• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಪಘಾತ

ಕಾರ್ಕಳ ಎಕ್ಸಿಸ್ ಬ್ಯಾಂಕ್‌ನಲ್ಲಿ ಬೆಂಕಿ ಅವಘಡ – ತಪ್ಪಿದ ಭಾರಿ ಅನಾಹುತ

ಕಾರ್ಕಳ : ಸಾಲ್ಮರದಲ್ಲಿ ಕಾರ್ಯಾಚರಿಸುತ್ತಿರುವ ಎಕ್ಸಿಸ್ ಬ್ಯಾಂಕ್‌ನಲ್ಲಿ ಸರ್ವೀಸ್‌ ಪಾಯಿಂಟ್ ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಅ. 4ರ ಬೆಳಿಗ್ಗೆ ಸಂಭವಿಸಿದೆ. ತಕ್ಷಣವೇ ಬಿಲ್ಡಿಂಗ್‌ ಮಾಲಕ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ವರ್, ಇನ್ವರ್ಟರ್ ಸೇರಿ ಹಲವು ಎಲೆಕ್ಟ್ರಿಕಲ್ ಪರಿಕರಗಳು ಬೆಂಕಿಗಾಹುತಿಯಾಗಿದೆ. ಸಕಾಲಿನ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ ಸಂಜೀವ್, ಸಿಬ್ಬಂದಿ ಜಯ ಮೂಲ್ಯ

ಕಾರ್ಕಳ ಎಕ್ಸಿಸ್ ಬ್ಯಾಂಕ್‌ನಲ್ಲಿ ಬೆಂಕಿ ಅವಘಡ – ತಪ್ಪಿದ ಭಾರಿ ಅನಾಹುತ Read More »

ಬೈಕಿಗೆ ಸ್ಕೂಟಿ ಡಿಕ್ಕಿ : ಸವಾರನಿಗೆ ಗಾಯ

ಕಾರ್ಕಳ: ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ಬಳಿ ರಾಜ್ಯ ಹೆದ್ದಾರಿ 1ರಲ್ಲಿ ಬುಧವಾರ ಬೈಕಿಗೆ ಸ್ಕೂಟಿ ಡಿಕ್ಕಿ ಹೊಡೆದು, ಬೈಕ್‌ ಸವಾರ ರಾಮ ಶೆಟ್ಟಿ (61) ಎಂಬವರು ಗಾಯಗೊಂಡಿದ್ದಾರೆ. ನಿಟ್ಟೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ರಾಮ ಶೆಟ್ಟಿಯವರ ಬೈಕಿಗೆ ಕಾರ್ಕಳ ಕಡೆಗೆ ಅತಿ ವೇಗದಿಂದ ಹೋಗುತ್ತಿದ್ದ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ರಾಮ ಶೆಟ್ಟಿಯವರ ಕಾಲಿಗೆ ಗಾಯವಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಗೆ ಸ್ಕೂಟಿ ಡಿಕ್ಕಿ : ಸವಾರನಿಗೆ ಗಾಯ Read More »

ಸ್ಕೂಟರ್ ಸ್ಕಿಡ್‌ ಆಗಿ ರಿಕ್ಷಾಕ್ಕೆ ಡಿಕ್ಕಿ : ಸವಾರ ಸಾವು

ಕಾರ್ಕಳ : ಹೊಸ್ಮಾರಿನಲ್ಲಿ ಬುಧವಾರ ಸ್ಕೂಟರ್ ಸ್ಕಿಡ್‌ ಆಗಿ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಪ್ರಜ್ವಲ್‌ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ಪ್ರಜ್ವಲ್‌ ಚಲಾಯಿಸುತ್ತಿದ್ದ ಸ್ಕೂಟರ್ ಹೊಸ್ಮಾರು ತಿರುವಿನಲ್ಲಿ ಸ್ಕಿಡ್‌ ಆಗಿ ಒಂದಷ್ಟು ದೂರ ಜಾರಿಕೊಂಡು ಹೋಗಿ ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ರಿಕ್ಷಾ ಪಲ್ಟಿಯಾಗಿದೆ. ರಿಕ್ಷಾದಲ್ಲಿದ್ದ ಪ್ರಯಾಣಿಕ ನಾರಾವಿಯ ಅಜ್ಜಾದೆಮನೆ ಸುನಿಲ್‌ (30) ಎಂಬವರ ಕಾಲಿಗೆ ಗಾಯವಾಗಿದೆ. ಪ್ರಜ್ವಲ್‌ನನ್ನು ಕಾರ್ಕಳ ಗಾಜ್ರಿಯಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ

ಸ್ಕೂಟರ್ ಸ್ಕಿಡ್‌ ಆಗಿ ರಿಕ್ಷಾಕ್ಕೆ ಡಿಕ್ಕಿ : ಸವಾರ ಸಾವು Read More »

ಪಡುಬಿದ್ರಿ : ಬಸ್‌ಗೆ ಡಿಕ್ಕಿ ಹೊಡೆದ ಬೈಕ್‌ – ಕಾರ್ಕಳದ ಯುವಕ ಸಾವು

 ಕಾರ್ಕಳ : ಪಡುಬಿದ್ರಿಯಲ್ಲಿ ಖಾಸಗಿ ಬಸ್‌ ಹಾಗೂ ಬೈಕ್‌ ನಡುವೆ ಸೆ. 13ರ ಬೆಳಿಗ್ಗೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್‌ ಸವಾರ ಅಜೆಕಾರು ಬೊಂಡುಕುಮೇರಿ ನಿವಾಸಿ ಅಶ್ವಿತ್‌ ಶೆಟ್ಟಿ (32) ಸಾವಿಗೀಡಾಗಿದ್ದಾರೆ. ಮಂಗಳೂರಿನಿಂದ ಕಾರ್ಕಳ ಬರುತ್ತಿದ್ದ ನವದುರ್ಗಾ ಬಸ್‌ ಗೆ ಬೈಕ್‌ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿತ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ಅಜೆಕಾರಿನಲ್ಲಿ ಗೂಡ್ಸ್‌ ಗಾಡಿ ಬಾಡಿಗೆ ನಡೆಸುತ್ತಿದ್ದ ಅಶ್ವಿತ್‌ ಶೆಟ್ಟಿ ತಿಂಗಳ ಹಿಂದೆ ಬೈಕ್‌ನಲ್ಲೇ ಭಾರತ ಪರ್ಯಟನೆ ನಡೆಸಿದ್ದರು.

ಪಡುಬಿದ್ರಿ : ಬಸ್‌ಗೆ ಡಿಕ್ಕಿ ಹೊಡೆದ ಬೈಕ್‌ – ಕಾರ್ಕಳದ ಯುವಕ ಸಾವು Read More »

ಬಸ್‌-ಟ್ರಕ್‌ ಅಪಘಾತ : 11 ಮಂದಿ ಸಾವು

ಹೊಸದಿಲ್ಲಿ : ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ ಮತ್ತು ಟ್ರಕ್‌ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 11 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿದೆ.ಗುಜರಾತ್‌ನಿಂದ ಮಥುರಾಕ್ಕೆ ಹೋಗುತ್ತಿದ್ದ ಬಸ್‌ ಕೆಟ್ಟು ರಸ್ತೆ ಬದಿಯಲ್ಲಿ ನಿಂತಾಗ ಹಿಂದಿನಿಂದ ವಿಪರೀತ ವೇಗವಾಗಿ ಬರುತ್ತಿದ್ದ ಟ್ರಕ್‌ ಈ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿದ್ದ 11 ಮಂದಿ ಸ್ಥಳದಲ್ಲೇ ಸಾವಿಗೀಡಾಗಿರುವ ಮಾಹಿತಿ ಬಂದಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ.

ಬಸ್‌-ಟ್ರಕ್‌ ಅಪಘಾತ : 11 ಮಂದಿ ಸಾವು Read More »

ಅಪರಾಧ – ಅಪಘಾತ

ಕಾರಿಗೆ ಬೈಕ್‌ ಡಿಕ್ಕಿ : ಸವಾರನಿಗೆ ಗಾಯಅಜೆಕಾರು : ಮರ್ಣೆ ಗ್ರಾಮದ ಜುಮ್ಮಾ ಮಸೀದಿಯ ಬಳಿ ಭಾನುವಾರ ಕಾರು ಮತ್ತು ಬೈಕ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ರಚನ್‌ ಎಂಬವರು ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಿರಣ್‌ ಕುಮಾರ್‌ ಪಿ. (29) ಕಾರಿನಲ್ಲಿ ಶಿವಮೊಗ್ಗಕ್ಕೆ ಹೋಗುತ್ತಿರುವಾಗ ಎದುರಿನಿಂದ ವೇಗವಾಗಿ ಬಂದ ಬೈಕ್‌ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಿರುಸಿಗೆ ಎರಡೂ ವಾಹನಗಳು ಜಖಂಗೊಂಡಿವೆ. ಬೈಕ್‌ ಸವಾರ ರಚನ್‌ ಗಾಯಗೊಂಡಿದ್ದಾರೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ

ಅಪರಾಧ – ಅಪಘಾತ Read More »

ಅತ್ತೂರು ಕ್ರಾಸ್‌ನಲ್ಲಿ ಈಚರ್‌ ಪಲ್ಟಿ – ಚಾಲಕ ಪಾರು

ಕಾರ್ಕಳ : ಬೈಪಾಸ್‌ ರಸ್ತೆಯ ಅತ್ತೂರು ಕ್ರಾಸ್‌ ಬಳಿ ಈಚರ್‌ ವಾಹನವೊಂದು ಪಲ್ಟಿಯಾದ ಘಟನೆ ಸೆ. 9 ರಂದು ಸಂಭವಿಸಿದೆ. ವರಂಗದಿಂದ ಮಂಗಳೂರಿಗೆ ಸಾಗುತ್ತಿದ್ದ ಈಚರ್‌ ಅತ್ತೂರು ಚರ್ಚ್‌ ದ್ವಾರದ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅತ್ತೂರು ಕ್ರಾಸ್‌ನಲ್ಲಿ ಈಚರ್‌ ಪಲ್ಟಿ – ಚಾಲಕ ಪಾರು Read More »

ಬೆಳ್ತಂಗಡಿಯಲ್ಲಿ ಕಾರು ಮತ್ತು ಬೈಕ್‌ ನಡುವೆ ಅಪಘಾತ

ಬೈಕ್‌ ಸವಾರ ಕಾರ್ಕಳ ಈದು ಗ್ರಾಮದ ಯುವಕ ಮೃತ್ಯು ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕಾಪಿನಡ್ಕದಲ್ಲಿ ಇನೋವಾ ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಕಾರ್ಕಳ ಈದು ಗ್ರಾಮದ ಸುಧೀರ್ ಸಾವನ್ನಪ್ಪಿದ‌ ಧಾರುಣ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ ಸಂಭವಿಸಿದೆ. ಬೆಳ್ತಂಗಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಇನೋವಾ ಕಾರು ಹಾಗೂ ಅಳದಂಗಡಿ ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಬೈಕ್‌ ನಡುವೆ ಢಿಕ್ಕಿ ಸಂಭವಿಸಿದ್ದು, ಢಿಕ್ಕಿ ರಭಸಕ್ಕೆ ಬೈಕ್‌ ಸವಾರ ರಸ್ತೆಗೆ ಎಲೆಯಲ್ಪಟ್ಟು ಗಂಭೀರ

ಬೆಳ್ತಂಗಡಿಯಲ್ಲಿ ಕಾರು ಮತ್ತು ಬೈಕ್‌ ನಡುವೆ ಅಪಘಾತ Read More »

ನೀರೆ ಬೈಲೂರಿನಲ್ಲಿ ಭೀಕರ ಅಪಘಾತ

ಕಾರು ಬೈಕು ಮುಖಾಮುಖಿ ಡಿಕ್ಕಿ – ಸವಾರನಿಗೆ ಗಾಯ ಕಾರ್ಕಳ : ನೀರೆ ಬೈಲೂರಿನಲ್ಲಿ ಆ. 22 ರ ರಾತ್ರಿ ಕಾರು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಉಡುಪಿ‌ ಆಭರಣ‌ ಮೋಟರ್ಸ್‌‌ನಲ್ಲಿ ಸರ್ವೀಸ್ ಮಾಡಿದ ಕಾರನ್ನು ಕಾರ್ಕಳ ಆಭರಣ ಮೋಟರ್ಸ್ ಗೆ ಚಲಾಯಿಸಿಕೊಂಡು ಬರುವಾಗ ಬೈಲೂರಿನಿಂದ ಗುಡ್ಡೆಯಂಗಡಿ ಕಡೆಗೆ ಸಾಗುತ್ತಿದ್ದ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕ್ ಸವಾರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.‌

ನೀರೆ ಬೈಲೂರಿನಲ್ಲಿ ಭೀಕರ ಅಪಘಾತ Read More »

ಪ್ರಪಾತಕ್ಕೆ ಉರುಳಿದ ಸೇನಾ ವಾಹನ : 9 ಯೋಧರ ದುರ್ಮರಣ

ಲಡಾಖ್ : ಸೇನಾ ವಾಹನ ಆಳವಾದ ಪ್ರಪಾತಕ್ಕೆ ಉರುಳಿ ಬಿದ್ದು 9 ಯೋಧರು ಮೃತಪಟ್ಟು ಒಬ್ಬರು ಗಾಯಗೊಂಡ ದುರಂತ ಘಟನೆ ಶನಿವಾರ ಲಡಾಖ್‌ನಲ್ಲಿ ಸಂಭವಿಸಿದೆ.ಲಡಾಖ್‌ನ ಕ್ಯಾರಿ ಪಟ್ಟಣದ ಸಮೀಪ ಅಪಘಾತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿ ಕೂಡ ಸೇರಿದ್ದಾರೆ. ಯೋಧರು ಕಾರು ಗ್ಯಾರಿಸನ್‌ನಿಂದ ಲೇಹ್ ಬಳಿಯ ಕ್ಯಾರಿಗೆ ತೆರಳುತ್ತಿದ್ದರು ಎಂದು ಲಡಾಖ್‌ನ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತುರ್ತು ನಿಗಾ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಪ್ರಪಾತಕ್ಕೆ ಉರುಳಿದ ಸೇನಾ ವಾಹನ : 9 ಯೋಧರ ದುರ್ಮರಣ Read More »

error: Content is protected !!
Scroll to Top