ಕಾರ್ಕಳ : ಅಜೆಕಾರಿನ ಮರ್ಣೆ ಗ್ರಾಮದಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 13ರಂದು ನಡೆದಿದೆ. ಅರುಣ (34) ನೇಣೆಗೆ ಶರಣಾದವರು. ಇವರು ಕಳೆದ 2 ದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ವಿಪರೀತ ಮದ್ಯೆ ಸೇವನೆ ಮಾಡುತ್ತಿದ್ದರು. ನ. 13ರಂದು ಬೆಳಿಗ್ಗೆ 10 ಗಂಟೆಗೆ ತನ್ನ ತಾಯಿಯೊಂದಿಗೆ ಸುಮಾರಿಗೆ ಅಜೆಕಾರು ಪೇಟೆಗೆ ರೇಷನ್ ತರಲು ಬಂದಿದ್ದು, ನಂತರ ಅವರು ಅಮಲು ಪದಾರ್ಥ ಸೇವಿಸಿ ಮನೆಗೆ ಹೋಗಿರುತ್ತಾರೆ. ತಾಯಿ ವಸಂತಿ ರೇಷನ್ ತೆಗದುಕೊಂಡು ಮಧ್ಯಾಹ್ನ 12 ಗಂಟೆಗೆ ಮನೆಗೆ ಹೋಗುವಾಗ ಅರುಣನು ಮನೆಯ ಹತ್ತಿರ ಇರುವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಜೆಕಾರು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ


































