• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ)

ಭಾರತದಲ್ಲಿ ದಾಖಲೆಯನ್ನು ಮಾಡಿದ ‘ಅಮರ ಚಿತ್ರಕಥಾ’ ಸರಣಿ ರೂಪಿಸಿದ್ದು ಅವರು ! ಪ್ರತಿಯೊಬ್ಬರೂ ಬಾಲ್ಯದಲ್ಲಿ ಖಂಡಿತವಾಗಿ ಓದಿರುವ ಹಾಗೂ ಇಂದಿಗೂ ಓದಲು ಇಚ್ಛೆ ಪಡುವ ಎರಡು ಕಾಮಿಕ್ಸ್ ಪುಸ್ತಕಗಳ ಸರಣಿಗಳೆಂದರೆ ಅವು ಅಮರ ಚಿತ್ರಕಥಾ ಮತ್ತು ಟಿಂಕಲ್! ಬಣ್ಣ ಬಣ್ಣದ ಚಿತ್ರಗಳ ಜೊತೆಗೆ ಕಥೆ ಹೇಳುವ ಆಕರ್ಷಕ ಪುಸ್ತಕಗಳು ಅವು. ನಮ್ಮೆಲ್ಲರ ಮನಸ್ಸಿನಲ್ಲಿ ಅದ್ಭುತವಾದ ರಮ್ಯ ಕಲ್ಪನಾಲೋಕವನ್ನು ಸೃಷ್ಟಿಸಿದ ಸರಣಿ ಪುಸ್ತಕಗಳು! ಅವೆರಡೂ ಸರಣಿಗಳನ್ನು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದವರು ಅನಂತ್ ಪೈಯವರು. ತಮ್ಮನ್ನು ‘ಅಂಕಲ್ […]

ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ) Read More »

ಪ್ರಾಥಮಿಕ ಶಿಕ್ಷಣವನ್ನೂ ಪೂರ್ತಿ ಮಾಡದ ಆ ವ್ಯಕ್ತಿಯು ರಾಷ್ಟ್ರಮಟ್ಟದಲ್ಲಿ ಕಿಂಗ್ ಮೇಕರ್ ಆಗಿದ್ದು ಹೇಗೆ?

ಇಂಗ್ಲಿಷ್ ಅಥವಾ ಹಿಂದಿ ಮಾತಾಡಲು ಬಂದಿದ್ದರೆ ಅವರೇ ಭಾರತದ ಮೂರನೇ ಪ್ರಧಾನಿ ಆಗ್ತಾ ಇದ್ದರು! ಅವರ ಪ್ರಾಥಮಿಕ ಶಿಕ್ಷಣವು 11ನೇ ವರ್ಷಕ್ಕೆ ನಿಂತು ಹೋಗಿತ್ತು! ಅದಕ್ಕೆ ಕಾರಣ ತಂದೆಯ ಸಾವು. ಅವರಿಗೆ ತಮಿಳು ಬಿಟ್ಟರೆ ಬೇರೆ ಯಾವ ಭಾಷೆ ಬರುತ್ತಲೇ ಇರಲಿಲ್ಲ! ಇಂಗ್ಲಿಷ್ ಅಥವಾ ಹಿಂದೀ ಭಾಷೆ ಗೊತ್ತೇ ಇರಲಿಲ್ಲ! ಆದರೆ ರಾಜಕೀಯದಲ್ಲಿ ಅವರಷ್ಟು ಪರಿಣತರು ಬೇರೆ ಇರಲು ಸಾಧ್ಯವೇ ಇರಲಿಲ್ಲ! ಪಕ್ಷ ನಿಷ್ಠೆ ಹಾಗೂ ಸಿದ್ಧಾಂತಗಳಲ್ಲಿ ಕೂಡ ಅವರಿಗೆ ಅವರೇ ಸಾಟಿ ಆಗಿದ್ದರು. ಪರಿಣಾಮವಾಗಿ ಎರಡು

ಪ್ರಾಥಮಿಕ ಶಿಕ್ಷಣವನ್ನೂ ಪೂರ್ತಿ ಮಾಡದ ಆ ವ್ಯಕ್ತಿಯು ರಾಷ್ಟ್ರಮಟ್ಟದಲ್ಲಿ ಕಿಂಗ್ ಮೇಕರ್ ಆಗಿದ್ದು ಹೇಗೆ? Read More »

ನೈಜ ಪ್ರೀತಿಯ ಕೆಲವು ಘಟನೆಗಳು

ದೇಹದ ಪ್ರೀತಿ ಮೀರಿದ ನೂರಾರು ನಿದರ್ಶನ ನಮ್ಮ ಸುತ್ತಮುತ್ತಲೇ ಇದೆ ಮತ್ತೆ ಫೆಬ್ರವರಿ 14 ಬಂದಿದೆ. ನಿಜವಾದ ಪ್ರೀತಿಯ ಅನುಭೂತಿಯಲ್ಲಿ ಮಿಂದೆದ್ದ ನೂರಾರು ಜೋಡಿಗಳಿಗೆ ಪ್ರೇಮಿಗಳ ದಿನದ ಶುಭಾಶಯಗಳು. ಯುವ ಪ್ರೇಮಿಗಳ ನೂರಾರು ಬಿಸಿ ಉಸಿರುಗಳು, ಬಿಗಿಯಪ್ಪುಗೆಗಳು, ಭಾವುಕ ಪ್ರಪೋಸಲ್‌ಗಳು, ಮುಂದೆ ಬ್ರೇಕ್‌ಅಪ್ ಆಗಿ ಮುಗಿದೇ ಹೋಗುವ ಕೆಲವು ಕ್ಷಣಿಕ ಪ್ರೀತಿಗಳು..ಇವೆಲ್ಲದರ ನಡುವೆ ನನಗೆ ಅನ್ನಿಸಿದ ಕೆಲವು ಸಂಗತಿಗಳನ್ನು ಇಲ್ಲಿ ಬರೆದಿದ್ದೇನೆ. ಈ ದೃಶ್ಯಗಳು ನನ್ನ ಮುಂದೆ ಇರುವ ನಿಜವಾದ ಪ್ರೀತಿಯ ಪರಾಕಾಷ್ಠೆಗಳು. ಕೇವಲ ಹಸಿಬಿಸಿ ಪ್ರೀತಿಯೇ

ನೈಜ ಪ್ರೀತಿಯ ಕೆಲವು ಘಟನೆಗಳು Read More »

ರಜನೀಕಾಂತ್ ಬಂದರು – ದಾರಿ ಬಿಡಿ!

‘ಸ್ಟಾರ್ ಪಟ್ಟ ಶಾಪ ನನಗೆ’ ಎಂದು ರಜನೀಕಾಂತ್ ಹೇಳಿದ್ದು ಯಾಕೆ? ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ! ಒಬ್ಬ ಮಹಾನ್ ನಟ, ತನ್ನ ಅಭಿಮಾನಿಗಳ ಹೃದಯ ಸಾಮ್ರಾಟ, ಭಾರತದ ಅತೀ ದೊಡ್ಡ ಸೂಪರ್ ಸ್ಟಾರ್, ಜಗತ್ತಿನಾದ್ಯಂತ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ ನಟ, ಏಷಿಯಾದಲ್ಲಿ ಎರಡನೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ, ವಿದೇಶಗಳಲ್ಲಿ ಕೋಟಿ ಕೋಟಿ ಬಿಸಿನೆಸ್ ಮಾಡುವ ಸಿನೆಮಾಗಳ ಹೀರೋ, ಜಪಾನೀಸ್, ಚೈನೀಸ್ ಮೊದಲಾದ ಭಾಷೆಗಳಿಗೆ ಅವರ ಸಿನೆಮಾ

ರಜನೀಕಾಂತ್ ಬಂದರು – ದಾರಿ ಬಿಡಿ! Read More »

ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

ಗೆಲ್ಲಲು ಹೊರಟವರಿಗೆ ನಿಜವಾದ ಬೂಸ್ಟರ್ ಡೋಸ್ ಈ ಸೂತ್ರಗಳು ಗೆಲ್ಲುವುದು ಯಾರಿಗೆ ಬೇಡ ಹೇಳಿ? ಸೋಲಲು ಯಾರೂ ಬಯಸುವುದಿಲ್ಲ.ದಿಗಂತದ ಕಡೆಗೆ ದೃಷ್ಟಿ ನೆಟ್ಟು ಸಾಧನೆಯ ಹಸಿವು ಮತ್ತು ಕನಸಿನ ಕಸುವುಗಳನ್ನು ಜೋಡಿಸಿಕೊಂಡು ನಾವು ಖಂಡಿತ ಗೆಲ್ಲಲೇಬೇಕು ಎಂದು ಹೊರಟಾಗ ಈ 25 ಸೂತ್ರಗಳು ನಿಮ್ಮನ್ನು ಕೈಹಿಡಿದು ಮುನ್ನಡೆಸುತ್ತವೆ. ೧) ಗಮ್ಯ (DESTINY) – ನೀವು ತಲುಪಬೇಕಾದ ಸ್ಥಳದ ಸರಿಯಾದ ಅರಿವು ಇರಬೇಕು. ಅದನ್ನು ಮಂಜಿಲ್ ಎಂದು ಕೂಡ ಕರೆಯಬಹುದು. ೨) ದಾರಿ (ROAD) – ನಾವು ಕ್ರಮಿಸಬೇಕಾದ

ಸಾಧನೆಯ ಹಾದಿಯ 25 ಮೈಲಿಗಲ್ಲುಗಳು Read More »

ಪುಟವಿಟ್ಟ ಚಿನ್ನದಂತೆ ಮತ್ತೆ ಎದ್ದು ಬಂದ ದಯಾ ನಾಯಕ್‌

ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಗ್ರಾಮದಲ್ಲಿ 58 ವರ್ಷಗಳ ಹಿಂದೆ ಜನಿಸಿದ ದಯಾ ನಾಯಕ್ ಮುಂದೆ ಮುಂಬಯಿಯ ಪೊಲೀಸ್ ಅಧಿಕಾರಿಯಾಗಿ ಎಸಿಪಿ ಹುದ್ದೆಯವರೆಗೆ ಏರಿದ್ದು, ಖಡಕ್ ಪೊಲೀಸ್ ಅಧಿಕಾರಿಯಾಗಿ ಗ್ಯಾಂಗ್‌ ಸ್ಟರ್‌ಗಳ ಹುಟ್ಟಡಗಿಸಲು ಶ್ರಮಿಸಿದ್ದು, 85ಕ್ಕೂ ಹೆಚ್ಚು ಅಂಡರ್ ವರ್ಲ್ಡ್ ಗ್ಯಾಂಗ್‌ ಸ್ಟರ್‌ಗಳನ್ನು ಎನ್ಕೌಂಟರ್ ಮಾಡುವ ಮೂಲಕ ‘ಎನ್ಕೌಂಟರ್ ದಯಾ ನಾಯಕ್ ‘ ಎಂದು ತನ್ನ ಅಭಿಮಾನಿಗಳಿಂದ ಕರೆಸಿಕೊಂಡದ್ದು…ಇವೆಲ್ಲವೂ ರೋಚಕ ಅಧ್ಯಾಯಗಳೇ. ಇವೆಲ್ಲದರ ಹಿಂದೆ ಇರುವ ಖಡಕ್ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರು ಇಂದು (ಜುಲೈ

ಪುಟವಿಟ್ಟ ಚಿನ್ನದಂತೆ ಮತ್ತೆ ಎದ್ದು ಬಂದ ದಯಾ ನಾಯಕ್‌ Read More »

‘ಮಾಸ್ಟರ್ ಆಫ್ ಸೆರೆಮೋನಿ’ ಎಂಬ ಚತುರ ಗಾರುಡಿಗ

ಕಾರ್ಯಕ್ರಮ ನಿರೂಪಣೆಯು ನೀವು ಅಂದುಕೊಂಡಷ್ಟು ಸುಲಭ ಅಲ್ಲ! 1983ರಿಂದ ಆರಂಭಗೊಂಡು ಸಾವಿರಾರು ವೇದಿಕೆಯ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದೇನೆ. ತುಂಬಾ ಸವಾಲಿನ ಹೈ ಪ್ರೋಟೋಕಾಲ್ ಕಾರ್ಯಕ್ರಮಗಳ ನಿರೂಪಣೆ ಕೂಡ ಮಾಡಿದ್ದೇನೆ. ಎಷ್ಟೋ ಬಾರಿ ಗೆದ್ದಿದ್ದೇನೆ. ಎಷ್ಟೋ ಬಾರಿ ಸೋತಿದ್ದೇನೆ. ಎಷ್ಟೋ ಬಾರಿ ನನಗೆ ಈ ಕಾರ್ಯಕ್ರಮ ನಿರೂಪಣೆಯು ಒಂದು ‘ಥ್ಯಾಂಕಲೆಸ್ ಜಾಬ್’ ಅಂತ ಅನ್ನಿಸಿದ್ದು ಇದೆ. ಆದರೆ ಸಾವಿರಾರು ಜನರು ಸೇರಿದ ದೊಡ್ಡ ದೊಡ್ಡ ಸಭೆ ಮತ್ತು ಸಮ್ಮೇಳನಗಳ ವೇದಿಕೆಯ ನಿರೂಪಣೆಯು ಖಂಡಿತವಾಗಿ ಸುಲಭ ಅಲ್ಲ ಎಂದು ನನಗೆ

‘ಮಾಸ್ಟರ್ ಆಫ್ ಸೆರೆಮೋನಿ’ ಎಂಬ ಚತುರ ಗಾರುಡಿಗ Read More »

ದಾಸಸಾಹಿತ್ಯದ ನಿಜಾರ್ಥದ ರಾಯಭಾರಿ – ವಿದ್ಯಾಭೂಷಣ

ಸಂಗೀತ ಸಂತನ ಗಾನಯಾನದ ಸುವರ್ಣ ಮಹೋತ್ಸವಕ್ಕೆ ವೇದಿಕೆ ಸಜ್ಜು ಕರ್ನಾಟಕ ಸಂಗೀತದ ಮೂಲಕ ದಾಸರ ಪದಗಳನ್ನು ತುಂಬಾ ಶ್ರೀಮಂತಗೊಳಿಸಿದ ಹಲವು ಗಾಯಕರು ಕನ್ನಡ ನಾಡನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆ ಯಾದಿಯಲ್ಲಿ ಶಿರೋಭೂಷಣವಾದ ಒಂದು ಹೆಸರು ಡಾಕ್ಟರ್ ವಿದ್ಯಾಭೂಷಣ ಎಂದರೆ ಅದನ್ನು ಎಲ್ಲರೂ ಒಪ್ಪುತ್ತಾರೆ. ತಮ್ಮ ಜೀವನದ ಐವತ್ತು ದೀರ್ಘ ವರ್ಷಗಳನ್ನು ಸಂಗೀತಕ್ಕೆ ಮುಡಿಪಾಗಿ ಇಟ್ಟ ಅವರ ಬಗ್ಗೆ ಒಂದು ಪುಸ್ತಕವನ್ನೇ ಬರೆಯುವಷ್ಟು ಮಾಹಿತಿಗಳನ್ನು ಹರವಿಟ್ಟು ಈ ಲೇಖನ ನಾನು ಬರೆಯಬೇಕು. ಉಡುಪಿ ಮಾಧ್ವ ಪರಂಪರೆಯ

ದಾಸಸಾಹಿತ್ಯದ ನಿಜಾರ್ಥದ ರಾಯಭಾರಿ – ವಿದ್ಯಾಭೂಷಣ Read More »

1988ರ ಸಿಯೋಲ್ ಒಲಿಂಪಿಕ್ಸ್ ಡೈವಿಂಗ್ ಹೀರೋ ಗ್ರೆಗ್ ಲುಗ್ವಾನಿಸ್.

ದಾಖಲೆಗಳ ಮೇಲೆ ದಾಖಲೆ ಬರೆದ ಗ್ರೆಗ್ ಬದುಕು ಒಂದು ಕೌತುಕದ ಮೂಟೆ 1896ರಲ್ಲಿ ಆರಂಭವಾದದ್ದು ಆಧುನಿಕ ಒಲಿಂಪಿಕ್ಸ್. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟವು ನನ್ನಂತಹ ವಿಕಸನದ ತರಬೇತುದಾರನಿಗೆ ಒಂದು ಅದ್ಭುತ ಅಧ್ಯಯನದ ವಸ್ತು. ಏಕೆಂದರೆ ಅಲ್ಲಿ ನೂರಾರು ಯಶೋಗಾಥೆಗಳು ಪ್ರತೀ ಬಾರಿ ನಡೆಯುತ್ತವೆ. ಹಾಗೆಯೇ ಜಗತ್ತಿಗೆ ಸ್ಫೂರ್ತಿ ತುಂಬಿಸುವ ಕ್ರೀಡಾಪಟುಗಳು ಈ ಒಲಿಂಪಿಕ್ಸ್ ವೇದಿಕೆಗಳಲ್ಲಿ ಹುಟ್ಟುತ್ತ ಇರುತ್ತಾರೆ. 1984ರ ಲಾಸ್ ಏಂಜಲೀಸ್ – ಗ್ರೆಗ್ ಲುಗ್ವಾನಿಸಗೆ 2 ಚಿನ್ನಅಮೇರಿಕಾದ ಸರ್ವ ಶ್ರೇಷ್ಟ ಡೈವಿಂಗ್ ಪಟು, ಅದು

1988ರ ಸಿಯೋಲ್ ಒಲಿಂಪಿಕ್ಸ್ ಡೈವಿಂಗ್ ಹೀರೋ ಗ್ರೆಗ್ ಲುಗ್ವಾನಿಸ್. Read More »

ಆದಿವಾಸಿಗಳ ಆರಾಧ್ಯ ದೈವ ಬಿರ್ಸಾ ಮುಂಡಾ

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬಿಹಾರದಲ್ಲಿ ನಡೆದ ರಕ್ತ ಕ್ರಾಂತಿಯ ರೋಚಕ ಕಥೆ ಬ್ರಿಟಿಷ್ ಸಾಮ್ರಾಜ್ಯವು ಭಾರತವನ್ನು ಆಳುತ್ತಿದ್ದಾಗ ನಮ್ಮ ಭಾರತದಲ್ಲಿ ನಡೆದಿದ್ದ ಹಲವು ರಕ್ತಕ್ರಾಂತಿಗಳ ಬಗ್ಗೆ ನಮ್ಮ ಯುವ ಜನತೆಗೆ ಅರಿವು ಇಲ್ಲದಿರುವುದು ನಿಜವಾಗಿಯೂ ದುರಂತ! ಅಂತಹ ಒಂದು ರಕ್ತಕ್ರಾಂತಿಗೆ ಕಾರಣ ಆದವರು ಆದಿವಾಸಿಗಳ ಸಂಘಟನೆ ಮಾಡಿ ಬ್ರಿಟಿಷ್ ಸರಕಾರವನ್ನು ವಸ್ತುಶಃ ನಡುಗಿಸಿದವರು ಬಿರ್ಸಾ ಮುಂಡಾ! ಜಾರ್ಖಂಡ್ ರಾಜ್ಯವು ಅವರನ್ನು ರಾಷ್ಟ್ರೀಯ ಐಕಾನ್ ಆಗಿ ಸ್ವೀಕರಿಸಿದೆ ಮತ್ತು ಭಾರತದ ಪಾರ್ಲಿಮೆಂಟ್ ಭವನದಲ್ಲಿ ಅವರ ಭಾವಚಿತ್ರವು ಇದೆ. ಆ

ಆದಿವಾಸಿಗಳ ಆರಾಧ್ಯ ದೈವ ಬಿರ್ಸಾ ಮುಂಡಾ Read More »

error: Content is protected !!
Scroll to Top