• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಚುನಾವಣೆ

ಹೆಬ್ರಿ : ಮತ ಚಲಾಯಿಸದೇ ವಾಪಸ್‌ ತೆರಳಿದ ಮತದಾರರು

ಹೆಬ್ರಿ : ತಾಸುಗಟ್ಟೆಲೆ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು ತಮ್ಮ ಹಕ್ಕು ಚಲಾಯಿಸದೇ ಮರಳಿ ಮನೆಗೆ ತೆರಳಿದ ಘಟನೆ ಹೆಬ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ನಡೆದಿದೆ. ಬಿರು ಬಿಸಿಲಿಗೆ ಒಂದೂವರೆ ಗಂಟೆಗಳ ಕಾಲ ಸಾಲುದ್ದ ನಿಂತಿದ್ದ ಮತದಾರರು ಸಮಯ 12:30ಯಾಗುತ್ತಿದ್ದಂತೆ ವಾಪಸ್‌ ಮನೆಗೆ ತೆರಳಿದ್ದಾರೆ. 1250 ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಹೆಬ್ರಿ ಸರಕಾರಿ ಶಾಲಾ ಸಖಿ ಮತಗಟ್ಟೆಯಲ್ಲಿ ಒಂದೇ ಮತಯಂತ್ರವಿತ್ತು. ಹೀಗಾಗಿ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಇದರಿಂದ ಬೇಸತ್ತ ಮತದಾರರು ಮರಳಿ […]

ಹೆಬ್ರಿ : ಮತ ಚಲಾಯಿಸದೇ ವಾಪಸ್‌ ತೆರಳಿದ ಮತದಾರರು Read More »

ಕಾರ್ಕಳದಲ್ಲಿ ಶಾಂತಿಯುತ ಮತದಾನ : 3 ಗಂಟೆ ವೇಳೆಗಾಗಲೇ 62.20 ಶೇ. ಮತದಾನ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 62.20 ಮತದಾನವಾಗಿದೆ. 61,660 ಮಹಿಳೆಯರು, 56,882 ಪುರುಷರು ಸೇರಿದಂತೆ ಒಟ್ಟು 1,18,542 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಮಧ್ಯಾಹ್ನ 1 ಗಂಟೆಯವರೆಗೆ ಶೇ. 49.13 ಮತದಾನವಾಗಿದ್ದು, ಆ ನಂತರದಲ್ಲಿ ಬಿರು ಬಿಸಿಲಿನ ಪರಿಣಾಮವಾಗಿ ಮತದಾನದ ಪ್ರಮಾಣ ಕಡಿಮೆಯಾಗಿದೆ.

ಕಾರ್ಕಳದಲ್ಲಿ ಶಾಂತಿಯುತ ಮತದಾನ : 3 ಗಂಟೆ ವೇಳೆಗಾಗಲೇ 62.20 ಶೇ. ಮತದಾನ Read More »

ಮತಗಟ್ಟೆಯಲ್ಲಿ ಮತದಾನಕ್ಕೂ ಮುನ್ನ ವೃದ್ಧೆ ಸಾವು

ಬೆಳಗಾವಿ: ಮತ ಚಲಾಯಿಸಲು ಬಂದಿದ್ದ ವೃದ್ಧೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿಯಲ್ಲಿ ನಡೆದಿದೆ. ಯರಝರ್ವಿ ಗ್ರಾಮದ 70 ವರ್ಷದ ಪಾರವ್ವ ಸಿದ್ನಾಳ ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ. ಮತಗಟ್ಟೆಯ ಆವರಣದಲ್ಲೇ ಹೃದಯಾಘಾತದಿಂದ ವ್ಯಕ್ತಿ ನಿಧನಹಾಸನದಲ್ಲಿ ಮತದಾನ ಮಾಡಿ ಹೊರ ಬಂದ‌ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ

ಮತಗಟ್ಟೆಯಲ್ಲಿ ಮತದಾನಕ್ಕೂ ಮುನ್ನ ವೃದ್ಧೆ ಸಾವು Read More »

ಬೆಳಗ್ಗೆ 11 ಗಂಟೆಯವರೆಗೆ ಶೇ. 20.94 ಮತದಾನ

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಬಿರುಸಿನ ಮತದಾನ ಬೆಂಗಳೂರು : ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಂದುವರಿದಿದ್ದು ಬೆಳಗ್ಗೆ 11 ಗಂಟೆ ವೇಳೆಗೆ ಶೇ. 20.94ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ.19.30ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ. 17.50ರಷ್ಟು, ಬೆಂಗಳೂರು ದಕ್ಷಿಣದಲ್ಲಿ ಶೇ.19.18, ಬೆಂಗಳೂರು ನಗರದಲ್ಲಿ ಶೇ.17.72ರಷ್ಟು ಮತದಾನ ಆಗಿದೆ. ಬಾಗಲಕೋಟೆಯಲ್ಲಿ ಶೇ. 23.44ರಷ್ಟು ಹಾಗೂ ಬೆಳಗಾವಿಯಲ್ಲಿ ಶೇ. 20.76ರಷ್ಟು ಮತದಾನವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಬಿರುಸಿನ ಮತದಾನವಾಗುತ್ತಿರುವ ಕುರಿತು ವರದಿಗಳು ಬಂದಿವೆ. ಬೆಳಿಗ್ಗೆ 7 ಗಂಟೆಯಿಂದ

ಬೆಳಗ್ಗೆ 11 ಗಂಟೆಯವರೆಗೆ ಶೇ. 20.94 ಮತದಾನ Read More »

ಕಾರ್ಕಳ: ಅಭ್ಯರ್ಥಿಗಳಿಂದ ಮತದಾನ : ಬಿರುಸು ಪಡೆದ ಮತದಾನ ಪ್ರಕ್ರಿಯೆ

ಕಾರ್ಕಳ : ಕಾರ್ಕಳ ಕ್ಷೇತ್ರದಾದ್ಯಂತ ಮತದಾನ ಪ್ರಕ್ರಿಯೆ ಶುರುವಾದ ಬೆನ್ನಿಗೆ ಉತ್ತಮ ಮತದಾನವಾಗುತ್ತಿದೆ. ಜನರು ಬೆಳಗ್ಗಿನಿಂದಲೇ ಮತಗಟ್ಟೆಗೆ ಧಾವಿಸುತ್ತಿದ್ದಾರೆ. ಕೆಲಸ ಕಾರ್ಯಗಳಿಗೆ ಹೋಗುವವರು ಬೇಗನೇ ಮತಗಟ್ಟೆಗೆ ತೆರಳಿ ಮತ ಹಾಕುತ್ತಿದ್ದಾರೆ. ಮತದಾನ ಪ್ರಕ್ರಿಯೆ ಬೆಳಗ್ಗೆ 7ಕ್ಕೆ ಶುರುವಾಗಿದ್ದು, ಬಹುತೇಕ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಅಭ್ಯರ್ಥಿಗಳಾದ ಸುನಿಲ್‌ ಕುಮಾರ್‌, ಮುನಿಯಾಲು ಉದಯಕುಮಾರ್‌ ಶೆಟ್ಟಿ, ಪ್ರಮೋದ್‌ ಮುತಾಲಿಕ್‌ ಕಾರ್ಯಕರ್ತರು ಮತ್ತು ಕುಟುಂಬ ಸಮೇತ ತೆರಳಿ ಮತದಾನ ಮಾಡಿದ್ದಾರೆ. ಸುನಿಲ್‌ ಕುಮಾರ್‌ ನಿಟ್ಟೆ ಗ್ರಾಮದ ಅತ್ತೂರು ಕಲಂಬಾಡಿಪದವು ಪ್ರಾಥಮಿಕ ಶಾಲೆಯಲ್ಲಿ,

ಕಾರ್ಕಳ: ಅಭ್ಯರ್ಥಿಗಳಿಂದ ಮತದಾನ : ಬಿರುಸು ಪಡೆದ ಮತದಾನ ಪ್ರಕ್ರಿಯೆ Read More »

ಮತದಾನ ನಮ್ಮ ಹೆಮ್ಮೆ

ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾಗಬೇಕು ಮತದಾನದ ಮಹತ್ವ ಹಳ್ಳಿಯವರಿಂದ ಕಲಿಬೇಕು ನಿಮಗಿದು ಗೊತ್ತೆ? ನಮ್ಮ ಹಳ್ಳಿಗಳಿಗಿಂತ ನಗರದಲ್ಲಿ ಮತದಾನ ಪ್ರಮಾಣ ಕಡಿಮೆ. ಹಳ್ಳಿಯ ಜನರು ಉದ್ಯೋಗದ ನಿಮಿತ್ತ ನಗರದ ಕಡೆ ವಲಸೆ ಹೋದರೂ ಮತದಾನದ ಪ್ರಮಾಣದಲ್ಲಿ ಹಳ್ಳಿಯವರು ಮುಂದಿರುವುದು ನಿಜಕ್ಕೂ ಆದರ್ಶನೀಯ. ಶಿಕ್ಷಣ ಇದ್ದವರು ಕಸ ಎಸೆದು ಶಿಕ್ಷಣ ಇಲ್ಲದವರು ಅದನ್ನು ಸ್ವಚ್ಛ ಮಾಡಿದಾಗ ಶಿಕ್ಷಣಕ್ಕೇನು ಬೆಲೆ ಉಳಿದೀತು? ಅಂತಯೇ ಮತದಾನ ಮಾಡದೆ ಎಷ್ಟು ವಿದ್ಯಾವಂತರಾದರೆ ಏನು ಪ್ರಯೋಜನ, ನಮ್ಮ ಹಿರಿಯರು ಮತದಾನದ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿರುವುದು ಇಂದಿನ ಸೋಮಾರಿ

ಮತದಾನ ನಮ್ಮ ಹೆಮ್ಮೆ Read More »

ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ ಆರೋಪ : ಮಹಿಳಾ ಇನ್ಸ್​​ಪೆಕ್ಟರ್​ ಅಮಾನತು

ಬೆಂಗಳೂರು: ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ ಆರೋಪ ಹಿನ್ನೆಲೆ ಮಹಿಳಾ ಇನ್ಸ್​​ಪೆಕ್ಟರ್​​ ಅಮಾನತು ಆದೇಶವನ್ನು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯಿಂದ ಆದೇಶ ಹೊರಡಿಸಲಾಗಿದೆ. ಭವ್ಯಾ ಅಮಾನತುಗೊಳಗಾದ ಮಹಿಳಾ ಇನ್ಸ್​​ಪೆಕ್ಟರ್​. ಮಂಗಳವಾರ ಅಂಬೇಡ್ಕರ್​ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ತರಬೇತಿಗೆ ಹಾಜರಾಗದೆ ಇನ್ಸ್​ಪೆಕ್ಟರ್ ಭವ್ಯ ಪೇಪರ್ ಓದುತ್ತಾ ಕುಳಿತಿದ್ದರು. ನೋಡಲ್ ಅಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿ ಪ್ರಶ್ನಿಸಿದಾಗ ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ. ನಾನು ಮಾಡುತ್ತಿರುವುದು ಸರಿ, ತರಬೇತಿ ಕೊಡುವುದು ನಿಮ್ಮ ಕೆಲಸ. ಆದರೆ

ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ ಆರೋಪ : ಮಹಿಳಾ ಇನ್ಸ್​​ಪೆಕ್ಟರ್​ ಅಮಾನತು Read More »

ಕಾರ್ಕಳದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಮಹಿಳೆಯರಿಂದ ನಿರ್ವಹಿಸಲ್ಪಡುವ 5 ಸಖಿ ಮತಗಟ್ಟೆ ಕಾರ್ಕಳ : ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಕ್ಷೇತ್ರದಲ್ಲಿ 157 ಸಾಮಾನ್ಯ ಮತಗಟ್ಟೆ, 27 ನಕ್ಸಲ್‌ ಪೀಡಿತ ಮತಗಟ್ಟೆಗಳೊಂದಿಗೆ 52 ಸೂಕ್ಷ್ಮ ಮತಗಟ್ಟೆ ಸೇರಿದಂತೆ 209 ಮತಗಟ್ಟೆಗಳಿದೆ. ಸಖಿ ಮತಗಟ್ಟೆಕಾರ್ಕಳ ತಾಲೂಕಿನಲ್ಲಿ 3 ಮತ್ತು ಹೆಬ್ರಿ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 5 ಸಖಿ ಮತಗಟ್ಟೆಗಳಿದ್ದು, ಇಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು, ಮತಗಟ್ಟೆ ಸಹಾಯಕರು, ಕಾವಲು ಸಿಬ್ಬಂದಿವರೆಗೆ ಸಂಪೂರ್ಣವಾಗಿ

ಕಾರ್ಕಳದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ Read More »

ಕಾರ್ಕಳಕ್ಕೆ ಯೋಗಿ ಆಗಮನ : ನಗರದಲ್ಲಿ ಪೊಲೀಸ್‌ ಸರ್ಪಗಾವಲು

ಕಾರ್ಕಳ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಕಾರ್ಕಳಕ್ಕೆ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಪೊಲೀಸರು ಭಾರಿ ಭದ್ರತೆ ಕಲ್ಪಿಸಿದ್ದಾರೆ. ಕಾರ್ಕಳ ಅನಂತಶಯನ ವೃತ್ತದಿಂದ ಶ್ರೀ ವೆಂಕಟರಮಣ ದೇವಳ ಪರಿಸರದವರೆಗೆ ಯೋಗಿಜಿ ರೋಡ್‌ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಖಾಕಿ ಪಡೆ ಬಿಗಿ ಬಂದೋಬಸ್ತ್‌ ಏರ್ಪಡಿಸಿದೆ.ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಮಾರ್ಗದರ್ಶನದಲ್ಲಿ ಬಂದೋಬಸ್ತ್‌ ಕಲ್ಪಿಸಲಾಗಿದ್ದು, 500 ಮಂದಿ ಪೊಲೀಸರು, ಡಿಎಆರ್‌, ಕೆಎಸ್‌ಆರ್‌ಪಿ, ಸಿಐಎಸ್‌ಎಫ್‌ (ಕೇಂದ್ರಿಯ ಭದ್ರತಾ

ಕಾರ್ಕಳಕ್ಕೆ ಯೋಗಿ ಆಗಮನ : ನಗರದಲ್ಲಿ ಪೊಲೀಸ್‌ ಸರ್ಪಗಾವಲು Read More »

ವೈಯಕ್ತಿಕ ನಿಂದನೆ ಬಿಟ್ಟು ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಬನ್ನಿ – ಸುನಿಲ್‌ ಕುಮಾರ್‌ ಬಹಿರಂಗ ಸವಾಲು

ಕಾರ್ಕಳ : ವೈಯಕ್ತಿಕ ನಿಂದನೆ ಮತ್ತು ಅಪಪ್ರಚಾರವನ್ನೇ ಬಂಡವಾಳವಾಗಿರಿಸಿಕೊಂಡು ಚುನಾವಣಾ ಕಣಕ್ಕೆ ಇಳಿದಿರುವ ಕಾಂಗ್ರೆಸ್, ಕಾರ್ಕಳ ಕ್ಷೇತ್ರದ ಸುಸಂಸ್ಕೃತ ಮತ್ತು ಸಜ್ಜನಿಕೆಯ ಮನಸ್ಸುಗಳನ್ನು ಕದಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಖೇದ ವ್ಯಕ್ತಪಡಿಸಿದರು. ಮೆ 4ರಂದು ಬಜಗೋಳಿ ಪೇಟೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ನಿಂದನೆ, ದ್ವೇಷ ಹರಡುವ ಕಾರ್ಯಕ್ಕೆ ಮುಂದಾಗುವ ಬದಲು ಪ್ರಜಾಪ್ರಭುತ್ವದ ಆಶಯದಂತೆ ಚುನಾವಣೆ ಎದುರಿಸಿ ಎಂದು ಕಾಂಗ್ರೆಸ್‌ನರಿಗೆ ತಿಳಿಸಿದ ಸುನಿಲ್‌ ಕುಮಾರ್‌ ಕಾರ್ಕಳದಲ್ಲಾದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಗೆ ಬನ್ನಿ

ವೈಯಕ್ತಿಕ ನಿಂದನೆ ಬಿಟ್ಟು ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಬನ್ನಿ – ಸುನಿಲ್‌ ಕುಮಾರ್‌ ಬಹಿರಂಗ ಸವಾಲು Read More »

error: Content is protected !!
Scroll to Top