುಂಬಯಿಯಿಂದ ಔ ಹೊಸ ಕ್ರೇನ್ ತರಿಸಿ ಅದರ ಸಾಮರ್ಥ್ಯ ಪರಿಶೀಲಿಸಲಾಗುತ್ತಿತ್ತು.