parashurama theme park

ಜಿಲ್ಲಾಡಳಿತದಿಂದ ಪರಶುರಾಮ ಥೀಮ್ ಪಾರ್ಕ್‌ ಸ್ವಚ್ಛತೆ

ಕಾರ್ಕಳ : ಜಿಲ್ಲಾಡಳಿತದ ಆದೇಶದಂತೆ ನಿರ್ಮಿತ ಕೇಂದ್ರ ಶುಕ್ರವಾರ ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ನ ಸ್ವಚ್ಛತಾ ಕಾರ್ಯ ಕೈಗೊಂಡಿದೆ. 2023ರ ಜನವರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಪರಶುರಾಮ ಥೀಮ್‌ ಪಾರ್ಕ್‌ ಬಳಿಕ ರಾಜಕೀಯ ಮೇಲಾಟಕ್ಕೆ ಬಲಿಯಾಗಿದ್ದು, ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಪರಿಣಾಮವಾಗಿ ಥೀಮ್‌ ಪಾರ್ಕ್‌ ಆವರಣದಲ್ಲಿ ಹುಲ್ಲು, ಪೊದೆಗಳು ತುಂಬಿ ಥೀಮ್‌ ಪಾರ್ಕ್ ಪಾಳುಬಿದ್ದ ಸ್ಥಿತಿ ನಿರ್ಮಾಣವಾಗಿತ್ತು. ಇತ್ತೀಚೆಗೆ ಥೀಮ್‌ ಪಾರ್ಕ್‌ನಲ್ಲಿ ಕಟ್ಟಡದ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ಮೇಲ್ಚಾವಣಿಗೆ ಹಾಕಿದ್ದ ತಾಮ್ರದ ಹೊದಿಕೆ ಕಿತ್ತು ಹೊತ್ತೊಯ್ದಿದ್ದರು. […]

ಜಿಲ್ಲಾಡಳಿತದಿಂದ ಪರಶುರಾಮ ಥೀಮ್ ಪಾರ್ಕ್‌ ಸ್ವಚ್ಛತೆ Read More »

ಕಾರ್ಕಳವನ್ನು ಪ್ರೀತಿಸುವವನು ಕಾರ್ಕಳದ ಪ್ರವಾಸೋದ್ಯಮವನ್ನು ಬೆಳೆಸುತ್ತಾನೆಯೇ ಹೊರತು ತನ್ನ ರಾಜಕೀಯದ ಚಟಕ್ಕಾಗಿ ಬಲಿ ಕೊಡುವುದಿಲ್ಲ

ಯೋಜನೆ ಹಳ್ಳ ಹಿಡಿಸುವುದು ಸಾಧನೆಯಲ್ಲ – ಹೊಸ ಯೋಜನೆ ತಂದು ಪ್ರವಾಸೋದ್ಯಮವನ್ನು ಬೆಳೆಸುವುದೇ ಸಾಮರ್ಥ್ಯ – ಮುನಿಯಾಲಿಗೆ ರಾಕೇಶ್‌ ಶೆಟ್ಟಿ ಸವಾಲು ಕಾರ್ಕಳ : ಕಾರ್ಕಳದ ಪ್ರವಾಸೋದ್ಯಮಕ್ಕೆ ಕಿರೀಟ ಪ್ರಾಯವಾಗಬೇಕಾಗಿದ್ದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗಿದ್ದ ಪರಶುರಾಮ ಥೀಮ್ ಪಾರ್ಕ್ ಇವತ್ತಿಗೆ ನಿರ್ಜನ ಪ್ರದೇಶವಾಗಿ ಬದಲಾಗಿದ್ದು ಕಳ್ಳಕಾಕರ, ಅನೈತಿಕ ಚಟುವಟಿಕೆಗಳ ತಾಣವಾಗುವ ಭೀತಿ ಸೃಷ್ಟಿಯಾಗಿದೆ. ಕಾರ್ಕಳದ ನಕಲಿ ಕಾಂಗ್ರೆಸ್ಸಿಗರ ಷಡ್ಯಂತ್ರದಿಂದ ಹಾಗೂ ಅವರ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿಯ ಕುಕೃತ್ಯದಿಂದ ಪರಶುರಾಮ ಥೀಮ್ ಪಾರ್ಕ್ ಈ

ಕಾರ್ಕಳವನ್ನು ಪ್ರೀತಿಸುವವನು ಕಾರ್ಕಳದ ಪ್ರವಾಸೋದ್ಯಮವನ್ನು ಬೆಳೆಸುತ್ತಾನೆಯೇ ಹೊರತು ತನ್ನ ರಾಜಕೀಯದ ಚಟಕ್ಕಾಗಿ ಬಲಿ ಕೊಡುವುದಿಲ್ಲ Read More »

ಸಭ್ಯತೆಯ ಎಲ್ಲೆ ಮೀರುತ್ತಿರುವ ಉದಯ ಕುಮಾರ್ ಶೆಟ್ಟಿ –‌ ನವೀನ್‌ ನಾಯಕ್ ವಿಷಾದ

ದ್ವೇಷ – ಮತ್ಸರದ ರಾಜಕಾರಣಕ್ಕಾಗಿ ಸುಂದರ ಯೋಜನೆಯೊಂದು ಪಾಳುಬೀಳುವಂತಾಯಿತು ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವನ್ನಾಗಿ ಬೆಳೆಸಬೇಕೆಂಬ ದೃಷ್ಟಿಯಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣ ಮಾಡಿರುವ ಮಹತ್ವಾಕಾಂಕ್ಷಿ ಯೋಜನೆ ಪರಶುರಾಮ ಥೀಮ್ ಪಾರ್ಕ್ ಇಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಅವರ ದ್ವೇಷ ಹಾಗೂ ಮತ್ಸರದ ರಾಜಕಾರಣದಿಂದಾಗಿ ಪಾಳು ಬೀಳುವಂತಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ವಿಷಾದ ವ್ಯಕ್ತಪಡಿಸಿದ್ದಾರೆ. ದಿನನಿತ್ಯ

ಸಭ್ಯತೆಯ ಎಲ್ಲೆ ಮೀರುತ್ತಿರುವ ಉದಯ ಕುಮಾರ್ ಶೆಟ್ಟಿ –‌ ನವೀನ್‌ ನಾಯಕ್ ವಿಷಾದ Read More »

ಪರುಶುರಾಮ ಥೀಮ್‌ ಪಾರ್ಕ್‌ನಲ್ಲಿ ಕಳ್ಳತನ

ಘಜ್ನಿ, ಘೋರಿ ದಾಳಿಯಂತೆ ಪಾಳು ಬಿದ್ದ ಥೀಮ್‌ ಪಾರ್ಕ್‌ – ಸುನಿಲ್‌ ಕುಮಾರ್‌ ವಿಷಾದ ಕಾರ್ಕಳ : ಬೈಲೂರು ಪರಶುರಾಮ ಥೀಂ ಪಾರ್ಕ್ ನ ಬಾಗಿಲನ್ನು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮೇಲ್ಛಾವಣಿಗೆ ಅಳವಡಿಸಿದ್ದ ತಾಮ್ರದ ಹೊದಿಕೆಯನು ಕಿತ್ತು ಕಳ್ಳತನ ಮಾಡಿದ್ದಾರೆ ಎಂದು ಶಾಸಕ ಸುನಿಲ್‌ ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸುನಿಲ್‌ ಕುಮಾರ್‌, ಕಾರ್ಕಳದ ಇತಿಹಾಸದಲ್ಲಿ ಇದೊಂದು ದುರ್ದಿನ ಎಂದು ಭಾವಿಸುತ್ತೇನೆ. ನಮ್ಮ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ

ಪರುಶುರಾಮ ಥೀಮ್‌ ಪಾರ್ಕ್‌ನಲ್ಲಿ ಕಳ್ಳತನ Read More »

ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಬೃಹತ್‌ ವಾಹನ ಜಾಥಾ

ಕಾರ್ಕಳ : ಬೈಲೂರು ಪರಶುರಾಮ ಥೀಂ ಪಾರ್ಕ್‌ನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸುವ ಉದ್ದೇಶದಿಂದ ಕಾಮಗಾರಿಯನ್ನು ಆರಂಭಿಸುವಂತೆ ಒತ್ತಾಯಿಸಿ ಕಾರ್ಕಳ ಬಿಜೆಪಿ ವತಿಯಿಂದ ಆ. 6ರಂದು ಜಿಲ್ಲಾಧಿಕಾರಿ ಕಚೇರಿಗೆ ಬೃಹತ್‌ ವಾಹನ ಜಾಥಾ ಹೊರಟಿತು. ಪಕ್ಷದ ಹಿರಿಯ ಮುಖಂಡ ಬೋಳ ಪ್ರಭಾಕರ್‌ ಕಾಮತ್‌ ಸ್ವರಾಜ್‌ ಮೈದಾನದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಕಾರ್ಕಳ ಸ್ವರಾಜ್‌ ಮೈದಾನದಿಂದ ಪ್ರಾರಂಭಗೊಂಡ ವಾಹನ ಜಾಥಾದಲ್ಲಿ ನೂರಾರು ವಾಹನಗಳಿದ್ದವು. ಸ್ವರಾಜ್‌ ಮೈದಾನದಿಂದ ಅನಂತಶಯನ ವೃತ್ತವಾಗಿ ಆನೆಕೆರೆಯಿಂದ ಕೃಷ್ಣಮಂದಿರ ರಸ್ತೆಯಾಗಿ ಬಂಗ್ಲೆಗುಡ್ಡೆಗೆ ಸಾಗಿ ಜೋಡುರಸ್ತೆಯಿಂದ ಬೈಲೂರು ಮಾರ್ಗವಾಗಿ

ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಬೃಹತ್‌ ವಾಹನ ಜಾಥಾ Read More »

ಪಿಐಎಲ್‌ ಅರ್ಜಿ – ಸಾಧಕ ಬಾಧಕಗಳಿಗೆ ಉದಯ ಶೆಟ್ಟಿ ಅವರೇ ಹೊಣೆಗಾರರು

ಥೀಂ ಪಾರ್ಕ್ ವಿಚಾರವನ್ನು ವೈಯಕ್ತಿಕವಾಗಿ ರಾಜಕೀಯ ಉದ್ದೇಶಕ್ಕೆ ಬಳಸಬಾರದು – ಹಿತರಕ್ಷಣಾ ಸಮಿತಿ ಅಧ್ಯಕ್ಷರ ಶಾಕಿಂಗ್‌ ಹೇಳಿಕೆ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯ ? ಕಾರ್ಕಳ : ಹೈಕೋರ್ಟ್‌ಗೆ ಉದಯ ಶೆಟ್ಟಿ ಅವರು ವೈಯಕ್ತಿಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕಾರ್ಕಳ ಪರಶುರಾಮ ಥೀಂ ಪಾರ್ಕ್ ಹಿತರಕ್ಷಣಾ ಸಮಿತಿಯಿಂದ ಬೆಂಬಲವಾಗಲಿ ಅಥವಾ ವಿರೋಧವಾಗಲಿ ಇಲ್ಲ. ಅರ್ಜಿಯ ಸಾಧಕ ಬಾಧಕಗಳಿಗೆ ಸ್ವತಃ ಅವರೇ ಹೊಣೆಯಾಗಿರುತ್ತಾರೆ ಎಂದು ಪರಶುರಾಮ ಥೀಂ ಪಾರ್ಕ್‌ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಐಎಲ್‌ ಅರ್ಜಿ – ಸಾಧಕ ಬಾಧಕಗಳಿಗೆ ಉದಯ ಶೆಟ್ಟಿ ಅವರೇ ಹೊಣೆಗಾರರು Read More »

ಪರಶುರಾಮ ಮೂರ್ತಿಯ ಪುನರ್ ನಿರ್ಮಾಣಕ್ಕಾಗಿ ಉದಯ ಶೆಟ್ಟಿ ಮುನಿಯಾಲು ಅವರಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ

ಗೊಂದಲ ಮೂಡಿಸಿದ ಕಾಂಗ್ರೆಸ್ ಮುಖಂಡನ ನಡೆ ಕಾರ್ಕಳ : ಬೈಲೂರಿನ ಉಮ್ಮಿಕ್ಕಳ ಬೆಟ್ಟದಲ್ಲಿನ ಪರಶುರಾಮ ಥೀಮ್‌ ಪಾರ್ಕ್‌ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಉದಯ್‌ ಶೆಟ್ಟಿ ಮುನಿಯಾಲು ಅವರು ಜು. 25ರಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಾವು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ರಿಟ್‌ ಅರ್ಜಿಯಲ್ಲಿ ವಿವಾದಿತ ಪರಶುರಾಮ ಮೂರ್ತಿಯನ್ನು ಪುನರ್‌ ರಚಿಸಿ, ಪುನರ್‌ ಸ್ಥಾಪಿಸುವಂತೆ ಪ್ರತಿವಾದಿಗಳಾದ ಕರ್ನಾಟಕ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾಧಿಕಾರಿ,

ಪರಶುರಾಮ ಮೂರ್ತಿಯ ಪುನರ್ ನಿರ್ಮಾಣಕ್ಕಾಗಿ ಉದಯ ಶೆಟ್ಟಿ ಮುನಿಯಾಲು ಅವರಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ Read More »

ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಗೊಂಡು 2 ವರ್ಷ ಪೂರ್ಣ

ರಾಜಕೀಯ ಮೇಲಾಟಕ್ಕೆ ಬಲಿಯಾಗಿ ಸೊರಗಿದ ಪ್ರವಾಸಿ ತಾಣ ಕಾರ್ಕಳ : ಕಾರ್ಕಳದ ಕನಸಿನ ಯೋಜನೆಯಾಗಿದ್ದ ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಗೊಂಡು ಇಂದಿಗೆ ಎರಡು ವರ್ಷ ಸಂದಿದೆ. ಪ್ರವಾಸೋದ್ಯಮ ತಾಣವಾಗಿ, ಜನಾಕರ್ಷಣೆ ಕೇಂದ್ರವಾಗಿ ದೇಶ-ವಿದೇಶಗಳ ಪ್ರವಾಸಿಗರನ್ನು ಕೈ ಬೀಸಿ ಕರೆಯಬೇಕಿದ್ದ ಈ ಥೀಮ್‌ ಪಾರ್ಕ್‌ ರಾಜಕೀಯ ಕಾರಣಕ್ಕಾಗಿ ಪಾಳು ಬೀಳುವಂತಾಗಿದೆ. ಕೋಟ್ಯಾಂತರ ರೂ. ಯೋಜನೆಗೆ ಕೊಡಲಿ ಏಟು ನೀಡಲಾಗಿದೆ. ಪರಶುರಾಮನಿಗೆ ರಾಜಕೀಯ ಅಂಟಿಕೊಳ್ಳದೆ ಇರುತ್ತಿದ್ದರೆ ಇಡೀ ಬೈಲೂರಿನ ಚಿತ್ರಣವಿಂದು ಬದಲಾಗುತ್ತಿತ್ತು. ಉದ್ಯೋಗ ಸೃಷ್ಟಿ, ವ್ಯಾಪಾರ, ವ್ಯವಹಾರ ಚೇತರಿಕೆ

ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಗೊಂಡು 2 ವರ್ಷ ಪೂರ್ಣ Read More »

ಸೋಲಿನ ಹತಾಶೆಯಲ್ಲಿ ಕಾಂಗ್ರೆಸ್‌ನಿಂದ ಕಾರ್ಕಳ ಪ್ರವಾಸೋದ್ಯಮದ ಕಗ್ಗೊಲೆ – ಸುನಿಲ್‌ ಕುಮಾರ್‌ ಕಿಡಿ

ಫೈಬರ್‌ ಉದಯ ನಡೆಸಿರುವ ಕಳಪೆ ಕಾಮಗಾರಿಯ ಬಗ್ಗೆ ನೂರಾರು ಎಫ್‌ಐಆರ್‌ ದಾಖಲಿಸಬಹುದು ಕೊಲೆ ಆರೋಪಿಗೆ ಮೂರು ದಿನದ ಕಸ್ಟಡಿ – ಅಮಾಯಕ ಶಿಲ್ಪಿಗೆ ಏಳು ದಿನ ಉಡುಪಿ : ವಿನಾಃ ಕಾರಣ ವಿವಾದಗಳನ್ನು ಸೃಷ್ಟಿಸಿ ಕಾರ್ಕಳದಲ್ಲಿ ಕಾಂಗ್ರೆಸ್ ಪ್ರವಾಸೋದ್ಯಮದ ಕಗ್ಗೊಲೆ‌ ಮಾಡುತ್ತಿದೆ ಎಂದು ಶಾಸಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಕಿಡಿಕಾರಿದರು.ಪರಶುರಾಮ ವಿವಾದ ವಿಚಾರವಾಗಿ ನ. 13ರಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪರಶುರಾಮ ಥೀಮ್‌ ಪಾರ್ಕ್‌ ಕುರಿತಂತೆ ಹಬ್ಬಿರುವ ವಿವಾದದ ಕುರಿತು ದಾಖಲೆಯೊಂದಿಗೆ

ಸೋಲಿನ ಹತಾಶೆಯಲ್ಲಿ ಕಾಂಗ್ರೆಸ್‌ನಿಂದ ಕಾರ್ಕಳ ಪ್ರವಾಸೋದ್ಯಮದ ಕಗ್ಗೊಲೆ – ಸುನಿಲ್‌ ಕುಮಾರ್‌ ಕಿಡಿ Read More »

ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ್ ಬಂಧನ

ಕಾರ್ಕಳ : ಬೈಲೂರಿನ ಥೀಮ್‌ ಪಾರ್ಕ್‌ನಲ್ಲಿ ಪರಶುರಾಮ ಮೂರ್ತಿ ನಿರ್ಮಾಣ ಮಾಡಿರುವ ಶಿಲ್ಪಿ, ಕೃಷ್‌ ಆರ್ಟ್‌ ವರ್ಲ್ಡ್‌ನ ಕೃಷ್ಣ ನಾಯ್ಕ್‌ನನ್ನು ಕಾರ್ಕಳ ನಗರ ಪೊಲೀಸರು ನ. 10ರಂದು ಕ್ಯಾಲಿಕಟ್‌ನಲ್ಲಿ ಬಂಧಿಸಿದ್ದಾರೆ. ಕೃಷ್ಣ ನಾಯ್ಕ್‌ ವಿರುದ್ಧ ಕೃಷ್ಣ ಶೆಟ್ಟಿ ಬಜಗೋಳಿ ದಾಖಲಿಸಿರುವ ದೂರಿಗೆ ಸಂಬಂಧಪಟ್ಟಂತೆ ನ.4ರಂದು ಕಾರ್ಕಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಶಿಲ್ಪಿ ಕೃಷ್ಣ ನಾಯ್ಕ್‌ ಅವರ ನಿರೀಕ್ಷಣಾ ಜಾಮೀನು ಆದೇಶವನ್ನು ನ.7ಕ್ಕೆ ಕಾಯ್ದಿರಿಸಿದ್ದರು. ನ.7ರಂದು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾಗಿದೆ. ಜಾಮೀನು

ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ್ ಬಂಧನ Read More »

error: Content is protected !!
Scroll to Top