• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಆರೋಗ್ಯಧಾರಾ

newskarkala, dr. harsha kamath, health, health tips, hebri, doctor

ಡೆಂಗ್ಯೂ ಜ್ವರ ಎಚ್ಚರಿಕೆ ಇರಲಿ

ಈಡಿಸ್ ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಜ್ವರದ ಬಗ್ಗೆ ತಿಳಿದುಕೊಳ್ಳೋಣ. ಲಕ್ಷಣಗಳು:ಕಾಲುಗಳು ಮತ್ತು ಕೀಲುಗಳಲ್ಲಿ ನೋವು.104F ಜ್ವರ ವೇಗವಾಗಿ ಏರುತ್ತದೆ.ಕಣ್ಣುಗಳು ಕೆಂಪಾಗುತ್ತವೆ.ತೆಳು ಗುಲಾಬಿ ದದ್ದು ಮುಖದ ಮೇಲೆ ಕಾಣುತ್ತದೆ ನಂತರ ಕಣ್ಮರೆಯಾಗುತ್ತದೆ.ಕುತ್ತಿಗೆ ಮತ್ತು ತೊಡೆ ಸಂದು ದುಗ್ಧರಸ ಗ್ರಂಥಿಗಳು ಹೆಚ್ಚಾಗಿ ಊದಿಕೊಳ್ಳುತ್ತವೆ.ಅಧಿಕ ಜ್ವರ ಹಾಗೂ ಇತರ ಲಕ್ಷಣಗಳು ಎರಡರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ನಂತರ ಬೆವರುವಿಕೆ ಜಾಸ್ತಿಯಾಗುತ್ತದೆ.ಮೂರು ನಾಲ್ಕು ದಿನಗಳ ನಂತರ ದೇಹದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಏನು ಮಾಡಬೇಕು :ಲಕ್ಷಣಗಳನ್ನು ಕಂಡು ಕೂಡಲೇ ವೈದ್ಯರನ್ನು ಸಂಪರ್ಕಿಸಿ.ಸೊಳ್ಳೆಗಳ ನಿಯಂತ್ರಣ ಅಗತ್ಯ.ವಿಶ್ರಾಂತಿ […]

ಡೆಂಗ್ಯೂ ಜ್ವರ ಎಚ್ಚರಿಕೆ ಇರಲಿ Read More »

ಮಳೆಗಾಲಕ್ಕೆ ಆರೋಗ್ಯಕರ ಕಷಾಯಗಳು

ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ, ತ್ವಚೆಯ ಸಮಸ್ಯೆ ಬರುವುದು ಸಾಮಾನ್ಯ. ಕಷಾಯ ಸೇವನೆಯಿಂದ ಇದನ್ನು ತಡೆಗಟ್ಟಬಹುದು. ಆಯುರ್ವೇದಲ್ಲಿ ಅನೇಕ ಗಿಡಮೂಲಿಕೆಗಳನ್ನು ಬಳಸಿ ಮಾಡಿದ ಕಷಾಯ ದೊರೆಯುತ್ತದೆ. ಅದನ್ನು ರೋಗ ಲಕ್ಷಣಗಳನ್ನು ಪರಿಶೀಲಿಸಿ ಆಯುರ್ವೇದಾಚಾರ್ಯರು ನೀಡುತ್ತಾರೆ. ಇವತ್ತು ಚಿಕ್ಕಪುಟ್ಟ ಕಾಯಿಲೆಗಳನ್ನು ತಡೆಯಲು ಹಾಗೂ ಆರೋಗ್ಯವನ್ನು ವೃದ್ಧಿಸಲು ಮನೆಯಲ್ಲಿಯೇ ಸಿಗುವಂತಹ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಕಷಾಯಗಳ ಬಗ್ಗೆ ತಿಳಿದುಕೊಳ್ಳೋಣ. ಕಷಾಯ ಒಳ್ಳೆಯದು ಎಂದು ವಿಪರೀತ ಸೇವಿಸಬೇಡಿರಿ. ವಾರಕ್ಕೆ ಮೂರು ದಿನ ಸೇವಿಸಿದರೆ ಸಾಕು. ಕಾಲು ಲೋಟಕ್ಕಿಂತ ಅಧಿಕ ಸೇವಿಸಬೇಡಿ. ಮಾಡಿದ

ಮಳೆಗಾಲಕ್ಕೆ ಆರೋಗ್ಯಕರ ಕಷಾಯಗಳು Read More »

ಜೇನು ತುಪ್ಪದ ಆರೋಗ್ಯ ಗುಣಗಳು

ಸುಲಭವಾಗಿ ಜೀರ್ಣವಾಗುವಂತಹ ಶುದ್ಧ ಜೇನುತುಪ್ಪ ಆರೋಗ್ಯಕರ. ಒಂದು ವರ್ಷದ ಮಗುವಿನಿಂದ ಹಿಡಿದು ವೃದ್ಧರವರೆಗೆ ಬಹು ಉಪಯೋಗಿ ದ್ರವ್ಯ ಈ ಜೇನುತುಪ್ಪ. ಸಾಮಾನ್ಯವಾಗಿ ನಾವು ಚಿಕ್ಕಮಕ್ಕಳಿಗೆ ಔಷಧವನ್ನು ಜೇನುತುಪ್ಪದಲ್ಲಿ ಬೆರೆಸಿ ಕೊಡುತ್ತೇವೆ. ಇದರ ಗುಣವೇ ಅಂತಹದ್ದು. ಕೆಲವೊಂದು ಔಷಧ ಚೂರ್ಣದ ಜೊತೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಔಷಧದ ಗುಣವು ಹೆಚ್ಚುವುದು. ಜೇನುತುಪ್ಪದ ಗುಣಗಳು ಹೀಗಿವೆಜೇನುತುಪ್ಪವು ಮಧುರ ಹಾಗೂ ಕಷಾಯ ರಸದಿಂದ ಹೊಂದಿದ್ದು, ಲಘು, ಶುಷ್ಕ ಗುಣದಿಂದ ಕೂಡಿದೆ. ಅನುಷ್ಣಶೀತ ವೀರ್ಯ ಹೊಂದಿದೆ ಹಾಗು ಮೂರೂ ದೋಷಗಳನ್ನು ಸಮತೋಲನಗೊಳಿಸುತ್ತದೆ .

ಜೇನು ತುಪ್ಪದ ಆರೋಗ್ಯ ಗುಣಗಳು Read More »

ಫ್ಯಾಟಿ ಲಿವರ್ ಡಿಸೀಸ್

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಕಾಯಿಲೆಗಳಲ್ಲಿ ಒಂದು ಫ್ಯಾಟಿ ಲಿವರ್ ಡಿಸೀಸ್. ಯಕೃತ್ ಜೀವಕೋಶಗಳಲ್ಲಿ ಕೊಬ್ಬು ಶೇಖರಣೆಯಾಗುವುದಕ್ಕೆ ಫ್ಯಾಟಿ ಲಿವರ್ ಡಿಸೀಸ್ ಎಂದು ಕರೆಯುತ್ತಾರೆ. ಲಕ್ಷಣಗಳು :ಅನೇಕರಲ್ಲಿ ಇದರ ಲಕ್ಷಣಗಳು ಕಾಣಿಸುವುದಿಲ್ಲ. ಕೆಲವರಲ್ಲಿ ನಿತ್ರಾಣ, ದೌರ್ಬಲ್ಯ, ಉದರಶೂಲೆ, ಒಮ್ಮೆ ಅಧಿಕ ಹಸಿವಾಗುವುದು, ಕೆಲವೊಮ್ಮೆ ಹಸಿವಾಗದೆ ಇರುವುದು, ಅಜೀರ್ಣ ಕಂಡು ಬರುತ್ತದೆ. ಮುಂದಿನ ಹಂತದಲ್ಲಿ ಅಸಿಡಿಟಿ ಲಕ್ಷಣಗಳು ಕಂಡುಬರುತ್ತದೆ. ಯಾರಲ್ಲಿ ಸಕ್ಕರೆ ಕಾಯಿಲೆ, ಬಿಪಿ, ಬೊಜ್ಜುತನ, ಪಿಸಿಓಡಿ, ಹೈಪೋಥೈರಾಯ್ಡಿಸಂ, ಆತಂಕ ಇರುತ್ತದೆಯೋ ಅಂತಹವರಿಗೆ ಈ ರೋಗವು ಕಾಡುವುದು ಜಾಸ್ತಿ.

ಫ್ಯಾಟಿ ಲಿವರ್ ಡಿಸೀಸ್ Read More »

ಜ್ವರ ಬಂದಾಗ ಏನು ಮಾಡಬೇಕು

ಜ್ವರ ಒಂದು ಕಾಯಿಲೆಯಾಗಿರಬಹುದು ಅಥವಾ ಬೇರೆ ರೋಗದ ಲಕ್ಷಣ ಆಗಿರಬಹುದು. ಅದನ್ನು ಪರಿಶೀಲಿಸಿ ಡಾಕ್ಟರ್ ಮದ್ದನ್ನು ನೀಡುತ್ತಾರೆ. ಇಲ್ಲಿ ಸಾಮಾನ್ಯ ಜ್ವರ ಬಂದಾಗ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ತಿಳಿದುಕೊಳ್ಳೋಣ.ಜ್ವರ ಎಂದರೆ ಶರೀರದ ತಾಪಮಾನ ಹೆಚ್ಚಾಗುವುದು. ಜ್ವರವಿದ್ದಾಗ ಶರೀರದ ಅಂಗಾಂಗಗಳಲ್ಲಿ ನೋವು, ದುರ್ಬಲತೆ, ಬಾಯಿ ರುಚಿ ಹೋಗುವುದು ಸಾಮಾನ್ಯ. ಸಂದುಗಳಲ್ಲಿ ನೋವು, ನಿರುತ್ಸಾಹ ಮತ್ತು ಅಜೀರ್ಣವಾಗುವುದು. ಜ್ವರ ಬಂದಾಗ ಏನು ಮಾಡಬಾರದುಸ್ನಾನ ಮಾಡಬಾರದು. ಇದು ಜ್ವರವನ್ನು ಉಲ್ಬಣಗೊಳಿಸುತ್ತದೆ.ವ್ಯಾಯಾಮ ಮಾಡಬಾರದು. ಇದರಿಂದ ಶರೀರದ ಬಲ ಇನ್ನಷ್ಟು

ಜ್ವರ ಬಂದಾಗ ಏನು ಮಾಡಬೇಕು Read More »

ಮಳೆಗಾಲದಲ್ಲಿ ಈ ನಿಯಮಗಳನ್ನು ಪಾಲಿಸಿ

ಋತು ಬದಲಾದಂತೆ ಹೇಗೆ ವಾತಾವರಣ ಬದಲಾಗುತ್ತದೆಯೊ ಅದೇ ರೀತಿ ದೇಹದೊಳಗಿನ ವಾತಾವರಣ ಕೂಡ ಬದಲಾಗುತ್ತದೆ. ಆದ್ದರಿಂದ ಋತುಗಳಿಗೆ ಹೊಂದಿಕೊಂಡು ಹೋಗುವ ಆಹಾರ ವಿಹಾರಗಳ ಬಗ್ಗೆ ಆಯುರ್ವೇದದಲ್ಲಿ ಹೇಳಿದೆ. ಇದಕ್ಕೆ ಋತುಚರ್ಯ ಎಂದು ಕರೆಯುತ್ತಾರೆ. ಈಗ ವರ್ಷಋತು ನಡೆಯುತ್ತಿದೆ ಇದರ ಬಗ್ಗೆ ತಿಳಿದುಕೊಳ್ಳೋಣ. ವರ್ಷ ಋತುವಿನಲ್ಲಿ ವಾತ ಹಾಗೂ ಕಫ ದೋಷವು ಉಲ್ಬಣಗೊಳ್ಳುವುದರಿಂದ ವಾತ ಹಾಗೂ ಕಫ ಹರ ಆಹಾರ ಹಾಗೂ ಜೀವನ ಶೈಲಿಯನ್ನು ಪಾಲಿಸಬೇಕು. ಆಹಾರ ಹೀಗಿರಲಿಮಳೆಗಾಲದಲ್ಲಿ ನಮ್ಮ ಜೀರ್ಣಶಕ್ತಿಯು ಸಾಧಾರಣವಿರುವುದರಿಂದ ಲಘು ಆಹಾರವನ್ನು ಸೇವಿಸಬೇಕು. ಬಿಸಿ

ಮಳೆಗಾಲದಲ್ಲಿ ಈ ನಿಯಮಗಳನ್ನು ಪಾಲಿಸಿ Read More »

ಆಹಾರ ಸೇವನೆಯ ಮೇಲೆ ಗಮನ ಅವಶ್ಯ

ಯಾವುದೇ ಆಹಾರ ಸೇವಿಸುವ ಮುನ್ನ ನಾವು ಸೇವಿಸುವ ಆಹಾರದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಆಯುರ್ವೇದದಲ್ಲಿ ಪ್ರತಿ ಆಹಾರ ದ್ರವ್ಯಗಳಿಗೆ ತನ್ನದೇ ಆದ ರಸ (ರುಚಿ), ವೀರ್ಯ (ಶೀತ ಅಥವಾ ಉಷ್ಣ) ಹಾಗೂ ವಿಪಾಕ (ಜೀರ್ಣ ಆದ ಮೇಲೆ ಪರಿಣಾಮ)ದ ಬಗ್ಗೆ ವಿವರಿಸಿದ್ದಾರೆ. ಕೆಲವು ದ್ರವ್ಯಗಳಿಗೆ ಪ್ರಭಾವ (ತಿಳಿಯದೆ ಇರುವ) ಗುಣಗಳು ಇರುತ್ತದೆ. ಅಸಾತ್ಮ್ಯ ಆಹಾರ ನಮ್ಮ ಜೀರ್ಣಕ್ರಿಯೆಗೆ ಬಾಧೆ ಉಂಟು ಮಾಡುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯಕರವಾಗಿರಬಹುದು ಆದರೆ ಕೆಲವೊಮ್ಮೆ ಆಹಾರಗಳು ಒಟ್ಟಿಗೆ ಸೇವಿಸಿದಾಗ ವಿಪರೀತ ಪರಿಣಾಮ

ಆಹಾರ ಸೇವನೆಯ ಮೇಲೆ ಗಮನ ಅವಶ್ಯ Read More »

ಆಹಾರ ಸೇವನೆಯ ಮೇಲಿರಲಿ ಗಮನ

ಮದುವೆ ಸಮಾರಂಭದ ಭರ್ಜರಿ ಊಟ. ಹಿಂದಿನ ಸಂಜೆ ಫಲಾಹಾರ. ಫ್ರೂಟ್ ಸಲಾಡ್ ವಿತ್ ಐಸ್ ಕ್ರೀಮ್, ಮೊಸರು ವಡೆ, ವಿವಿಧ ತರಹದ ಮಿಲ್ಕ್ ಶೇಕ್‌ಗಳು, ಚಪಾತಿಯ ಜೊತೆ ಮೊಸರನ್ನು ಬಿಸಿ ಮಾಡಿ ಮಸಾಲೆ ಪದಾರ್ಥಗಳು. ಇನ್ನೂ ಅನೇಕ ರೀತಿಯ ಅಡುಗೆಗಳು ನಾವು ಇತ್ತೀಚಿನ ದಿನಗಳಲ್ಲಿ ಸೇವಿಸುತ್ತೇವೆ. ಮನೆಯಲ್ಲೂ ಕೂಡ ಈ ತರಹದ ದೇಹಕ್ಕೆ ಸಾತ್ಮ್ಯವಲ್ಲದ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತೇವೆ. ಮೇಲೆ ಹೇಳಿದ ಆಹಾರ ಪದಾರ್ಥಗಳು ಅಸಾತ್ಮ್ಯ ಪದಾರ್ಥಗಳು. ಯಾವುದೇ ಆಹಾರ ಸೇವಿಸುವ ಮುನ್ನ ನಾವು

ಆಹಾರ ಸೇವನೆಯ ಮೇಲಿರಲಿ ಗಮನ Read More »

ಆರೋಗ್ಯಧಾರ : ಪಿತ್ತಕೋಶದ ಕಲ್ಲು

ಯಕೃತ್ತಿನ ಕೆಳಗೆ ಹಿಂದಿನ ಭಾಗದಲ್ಲಿ ಪಿತ್ತಕೋಶವು ಸ್ಥಿತವಾಗಿದೆ. ಪಿತ್ತಕೋಶದಿಂದ ಸ್ರವಿಸುವ ರಸವು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. 40 ವರ್ಷ ದಾಟಿದ ವ್ಯಕ್ತಿಗಳಲ್ಲಿ ಪಿತ್ತಕೋಶದ ಕಲ್ಲುಗಳಾಗುವ ಸಂಭವವಿರುತ್ತದೆ ವಿಶೇಷವಾಗಿ ಮಹಿಳೆಯರಲ್ಲಿ ಕಂಡು ಬರುವುದು. ಇದರ ಕಾರಣಗಳುಆಯುರ್ವೇದದ ಪ್ರಕಾರ ವಾತ ಪಿತ್ತ ಹಾಗೂ ಕಫ ದೋಷದಿಂದ ವಿಶೇಷವಾಗಿ ಪಿತ್ತದೋಷದ ವಿಕೃತಿಯಿಂದ ಕಲ್ಲುಗಳು ರೂಪಗೊಳ್ಳುತ್ತದೆ. ಇದನ್ನು ಪಿತ್ತಾಶ್ಮರಿ ಎಂದು ಕರೆಯುತ್ತಾರೆ. ಪಿತ್ತಕೋಶದಲ್ಲಿ ಸಂಗ್ರಹವಾಗಿರುವ ಪಿತ್ತ ರಸವು ಕಲ್ಲಿನಂತಾಗಿ ಪಿತ್ತ ಗಲ್ಲುಗಳಾಗಿ ರೂಪಗೊಳ್ಳುತ್ತದೆ. ಹೆಚ್ಚು ಕೊಲೆಸ್ಟ್ರಾಲ್, ಪಿತ್ತ ರಸ ಲವಣಗಳು ಹಾಗೂ ಬಿಲಿರುಬಿನ

ಆರೋಗ್ಯಧಾರ : ಪಿತ್ತಕೋಶದ ಕಲ್ಲು Read More »

ದೇಹವನ್ನು ತಂಪುಮಾಡುವ ಪದಾರ್ಥಗಳು

ಬೇಸಿಗೆಯಲ್ಲಿ ಪಿತ್ತದೋಷವು ಪ್ರಕುಪಿತವಾಗಿರುವುದರಿಂದ ದೇಹವನ್ನು ತಂಪು ಮಾಡುವುದು ಬಹಳ ಮುಖ್ಯ. ದೇಹವನ್ನು ತಂಪಾಗಿರಿಸಲು ನಮ್ಮ ಆಹಾರ ವಿಹಾರ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯದಾಯಕ, ನೈಸರ್ಗಿಕವಾಗಿ ದೊರೆಯುವ ಹಣ್ಣು, ತರಕಾರಿ, ಮಸಾಲೆ ಪದಾರ್ಥಗಳನ್ನು ಬಳಸಿರಿ. ಬೇಸಿಗೆಯಲ್ಲಿ ಸೇವಿಸುವಂತಹ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ. ಸೋಂಪು – ಯಾವುದೇ ಹೊಟೇಲ್‌ನಲ್ಲಿ ಇರಬಹುದು ಊಟವಾದ ನಂತರ ಬಿಲ್ ತರುವಾಗ ಸೋಂಪನ್ನು ಜೊತೆಗೆ ತರುವುದು ನಾವು ಕಂಡಿದ್ದೇವೆ. ಇದು ತಿಂದ ಆಹಾರವನ್ನು ಜೀರ್ಣ ಮಾಡುವುದಲ್ಲದೆ ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಬೇಸಿಗೆಯಲ್ಲಿ ಜೀರ್ಣಶಕ್ತಿ ಕಡಿಮೆ ಇರುವುದರಿಂದ

ದೇಹವನ್ನು ತಂಪುಮಾಡುವ ಪದಾರ್ಥಗಳು Read More »

error: Content is protected !!
Scroll to Top