Live: ನ್ಯೂಸ್ ಕಾರ್ಕಳ ಲೋಕಾರ್ಪಣೆ ನೇರಪ್ರಸಾರ
Live: ನ್ಯೂಸ್ ಕಾರ್ಕಳ ಲೋಕಾರ್ಪಣೆ ನೇರಪ್ರಸಾರ Read More »
ಬೆಂಗಳೂರು : ಕೃಷಿಕರು ಮತ್ತು ಕೃಷಿ ಇಲಾಖೆ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲು ಮತ್ತು ರೈತರ ಅನುಕೂಲಕ್ಕಾಗಿ ರಾಜ್ಯ ಇ-ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ರೈತ ಬೆಳೆ ಸಮೀಕ್ಷೆ ಆಪ್ ಅನ್ನು ಲೋಕಾರ್ಪಣೆಗೊಳಿಸಲಾಗಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ನೂತನ ಆಪ್ ಅನ್ನು ಲೋಕಾರ್ಪಣೆಗೊಳಿಸಿ, ಕೃಷಿಕರು ಅಂತರ್ಜಾಲದ ಸಹಾಯದಿಂದ ಇನ್ನು ಮುಂದೆ ತಮ್ಮ ಅಂಗೈನಲ್ಲಿಯೇ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮೀಕ್ಷೆ ನಡೆಸುವವರ ವಿವರ ಪಡೆಯಬಹುದಾಗಿದೆ ಎಂದರು. ಕಾರ್ಯನಿರ್ವಹಣೆ ಹೇಗೆ ? ಈ ಮೊಬೈಲ್
ರೈತರೇ ಸ್ವತಃ ತಮ್ಮ ಬೆಳೆ ವಿವರ ಅಪ್ಲೋಡ್ ಮಾಡಬಹುದು Read More »
ಕಾರ್ಕಳ : ಕಾರ್ಕಳ ತಾಲೂಕಿನಾದ್ಯಂತ ಸೋಮವಾರ ಭಾರಿ ಮಳೆಯಾಗುತ್ತಿದ್ದು, ನದಿ, ತೊರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಕಾರ್ಕಳ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ವಾತಾವರಣ ತಂಪಾಗಿದೆ. ರವಿವಾರ ಸಾಧಾರಣ ಮಳೆಯಾಗಿದ್ದು, ಸೋಮವಾರ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ರವಿವಾರ ಕಾರ್ಕಳದಲ್ಲಿ 43.6 ಮಿ.ಮೀ., ಇರ್ವತ್ತೂರು-34.2 ಮಿ.ಮೀ., ಅಜೆಕಾರು-52.4ಮಿ.ಮೀ., ಬೆಳಂಜೆ-40.8 ಮಿ.ಮೀ., ಸಾಣೂರು-41.8 ಮಿ.ಮೀ., ಕೆದಿಂಜೆ-49.2 ಮಿ.ಮೀ., ಮುಳಿಕ್ಕಾರು-45.4 ಮಿ.ಮೀ., ಕೆರ್ವಾಶೆ-48.2 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಸಂದರ್ಭ ವರುಣನ ಆರ್ಭಕ್ಕೆ ಹಲವು ಪ್ರದೇಶಗಳು
ಕಾರ್ಕಳದಲ್ಲಿ ಸೋಮವಾರ ಭಾರಿ ಮಳೆ Read More »
ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗು ಕಾಲಿಡುತ್ತಿದ್ದೆಂತೆಯೇ ಸಾರ್ವಜನಿಕ ತಾ. ಆಸ್ಪತ್ರೆ ಸಕಲ ಸಿದ್ಧತೆಗಳೊಂದಿಗೆ ಅದನ್ನು ಎದುರಿಸಲು ಸನ್ನದ್ಧವಾಗಿತ್ತು. ಕೊರೊನಾ ಬಾಧಿತರಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಯಾವೊಂದು ಸಮಸ್ಯೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಇಲ್ಲಿನ ವೈದ್ಯರು, ಸಿಬ್ಬಂದಿ ಸೇವೆ ಪ್ರಶಂಸನೀಯ. ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದವರಲ್ಲಿ ಓರ್ವರಾದ ಡಾ. ಜ್ಯೋತ್ಸ್ನಾ ಅವರೊಂದಿಗೆ ನ್ಯೂಸ್ ಕಾರ್ಕಳ. ಕಾಂ. ವಿಶೇಷ ಸಂದರ್ಶನ. ಈ ಸಂಚಿಕೆಯ ಪ್ರಾಯೋಕರು ಡಿ. ಆರ್. ರಾಜು (ಅಧ್ಯಕ್ಷರು, ತಾ.
ಕೊರೊನಾ ಪಾಸಿಟಿವ್ ಬಾಧಿತರಿಗೆ ಚಿಕಿತ್ಸೆ ನೀಡಿರುವ ಡಾ. ಜ್ಯೋತ್ಸ್ನಾ ಅವರೊಂದಿಗೆ ವಿಶೇಷ ಸಂದರ್ಶನ Read More »
ನ್ಯೂಸ್ ಕಾರ್ಕಳ ವಿಶೇಷ ಸಂದರ್ಶನ ಕರ್ನಾಟಕದ ಸಿಂಗಂ ಎಂದೇ ಖ್ಯಾತರಾದ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪ್ರಸ್ತುತ ಏನು ಮಾಡುತ್ತಿದ್ದಾರೆ ? ಅವರ ಮುಂದಿನ ರಾಜಕೀಯ ನಿಲುವು-ಒಲವೇನು ? ಎನ್ನುವ ಕುರಿತು ಅವರೊಂದಿಗೆ ನಡೆಸಿದ ಎಕ್ಸ್ಕ್ಲೂಸಿವ್ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. ಪೊಲೀಸ್ ಇಲಾಖೆಯ ಘನತೆ, ಗೌರವವನ್ನು ಹೆಚ್ಚಿಸಿದ ಅಪ್ಪಟ ಅಪರಂಜಿ ಅಣ್ಣಾಮಲೈ. ತನ್ನ ದಕ್ಷತೆ, ಕಾರ್ಯಕ್ಷಮತೆ, ಪ್ರಾಮಾಣಿಕತೆ, ಔದಾರ್ಯತೆ, ಮಾನವೀಯತೆಯ ಮೂಲಕವೇ ಇಡೀ ಕರ್ನಾಟಕದಾದ್ಯಂತ ಮನೆ ಮಾತಾದವರು. ತಮಿಳುನಾಡಿನ ಕೊಯಮ್ಮತ್ತೂರು ಕರೂರು ಮೂಲದ ಅಣ್ಣಾಮಲೈ ತನ್ನ
ಉಡುಪಿ ಲೋಕಾಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಣ್ಣಾಮಲೈಗೆ ಒಲವಿದೆಯೇ ? Read More »
ಉಡುಪಿ : ಶ್ರದ್ಧಾಕೇಂದ್ರಗಳಲ್ಲಿ ಜನಸಂದಣಿ ಕಂಡು ಬಂದರೆ ಕೊರೊನಾ ವೈರಸ್ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ನಾಗರ ಪಂಚಮಿ ಹಬ್ಬವನ್ನು ಎಲ್ಲರೂ ತಮ್ಮ ಮನೆಯಲ್ಲೇ ಆಚರಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರು ನಾಗರಪಂಚಮಿ ಹಬ್ಬಕ್ಕೆ ತಡೆ ಹೇರಿದ್ದಾರೆ ಎಂಬುದಾಗಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಜು. 24ರಂದು ಸ್ಪಷ್ಟೀಕರಣ ನೀಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ಈ ವರ್ಷ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುವಂತಿಲ್ಲ. ಸಾಮಾಜಿಕ ಅಂತರ ಪಾಲನೆ ಮಾಡಿದರೂ ವೈರಸ್
ನಾಗರಪಂಚಮಿ ಮನೆಯಲ್ಲೇ ಆಚರಿಸಿ : ಡಿಸಿ Read More »
ಕಾರ್ಕಳ: ಕಾನೂನು ರೀತ್ಯಾಕ್ಕೆ ವಿರುದ್ಧವಾಗಿ ತಾಲೂಕು ವ್ಯಾಪ್ತಿಯಲ್ಲಿ ತಲೆಎತ್ತಿರುವ ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾರ್ಕಳ ತಾಲೂಕು ಹೋಟೆಲ್ ಮಾಲಿಕರ ಸಂಘವು ಒತ್ತಾಯಿಸಿದೆ. ನಗರದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಜು. 21ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖ ಹರೀಶ್ ನಾಯಕ್ ಮಾತನಾಡಿ, ಹೊಟೇಲ್, ರೆಸ್ಟೋರೆಂಟ್ ಉದ್ಯಮ ಸ್ಥಾಪನೆಗೆ ಸಾಲ ಮೂಲಕ ಲಕ್ಷಾಂತರ ರೂ. ಬಂಡವಾಳ ಹೂಡಿ, ವಿವಿಧ ಇಲಾಖೆಗಳ ಮಾನ್ಯತೆ ಪತ್ರ ಪಡೆದು, ಸ್ಥಳೀಯಾಡಳಿತದಿಂದ ಪರವಾನಿಗೆ ಪಡೆದು ಕಾರ್ಮಿಕರ ಹಿತಕಾಪಾಡಿಕೊಂಡು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ.ಅನಧಿಕೃತ
ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕ್ಕೆ ಹೋಟೆಲ್ ಮಾಲಿಕರ ಆಗ್ರಹ Read More »