ದಿಲ್ಲಿ : ಚಂದ್ರಗ್ರಹಣ ಮತ್ತು ಗುರು ಪೂರ್ಣಮೆ ಒಂಹೇ ದಿವಸ ಸಂಭವಿಸುವ ಅಪರೂಪದ ವಿದ್ಯಮಾನ ಭಾನುವಾರ ಸಂಭವಿಸಲಿದೆ. ಒಂದು ತಿಂಗಳ ಬಳಿಕ ಮತ್ತೆ ಜುಲೈ 5ಕ್ಕೆ ಚಂದಿರನಿಗೆ ಗ್ರಹಣ ಹಿಡಿಯಲಿದೆ. ಆದರೆ ಈ ಚಂದ್ರಗ್ರಹಣವನ್ನು ನೋಡುವ ಅವಕಾಶ ನಮಗಿಲ್ಲ. ವಿಶ್ವದ ಇತರ ಭಾಗಗಳಲ್ಲಿ ಈ ಚಂದ್ರ ಗ್ರಹಣ ಬೆಳಗ್ಗೆ 8.37 ಕ್ಕೆ ಆರಂಭಗೊಳ್ಳಲಿದೆ. ಬೆಳಗ್ಗೆ 9.59 ಕ್ಕೆ ಗ್ರಹಣ ಉಚ್ಛ್ರಾಯ ಸ್ಥಿತಿಗೆ ತಲುಪಲಿದ್ದು, ಬೆಳಗ್ಗೆ 11.37ಕ್ಕೆ ಅಂತ್ಯವಾಗಲಿದೆ. ಈ ಗ್ರಹಣದ ಒಟ್ಟು ಅವಧಿ 2 ಗಂಟೆ 43 ನಿಮಿಷ 44 ಸೆಕೆಂಡ್ ಗಳು.
ಈ ವರ್ಷವಿಡಿ ಗ್ರಹಣಗಳದ್ದೇ ಸುದ್ದಿ. ಒಟ್ಟು 6 ಗ್ರಹಣಗಳನ್ನು ಹೊತ್ತು ತಂದ ವರ್ಷ 2020. ಜುಲೈ ತಿಂಗಳು ಇದೀಗ ಮತ್ತೊಂದು ಗ್ರಹಣಕ್ಕೆ ಸಾಕ್ಷಿಯಾಗಲಿದೆ. ಈ ಬಾರಿ ಜುಲೈ 5ಕ್ಕೆ ಅಂದರೆ ಗುರುಪೌರ್ಣಿಮೆಯ ದಿನ ಚಂದಿರನಿಗೆ ಗ್ರಹಣ ಹಿಡಿಯಲಿದೆ. ಕಳೆದ ಜೂನ್ 5 ರಂದು ಚಂದ್ರಗ್ರಹಣ ಸಂಭವಿಸಿದ್ದು, ಜೂನ್ 21ರಂದು ಸೂರ್ಯ ಗ್ರಹಣ ಸಂಭವಿಸಿತ್ತು. ಈ ಬಾರಿಯ ಚಂದ್ರಗ್ರಹಣ ತನ್ನೊಂದಿಗೆ ಹಲವು ಸಣ್ಣ ಹಾಗೂ ದೊಡ್ಡ ಪ್ರಭಾವಗಳನ್ನು ಹೊತ್ತು ತರಲಿದೆ.
ಈ ಗ್ರಹಣದ ವಿಶೇಷತೆ ಎಂದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಹೀಗಾಗಿ ಭಾರತದಲ್ಲಿ ಇದರ ಸೂತಕ ಕಾಲ ಕೂಡ ಪ್ರಭಾವಶಾಲಿಯಾಗಿರುವುದಿಲ್ಲ.
ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣ ಧನು ರಾಶಿಯಲ್ಲಿ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೂನ್ 30ರಂದೇ ದೇವ ಗುರು ಬೃಹಸ್ಪತಿ ಧನು ರಾಶಿಗೆ ಪ್ರವೇಶಿಸಿದ್ದಾರೆ. ಈ ರಾಶಿಯಲ್ಲಿ ರಾಹು ಮೊದಲಿನಿಂದಲೇ ವಿರಾಜಮಾನನಾಗಿದ್ದಾನೆ. ಇಂತಹುದರಲ್ಲಿ ಗ್ರಹಣದ ವೇಳೆ ಬೃಹಸ್ಪತಿಯ ಮೇಲೆ ರಾಹುವಿನ ದೃಷ್ಟಿ ಧನು ರಾಶಿಯ ಮೇಲೆ ನೇರ ಪ್ರಭಾವ ಬೀರಲಿದೆ.
ಚಂದ್ರ ಸ್ವಲ್ಪ ಶಕ್ತಿಹೀನನಾದ ಕಾರಣ ಈ ರಾಶಿಯ ಜನರು ಸ್ವಲ್ಪ ಕಷ್ಟ ಕಾಲ ಎದುರಿಸಬೇಕಾಗಿ ಬರಲಿದೆ. ಚಂದ್ರಗ್ರಹಣದ ವೇಳೆ ಮನಸ್ಸು ಅಶಾಂತವಾಗಿರಲಿದೆ ಹಾಗೂ ನಕಾರಾತ್ಮಕ ಭಾವನೆಗಳಿಂದ ಮನಸ್ಸು ಕೂಡಿರಲಿದೆ.