Author name: newskarkala desk

ಗುಂಡಿನ ದಾಳಿಗೆ ಮುನ್ನ ಕುಟುಂಬಕ್ಕೆ ಪತ್ರ ಕಳುಹಿಸಿದ್ದ ಶೂಟೌಟ್ ಆರೋಪಿ ಅಲೆನ್‌

ದಾಳಿಯ ಹಿಂದೆ ಕ್ರಿಶ್ಚಿಯನ್‌ ವಿರೋಧಿ ಉದ್ದೇಶ ಅಡಗಿತ್ತು ಎಂದ ಟ್ರಂಪ್‌ ವಾಷಿಂಗ್ಟನ್‌ : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ ಕೋಲ್ ಥಾಮಸ್ ಅಲೆನ್ ಘಟನೆಗೂ ಮುನ್ನ ತನ್ನ ಕುಟುಂಬ ಸದಸ್ಯರಿಗೆ ಆಡಳಿತ ವಿರೋಧಿ ಮತ್ತು ಅಶಾಂತಿಕರ ಘೋಷಣಾ ಪತ್ರವನ್ನು ಕಳುಹಿಸಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅಲೆನ್ ತಾನೇ ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್ ಎಂದು ಕರೆದುಕೊಂಡಿದ್ದು, ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡ ಯೋಜನೆಯನ್ನು ವಿವರಿಸಿದ್ದಾನೆ. ಈ ಸಂದೇಶವನ್ನು ಗುಂಡಿನ ದಾಳಿ ನಡೆಯುವ […]

ಗುಂಡಿನ ದಾಳಿಗೆ ಮುನ್ನ ಕುಟುಂಬಕ್ಕೆ ಪತ್ರ ಕಳುಹಿಸಿದ್ದ ಶೂಟೌಟ್ ಆರೋಪಿ ಅಲೆನ್‌ Read More »

ರೈತರ ಕುಮ್ಕಿ ಹಕ್ಕು

ಕುಮ್ಕಿ ಎಂಬ ಪದವು ಮೂಲತಃ ‘ಕುಮಕು’ ಪದದಿಂದ ಬಂದಿದೆ. ಕುಮಕು ಅಂದರೆ ಸಹಾಯ ಅಥವಾ ಪ್ರೋತ್ಸಾಹ ಎಂದರ್ಥ. ಕದಿಂ ವರ್ಗದಾರರ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಮತ್ತು ರೈತರಿಗೆ ಸಹಾಯ ಮಾಡುವುದಕ್ಕಾಗಿ ಅನೇಕ ದಶಕಗಳ ಹಿಂದೆ ಬ್ರಿಟಿಷರು ಸರಕಾರದ ಮಾಲೀಕತ್ವದ ಸ್ಥಳದಲ್ಲಿ ರೈತರು ಕುಮ್ಕಿ ಹಕ್ಕನ್ನು ಚಲಾಯಿಸುವ ಬಗ್ಗೆ ‘ಮದ್ರಾಸ್ ರೆವೆನ್ಯೂ ಬೋರ್ಡ್ “ಸ್ಟ್ಯಾಡಿಂಗ್‌ ಆರ್ಡರ್ಸ್” ಎಂಬ ವಿಶೇಷ ಕಾನೂನನ್ನು ಜ್ಯಾರಿಗೆ ತಂದಿರುತ್ತಾರೆ. ‌ ‘ಸೌತ್ ಕೆನರಾ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ನಮ್ಮ ಈಗಿನ ಅವಿಭಜಿತ ದಕ್ಷಿಣ ಕನ್ನಡ

ರೈತರ ಕುಮ್ಕಿ ಹಕ್ಕು Read More »

ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಕಾನೂನಾತ್ಮಕ ಪಾಲು

ಜನಹಿತಕ್ಕೆ ವಿರುದ್ಧವಾಗಿರುವ ಕಾಯ್ದೆ ಹಿಂಪಡೆಯುವಂತೆ ಶ್ರೀ ಶಿವಾಚಾರ್ಯ ಸ್ವಾಮೀಜಿ ಸಲಹೆ ಶಿವಮೊಗ್ಗ : ಮಹಿಳೆಯರು ಇತ್ತೀಚಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದು, ಇದರಿಂದಾಗಿ ಕುಟುಂಬಗಳು ಒಡೆಯುತ್ತಿವೆ. ಜನಹಿತಕ್ಕೆ ವಿರುದ್ಧವಾದ ಈ ಕಾಯ್ದೆ ಹಿಂಪಡೆಯಬೇಕು ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಹೊಳೆಹೊನ್ನೂರು ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಸ್ವಾಮೀಜಿ ತಂದೆ-ತಾಯಿ, ಅಣ್ಣ-ತಮ್ಮಂದಿರು, ಸಹೋದರಿ ಮದುವೆಗಾಗಿ ಸಾಲ ಮಾಡಿರುತ್ತಾರೆ. ಆಸ್ತಿಯನ್ನೂ ಮಾರಾಟ ಮಾಡಿರುತ್ತಾರೆ. ಆದರೂ ಉಳಿದ ಆಸ್ತಿಯಲ್ಲಿ ಪಾಲು ಕೇಳುವುದು ತಪ್ಪು.

ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಕಾನೂನಾತ್ಮಕ ಪಾಲು Read More »

ಮಹಾಮಸ್ತಕಾಭಿಷೇಕ ಹಿನ್ನೆಲೆ – ಪ್ಲಾಸ್ಟಿಕ್‌ ಮುಕ್ತವಾಗಲಿ ಕಾರ್ಕಳ

​ಕಾರ್ಕಳದ ಸಾಂಸ್ಕೃತಿಕ ಗರಿಮೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ನಗರದಾದ್ಯಂತ ರಾರಾಜಿಸುತ್ತಿರುವ ಅನಧಿಕೃತ ಪ್ಲೆಕ್ಸ್‌ ಮತ್ತು ಬ್ಯಾನರ್‌ಗಳು ಈ ಸೌಂದರ್ಯಕ್ಕೆ ಮಸುಕುಬಾಧೆ ಉಂಟುಮಾಡುತ್ತಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ಲಾಸ್ಟಿಕ್ ಮುಕ್ತ ಬ್ಯಾನರ್‌ಗಳ ಬಳಕೆಗೆ ಸರ್ಕಾರ ಈಗಾಗಲೇ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಈ ನಿಯಮಗಳು ಕೇವಲ ಕಾಗದಕ್ಕೆ ಸೀಮಿತವಾಗದೇ ಕಾರ್ಕಳದ ಪ್ರತಿ ಬೀದಿಗಳಲ್ಲಿಯೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕಾದ ಅಗತ್ಯವಿದೆ. ಆಡಳಿತ ಮಂಡಳಿಯು ಈ ನಿಟ್ಟಿನಲ್ಲಿ ಕೇವಲ ಮೇಲ್ನೋಟದ ಗಮನ ಹರಿಸದೆ, ಒಂದು

ಮಹಾಮಸ್ತಕಾಭಿಷೇಕ ಹಿನ್ನೆಲೆ – ಪ್ಲಾಸ್ಟಿಕ್‌ ಮುಕ್ತವಾಗಲಿ ಕಾರ್ಕಳ Read More »

ಎ. 28ರವರೆಗೆ ಕರಾವಳಿಯಲ್ಲಿ ಮಳೆ ಸಾಧ್ಯತೆ

ಕಾರ್ಕಳ : ಎ. 28ರವರೆಗೆ ಕರಾವಳಿಯ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ತಿಳಿಸಿದೆ.ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಬೇಸಿಲಿನ ಬೇಗೆ ವಿಪರೀತವಾಗಿದೆ. ಸಂಜೆ ವೇಳೆ ಮೋಡ ಕವಿದ ವಾತಾವರಣ ಗೋಚರಿಸುತ್ತಿದೆ. ಎ. 22ರಂದು ಕಾರ್ಕಳದ ವಿವಿಧೆಡೆ ಮಳೆಯಾಗಿತ್ತು.

ಎ. 28ರವರೆಗೆ ಕರಾವಳಿಯಲ್ಲಿ ಮಳೆ ಸಾಧ್ಯತೆ Read More »

ನಿಟ್ಟೆಯಲ್ಲಿ ಕಾರು ಬೈಕ್‌ ಅಪಘಾತ – ಸವಾರ ಸಾವು

ಇಂಜಿನೀಯರಿಂಗ್‌ ಕಾಲೇಜು ವಿದ್ಯಾರ್ಥಿಗಳ ಅತಿವೇಗಕ್ಕೆ ಅಮಾಯಕರು ಬಲಿ ಕಾರ್ಕಳ : ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ಕ್ರಾಸ್‌ ಬಳಿ ಕಾರೊಂದು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸಾವಿಗೀಡಾದ ಘಟನೆ ಎ. 24ರ ಸಂಜೆ ಸಂಭವಿಸಿದೆ. ನಿಟ್ಟೆ ಸಮೀಪದ ಬಜಕಳ ನಿವಾಸಿ ನವೀನ್‌ಚಂದ್ರ ಮೂಲ್ಯ (45) ಮೃತಪಟ್ಟ ದುರ್ದೈವಿ.ನವೀನ್‌ಚಂದ್ರ ಅವರು ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಪ್ರೇರಣ ಮೂಲ್ಯಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರ್ಕಳದಿಂದ ನಿಟ್ಟೆಯತ್ತ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌

ನಿಟ್ಟೆಯಲ್ಲಿ ಕಾರು ಬೈಕ್‌ ಅಪಘಾತ – ಸವಾರ ಸಾವು Read More »

ಎಸ್‌ವಿಟಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

ಕಾರ್ಕಳ : ಎಸ್‌ವಿಟಿ ವನಿತಾ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ಗೆ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ. ಕನ್ನಡ ಮಾಧ್ಯಮದಲ್ಲಿ 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಮೂವರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಮೂವರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಎಸ್‌ವಿಟಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ Read More »

ಗಾಂಧಿ ಮೈದಾನ ಬಳಿಯ ಶಾಂಭವಿ ಡಿವೈನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ

ಕಾರ್ಕಳ : ಗಾಂಧಿ ಮೈದಾನ ಬಳಿಯ ಶಾಂಭವಿ ಡಿವೈನ್‌ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಮನೆಯೊಂದರಲ್ಲಿ ಎ. 23ರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಎಸಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿ ದುರ್ಘಟನೆ ನಡೆದಿದೆ ಎನ್ನಲಾಗಿದ್ದು ಪರಿಣಾಮ 5 ಲಕ್ಷ ರೂ. ನಷ್ಟ ಸಂಭವಿಸಿದೆ.ಸಂದೀಪ್‌ ಹೆಗ್ಡೆ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಗೆ ಮನೆ ಹಾಲ್‌ನಲ್ಲಿದ್ದ ಟಿವಿ ಸೇರಿದಂತೆ ಪರಿಕರಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ.ಘಟನಾ ಸ್ಥಳಕ್ಕೆ ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ

ಗಾಂಧಿ ಮೈದಾನ ಬಳಿಯ ಶಾಂಭವಿ ಡಿವೈನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ Read More »

ಬೈಲೂರು ಜೂನಿಯರ್‌ ಕಾಲೇಜಿನ ಲಿಝಾ ಬಾರ್ಬೋಝಾಗೆ 624 ಅಂಕ

ಕಾರ್ಕಳ : ಬೈಲೂರು ಸರಕಾರಿ ಜೂನಿಯರ್ ಕಾಲೇಜಿನ ಲಿಝಾ ಬಾರ್ಬೋಝಾ ಅವರು 624 ಅಂಕ ಪಡೆಯುವುದರೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಕುಕ್ಕುಂದೂರು ಲ್ಯಾನ್ಸ್‌ಲೆಟ್‌ ಕಿರಣ್‌ ಬಾರ್ಬೋಝಾ ಹಾಗೂ ಲವಿನಾ ಮರಿಯಾ ಪಿಂಟೋ ದಂಪತಿ ಪುತ್ರಿ.

ಬೈಲೂರು ಜೂನಿಯರ್‌ ಕಾಲೇಜಿನ ಲಿಝಾ ಬಾರ್ಬೋಝಾಗೆ 624 ಅಂಕ Read More »

ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದ ಎನ್‌ಎನ್‌ವಿ ಪೌಢಶಾಲೆಯ ವಿಶಾಲ್ಯ ಕಾಮತ್‌

ಕಾರ್ಕಳ : ಹಿರಿಯಂಗಡಿ ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ವಿಶಾಲ್ಯ ಕಾಮತ್ ಅವರು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 617 ಅಂಕ ಗಳಿಸಿ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿರುತ್ತಾರೆ. ಈಕೆ ಕಾರ್ಕಳ ತೆಳ್ಳಾರು ರಸ್ತೆ ಶ್ರೀನಿವಾಸ್‌ ಕಾಮತ್‌ ಹಾಗೂ ರಾಧಿಕಾ ಕಾಮತ್‌ ದಂಪತಿ ಪುತ್ರಿ.

ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದ ಎನ್‌ಎನ್‌ವಿ ಪೌಢಶಾಲೆಯ ವಿಶಾಲ್ಯ ಕಾಮತ್‌ Read More »

error: Content is protected !!
Scroll to Top