ಅಂತರಾಷ್ಟ್ರೀಯ ಸಿಇಒ ಮ್ಯಾಗಜೀನ್‌ ಏಷ್ಯಾ ವಿಭಾಗದ 2022ರ ಸಂಚಿಕೆಯಲ್ಲಿ ಕಾರ್ಕಳದ ಆನಂದ ಶೆಟ್ಟಿ

ಅಂತರಾಷ್ಟ್ರೀಯ ಸಿಇಒ ಮ್ಯಾಗಜೀನ್‌ ಏಷ್ಯಾ ವಿಭಾಗದ 2022ರ ಸಂಚಿಕೆಯಲ್ಲಿ ಕಾರ್ಕಳದ ಆನಂದ ಶೆಟ್ಟಿ

ಕಾರ್ಕಳ : ಅಂತರಾಷ್ಟ್ರೀಯ ಸಿಇಒ ಮ್ಯಾಗಜೀನ್‌ ಏಷ್ಯಾ ವಿಭಾಗವು ಮಾರ್ಚ್‌ 2022ರ ಸಂಚಿಕೆಯಲ್ಲಿ ಭುವನೇಂದ್ರ ಕಾಲೇಜಿನ ಹಿರಿಯ ವಿದ್ಯಾರ್ಥಿ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಆನಂದ ಶೆಟ್ಟಿ ಅವರಿಗೆ ಸ್ಥಾನ ನೀಡಿ ಗೌರವಿಸಿದೆ. ಇಂಡೋನೇಷ್ಯಾದ ನೊವೊ ನೊರ್ಡಿಸ್ಕ್‌ ಸಂಸ್ಥೆಯ ಮ್ಯಾನೇಜಿಂಗ್‌ ಡೈರಕ್ಟರ್‌ ಆಗಿರುವ ಆನಂದ ಶೆಟ್ಟಿ ತನ್ನ ಹುಟ್ಟೂರಿಗೆ ಹಲವಾರು ರೀತಿಯಲ್ಲಿ ಕೊಡುಗೆ ನೀಡಿರುತ್ತಾರೆ.

1,500 ಆಕ್ಸಿಮೀಟರ್‌ ಕೊಡುಗೆ
ಕಳೆದ ವರ್ಷ ಕೊರೊನಾ ಮಹಾಮಾರಿಯಿಂದ ಕಾರ್ಕಳವನ್ನು ರಕ್ಷಿಸುವ ನಿಟ್ಟಿನಲ್ಲಿ ಆನಂದ ಶೆಟ್ಟಿ ಅವರು ರೂ. 21 ಲಕ್ಷ ರೂ. ವೆಚ್ಚದಲ್ಲಿ 1,500 ಆಕ್ಸಿಮೀಟರ್‌ ಅನ್ನು ಕೊಡುಗೆಯಾಗಿ ನೀಡುವ ಮೂಲಕ ಕಾಳಜಿ ಮೆರೆದಿದ್ದರು. ಕಠಿಣ ಪರಿಶ್ರಮ, ಶ್ರದ್ಧೆ, ನಾಯಕತ್ವ, ಸಾಮಾಜಿಕ ಕಳಕಳಿಯಿಂದಲೇ ಇದೀಗ ಆನಂದ ಶೆಟ್ಟಿ ಅವರು ಪ್ರತಿಷ್ಠಿತ ಸಿಇಒ ಮ್ಯಾಗಜೀನ್‌ ಏಷ್ಯಾ ವಿಭಾಗದ ಸಂಚಿಕೆಯಲ್ಲಿ ಗೌರವಿಸಲ್ಪಟ್ಟಿದ್ದಾರೆ.

1986-89ರಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ಟುಡೆಂಟ್‌ ಕೋಟಾದಲ್ಲಿ ಸೆನೆಟ್‌ ಮೆಂಬರ್‌ ಆಗಿ ಆನಂದ ಶೆಟ್ಟಿ ಆಯ್ಕೆಯಾಗಿದ್ದರು. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯ ಕಾರ್ಯದರ್ಶಿಯಾಗಿದ್ದರು. ಕೊಡುಗೈ ದಾನಿಯಾಗಿರುವ ಆನಂದ ಶೆಟ್ಟಿ ಅವರು ಭುವನೇಂದ್ರ ಕಾಲೇಜಿನ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 2 ಲಕ್ಷ ರೂ. ನೀಡಿದ್ದರು. ಕಡುಬಡತನದಿಂದ ಬಂದ ಹುಡುಗ ಯಾವುದೇ ಪ್ರಭಾವಿಗಳ ಸಹಕಾರವಿಲ್ಲದೇ ಇಂದು ವಿಶ್ವದ ಸಾಧಕರ ಸಾಲಿನಲ್ಲಿ ಗುರುತಿಸಿಕೊಂಡಿರುವುದು ನಮ್ಮ ಕಾಲೇಜಿಗೆ ಹೆಮ್ಮೆಯ ಸಂಗತಿ ಎಂದು ಆನಂದ ಶೆಟ್ಟಿ ಅವರ ಸಹಪಾಠಿ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್‌ ಸಂತಸ ವ್ಯಕ್ತಪಡಿಸಿದರು.



































































































































































































































































error: Content is protected !!
Scroll to Top