Author name: newskarkala desk

ನಿಟ್ಟೆಯಲ್ಲಿ ಕಾರು ಬೈಕ್‌ ಅಪಘಾತ – ಸವಾರ ಸಾವು

ಇಂಜಿನೀಯರಿಂಗ್‌ ಕಾಲೇಜು ವಿದ್ಯಾರ್ಥಿಗಳ ಅತಿವೇಗಕ್ಕೆ ಅಮಾಯಕರು ಬಲಿ ಕಾರ್ಕಳ : ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ಕ್ರಾಸ್‌ ಬಳಿ ಕಾರೊಂದು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸಾವಿಗೀಡಾದ ಘಟನೆ ಎ. 24ರ ಸಂಜೆ ಸಂಭವಿಸಿದೆ. ನಿಟ್ಟೆ ಸಮೀಪದ ಬಜಕಳ ನಿವಾಸಿ ನವೀನ್‌ಚಂದ್ರ ಮೂಲ್ಯ (45) ಮೃತಪಟ್ಟ ದುರ್ದೈವಿ.ನವೀನ್‌ಚಂದ್ರ ಅವರು ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಪ್ರೇರಣ ಮೂಲ್ಯಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರ್ಕಳದಿಂದ ನಿಟ್ಟೆಯತ್ತ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ […]

ನಿಟ್ಟೆಯಲ್ಲಿ ಕಾರು ಬೈಕ್‌ ಅಪಘಾತ – ಸವಾರ ಸಾವು Read More »

ಎಸ್‌ವಿಟಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

ಕಾರ್ಕಳ : ಎಸ್‌ವಿಟಿ ವನಿತಾ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ಗೆ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ. ಕನ್ನಡ ಮಾಧ್ಯಮದಲ್ಲಿ 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಮೂವರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಮೂವರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಎಸ್‌ವಿಟಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ Read More »

ಗಾಂಧಿ ಮೈದಾನ ಬಳಿಯ ಶಾಂಭವಿ ಡಿವೈನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ

ಕಾರ್ಕಳ : ಗಾಂಧಿ ಮೈದಾನ ಬಳಿಯ ಶಾಂಭವಿ ಡಿವೈನ್‌ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಮನೆಯೊಂದರಲ್ಲಿ ಎ. 23ರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಎಸಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿ ದುರ್ಘಟನೆ ನಡೆದಿದೆ ಎನ್ನಲಾಗಿದ್ದು ಪರಿಣಾಮ 5 ಲಕ್ಷ ರೂ. ನಷ್ಟ ಸಂಭವಿಸಿದೆ.ಸಂದೀಪ್‌ ಹೆಗ್ಡೆ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಗೆ ಮನೆ ಹಾಲ್‌ನಲ್ಲಿದ್ದ ಟಿವಿ ಸೇರಿದಂತೆ ಪರಿಕರಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ.ಘಟನಾ ಸ್ಥಳಕ್ಕೆ ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ

ಗಾಂಧಿ ಮೈದಾನ ಬಳಿಯ ಶಾಂಭವಿ ಡಿವೈನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ Read More »

ಬೈಲೂರು ಜೂನಿಯರ್‌ ಕಾಲೇಜಿನ ಲಿಝಾ ಬಾರ್ಬೋಝಾಗೆ 624 ಅಂಕ

ಕಾರ್ಕಳ : ಬೈಲೂರು ಸರಕಾರಿ ಜೂನಿಯರ್ ಕಾಲೇಜಿನ ಲಿಝಾ ಬಾರ್ಬೋಝಾ ಅವರು 624 ಅಂಕ ಪಡೆಯುವುದರೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಕುಕ್ಕುಂದೂರು ಲ್ಯಾನ್ಸ್‌ಲೆಟ್‌ ಕಿರಣ್‌ ಬಾರ್ಬೋಝಾ ಹಾಗೂ ಲವಿನಾ ಮರಿಯಾ ಪಿಂಟೋ ದಂಪತಿ ಪುತ್ರಿ.

ಬೈಲೂರು ಜೂನಿಯರ್‌ ಕಾಲೇಜಿನ ಲಿಝಾ ಬಾರ್ಬೋಝಾಗೆ 624 ಅಂಕ Read More »

ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದ ಎನ್‌ಎನ್‌ವಿ ಪೌಢಶಾಲೆಯ ವಿಶಾಲ್ಯ ಕಾಮತ್‌

ಕಾರ್ಕಳ : ಹಿರಿಯಂಗಡಿ ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ವಿಶಾಲ್ಯ ಕಾಮತ್ ಅವರು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 617 ಅಂಕ ಗಳಿಸಿ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿರುತ್ತಾರೆ. ಈಕೆ ಕಾರ್ಕಳ ತೆಳ್ಳಾರು ರಸ್ತೆ ಶ್ರೀನಿವಾಸ್‌ ಕಾಮತ್‌ ಹಾಗೂ ರಾಧಿಕಾ ಕಾಮತ್‌ ದಂಪತಿ ಪುತ್ರಿ.

ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದ ಎನ್‌ಎನ್‌ವಿ ಪೌಢಶಾಲೆಯ ವಿಶಾಲ್ಯ ಕಾಮತ್‌ Read More »

ಶಂಕರನಾರಾಯಣ ಪ್ರೌಢಶಾಲಾ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ ರಾಜ್ಯಕ್ಕೆ ಪ್ರಥಮ

ಉಡುಪಿ : ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕುಂದಾಪುರದ ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಸಾಧನೆ ಮೆರೆದಿದ್ದಾರೆ. 625 ಅಂಕ ಪಡೆದ ಏಳು ಮಂದಿ ವಿದ್ಯಾರ್ಥಿಗಳ ಪೈಕಿ ಪ್ರೀತಂ ಒಬ್ಬನಾಗಿದ್ದಾನೆ. ಪ್ರೀತಂ ಖಾಸಗಿ ಬಸ್ ಕಂಡಕ್ಟರ್ ಆಗಿರುವ ಗಣಪತಿ ಪೂಜಾರಿ ಮತ್ತು ನಾಗರತ್ನ ದಂಪತಿ ಪುತ್ರ. 625 ಅಂಕ ಪಡೆದಿರುವ ಕುರಿತು ಅತೀವ ಹೆಮ್ಮೆ ಸಂತಸವಿದೆ. ತಂದೆ, ತಾಯಿ ಮತ್ತು

ಶಂಕರನಾರಾಯಣ ಪ್ರೌಢಶಾಲಾ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ ರಾಜ್ಯಕ್ಕೆ ಪ್ರಥಮ Read More »

ರಾಜಾಪುರ ಸಾರಸ್ವತ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಗೆ 30ರ ಸಂಭ್ರಮ

ಎ. 26ರಂದು ಸಹಕಾರ ಸಿಂಧೂರ ಲೋಕಾರ್ಪಣೆ : ಕಡಾರಿ ರವೀಂದ್ರ ಪ್ರಭು ಕಾರ್ಕಳ : 1996ರಲ್ಲಿ 300 ಚದರಡಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಗೊಂಡ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸಂಸ್ಥೆಯ 30ನೇ ವರ್ಷದ ಸಂಭ್ರಮದ ಅಂಗವಾಗಿ ನಿರ್ಮಿಸಲಾದ ಸಹಕಾರ ಸಿಂಧೂರ ವಾಣಿಜ್ಯ ಸಂಕೀರ್ಣವು ಎ. 26ರಂದು ಬೆಳಗ್ಗೆ 10:30ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ತಿಳಿಸಿದರು.ಕೇವಲ 3 ಲಕ್ಷ ರೂ. ಬಂಡವಾಳ ಮತ್ತು 400 ಸದಸ್ಯರನ್ನು

ರಾಜಾಪುರ ಸಾರಸ್ವತ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಗೆ 30ರ ಸಂಭ್ರಮ Read More »

ಲ್ಯಾಂಪ್ಸ್‌ ಸಹಕಾರ ಮಹಾ ಮಂಡಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ರಾಘವ ನಾಯ್ಕ ಮುದ್ರಾಡಿಗೆ ಸೋಲು

ಕಾರ್ಕಳ : ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾ ಮಂಡಳ ಮೈಸೂರು ಇದರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಘವ ನಾಯ್ಕ ಮುದ್ರಾಡಿ ಅವರು ಅರುಣ್‌ ಅವರ ಎದುರು ಸೋಲು ಕಂಡಿದ್ದಾರೆ. ಎ. 23ರಂದು ಮೈಸೂರಿನ ಮಹಾಮಂಡಲ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಆಗಿದ್ದ ರಾಘವ ನಾಯ್ಕ ಮುದ್ರಾಡಿ ಅವರಿಗೆ ಸೋಲಾಗಿದೆ. ಅರುಣ್‌ ಅವರು 9 ಮತಗಳನ್ನು ಗಳಿಸಿದ್ದರೆ, ರಾಘವ ಅವರಿಗೆ 3 ಮತ ದೊರೆತಿದೆ. ಸಿದ್ದಮರಿ ಗೌಡ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುತ್ತಾರೆ.

ಲ್ಯಾಂಪ್ಸ್‌ ಸಹಕಾರ ಮಹಾ ಮಂಡಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ರಾಘವ ನಾಯ್ಕ ಮುದ್ರಾಡಿಗೆ ಸೋಲು Read More »

ಕ್ರೈಸ್ಟ್‌ಕಿಂಗ್‌ : ಸತತ 17ನೇ ಬಾರಿಗೆ ಶೇ. 100 ಫಲಿತಾಂಶ

617 ಅಂಕಗಳನ್ನು ಪಡೆದ ಶ್ರೀಶಾ ಪ್ರಭು ರಾಜ್ಯಕ್ಕೆ 9ನೇ ರ‍್ಯಾಂಕ್ 18 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ – 95 ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ ಕಾರ್ಕಳ : ಕ್ರೈಸ್ಟ್‌ಕಿಂಗ್‌ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತೊಮ್ಮೆ 100% ಶೇಕಡಾ ಫಲಿತಾಂಶದೊಂದಿಗೆ ಸತತ 17ನೇ ಬಾರಿಗೆ ಈ ಸಾಧನೆ ಮಾಡಿದೆ. ಕೆ. ಶ್ರೀಶಾ ಪ್ರಭು 625ಕ್ಕೆ 617 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. 18 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು 159 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು

ಕ್ರೈಸ್ಟ್‌ಕಿಂಗ್‌ : ಸತತ 17ನೇ ಬಾರಿಗೆ ಶೇ. 100 ಫಲಿತಾಂಶ Read More »

ತಂದೆಯಿಲ್ಲದ ನೋವಿನಲ್ಲೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಜ್ಞಾನಸುಧಾದ ಮಹಾಲಕ್ಷ್ಮೀಯರು

ಕಾರ್ಕಳ : 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಕಾರ್ಕಳ ಜ್ಞಾನಸುಧಾದ ಮಹಾಲಕ್ಷ್ಮೀಯರು ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದರೂ ಎಸ್ಸೆಸೆಲ್ಸಿ ಪರೀಕ್ಷೆ ಸಾಧನೆ ಮೆರೆದಿದ್ದಾರೆ. ಮಹಾಲಕ್ಷ್ಮೀ ಭಾಗವ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಜಗದೀಶ್‌ ಭಾಗವ ಹಾಗೂ ವನಿತಾ ದಂಪತಿ ಪುತ್ರಿ. ಈಕೆಯ ತಂದೆ 2025ರ ಮೇ ತಿಂಗಳಲ್ಲಿ ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದ್ದರು. ಮಹಾಲಕ್ಷ್ಮೀ ಪೈ. ಬಿ. ಕಾರ್ಕಳ ತಾಲೂಕು ಬೈಲೂರು ಗುಡ್ಡೆಯಂಗಡಿ ಮಂಜುನಾಥ ಪೈ ಹಾಗೂ ಮೇಘ ಪೈ ದಂಪತಿ ಪುತ್ರಿ. 2023ರ ಡಿಸೆಂಬರ್‌ ತಿಂಗಳ

ತಂದೆಯಿಲ್ಲದ ನೋವಿನಲ್ಲೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಜ್ಞಾನಸುಧಾದ ಮಹಾಲಕ್ಷ್ಮೀಯರು Read More »

error: Content is protected !!
Scroll to Top