• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ನಿಧನ

ಯಕ್ಷಗಾನ ವಿದ್ವಾಂಸ ಡಾ. ನಾರಾಯಣ ಶೆಟ್ಟಿ ನಿಧನ

ಮಂಗಳೂರು, ಆ. 26:ಯಕ್ಷಗಾನ ಛಂದೋಬ್ರಹ್ಮ ಎಂದೇ ಖ್ಯಾತರಾಗಿದ್ದ ಹಿರಿಯ ವಿದ್ವಾಂಸ ಡಾ.ಶಿಮಂತೂರು ಎನ್.ನಾರಾಯಣ ಶೆಟ್ಟಿಯವರು (87)  ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.26 ರಂದು ನಿಧನರಾದರು. ಯಕ್ಷಗಾನ ವಿದ್ವಾಂಸರಾಗಿದ್ದ ನಾರಾಯಣ ಶೆಟ್ಟಿಯವರು ಬರೆದ ಯಕ್ಷಗಾನ ಛಂದೋಂಬುಧಿ ಕೃತಿಗೆ ಹಂಪಿ ವಿವಿ ಡಾಕ್ಟರೇಟ್‌  ನೀಡಿತ್ತು. ಸೊರ್ಕುದ ಸಿರಿಗೆಂಡೆ ಸೇರಿ ಹಲವು ಯಶಸ್ವಿ ಯಕ್ಷಗಾನ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಕರಾವಳಿಯ ಆತಿ ಜನಪ್ರಿಯ ಪ್ರಸಂಗ ಶ್ರೀ ದೇವಿ ಮಹಾತ್ಮೆಯನ್ನು ಅವರು 14 ವರ್ಷ ಪ್ರಾಯದಲ್ಲೇ ರಚಿಸಿದ್ದರು. ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿ ಪಡೆದ ಮೊದಲಿಗರು […]

ಯಕ್ಷಗಾನ ವಿದ್ವಾಂಸ ಡಾ. ನಾರಾಯಣ ಶೆಟ್ಟಿ ನಿಧನ Read More »

ಉದ್ಯಮಿ ಚಾರ ಕೆ.ರತ್ನಾಕರ್ ಶೆಟ್ಟಿ ಬೆಳಗಾವಿ ನಿಧನ

ಹೆಬ್ರಿ,ಆ. 24 : ಹೆಬ್ರಿ ಚಾರ ಕೂತಾಡಿ ಮನೆತನದ ಕೆ. ರತ್ನಾಕರ್ ಶೆಟ್ಟಿ ಬೆಳಗಾವಿ ಆ.25ರಂದು ನಿಧನರಾದರು. ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳ ಮುಂದಾಳುವಾಗಿದ್ದ  ಸರಳ ಸಜ್ಜನಿಕೆಯ ಜನನಾಯಕ ಅವರು.     ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಅವರು  ಬೆಳಗಾವಿಯಲ್ಲಿ ಉದ್ಯಮವನ್ನು ಸ್ಥಾಪಿಸಿ, ಹಲವರಿಗೆ ಉದ್ಯೋಗದಾತರಾಗಿ ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದರು. ಬೆಳಗಾವಿಯ ಜನ ನಾಯಕ ಸತೀಶ್ ಜಾರಕಿಹೋಳಿ ಅವರಿಗೆ ಆಪ್ತರಾಗಿದ್ದರು. ಬೆಳಗಾವಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ , ಬೆಳಗಾಂ ಮರ್ಚಂಟ್ಸ್ ಕೊ- ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ಲಿ.ಬೆಳಗಾವಿ

ಉದ್ಯಮಿ ಚಾರ ಕೆ.ರತ್ನಾಕರ್ ಶೆಟ್ಟಿ ಬೆಳಗಾವಿ ನಿಧನ Read More »

ಕಲ್ಯಾ ಗರಡಿಯ ಆಡಳಿತ ಮೊಕ್ತೇಸರ ಬಾಲೇಶ್ ಅತಿಕಾರಿ ನಿಧನ

ಕಾರ್ಕಳ : ಕಲ್ಯಾ ಪರಾಡಿ ಜೈನ ಮನೆತನದ ಬಾಲೇಶ್ ಅತಿಕಾರಿ (66) ಆ. 21 ರಂದು  ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅಪಾರ ದೈವಭಕ್ತರಾಗಿದ್ದ ಬಾಲೇಶ್ ಅತಿಕಾರಿಯವರು ಕಲ್ಯಾ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರರಾಗಿ ಮತ್ತು ಕಲ್ಯಾ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದಿನಸಿ ಅಂಗಡಿ ಮಾಲಕರಾಗಿದ್ದ ಅವರು ಊರಿನ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಂತಾಪ ಬಾಲೇಶ್ ಅತಿಕಾರಿಯವರ ನಿಧನಕ್ಕೆ ಕಲ್ಯಾ

ಕಲ್ಯಾ ಗರಡಿಯ ಆಡಳಿತ ಮೊಕ್ತೇಸರ ಬಾಲೇಶ್ ಅತಿಕಾರಿ ನಿಧನ Read More »

ಜಯವಂತ ನಾಯಕ್‌ ಕಾರ್ಕಳ ನಿಧನ

ಕಾರ್ಕಳ, ಆ.17 : ಜಿಎಸ್ ಬಿ ಸಮುದಾಯದ ಹಿರಿಯ ಮುಂದಾಳು, ನಿವೃತ್ತ ಉಪನ್ಯಾಸಕ  ಜಯವಂತ ನಾಯಕ್‌  ಕಾರ್ಕಳ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.17ರಂದು ನಿಧನರಾಗಿದ್ದಾರೆ. ಜಿಎಸ್‌ ಬಿ ಸಮುದಾಯದ ಸಂಸ್ಕಾರ ಬೋಧ ಎಂಬ ಪತ್ರಿಕೆಯನ್ನು ಅವರು ಸಂಪಾದಕರಾಗಿ ಮುನ್ನಡೆಸುತ್ತಿದ್ದರು. ಭುವನೇಂದ್ರ  ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರು ಉದ್ಯಮಿಯಾಗಿಯೂ ಯಶಸ್ವಿಯಾಗಿದ್ದರು.

ಜಯವಂತ ನಾಯಕ್‌ ಕಾರ್ಕಳ ನಿಧನ Read More »

ಶೈಕ್ಷಣಿಕ ಕ್ಷೇತ್ರದ ಸಾಧಕ, ಉದ್ಯಮಿ ತುಂಬೆ ಅಹಮದ್‌ ಹಾಜಿ ಮುಹಿಯುದ್ದೀನ್‌ ನಿಧನ

ಮಂಗಳೂರು, ಆ. 16: ಶೈಕ್ಷಣಿಕ ಕ್ಷೇತ್ರದ ಸಾಧಕ, ಉದ್ಯಮಿ ತುಂಬೆ ಅಹಮದ್‌ ಹಾಜಿ ಮುಹಿಯುದ್ದಿನ್ (89) ಭಾನುವಾರ ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಮರದ ಉದ್ಯಮವನ್ನು ಸ್ಥಾಪಿಸಿ ಹಂತಹಂತವಾಗಿ ಮೇಲೇರಿದ ಅವರು ಮುಹಿಯುದ್ದೀನ್‌ ಎಜುಕೇಶನಲ್‌ ಟ್ರಸ್ಟ್‌ ಸ್ಥಾಪಿಸಿ ಪ್ರೌಢ ಶಾಲೆ, ಪಿಯು ಕಾಲೇಜು, ಕೈಗಾರಿಕಾ ತರಬೇತಿ ಸಂಸ್ಥೆ, ಬಿಎ ಆಸ್ಪತ್ರೆ ತೆರೆದು ಮುನ್ನಡೆಸಿದರು.ಸಮುದಾಯದ ಹಿರಿಯ ವ್ಯಕ್ತಿಯಾಗಿ ನೂರಾರು ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಮಂಗಳೂರು ವಿವಿಯ ಸಿಂಡಿಕೇಟ್‌ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದ ಸಾಧಕ, ಉದ್ಯಮಿ ತುಂಬೆ ಅಹಮದ್‌ ಹಾಜಿ ಮುಹಿಯುದ್ದೀನ್‌ ನಿಧನ Read More »

ವಕ್ಫ್‌ ಅಧ್ಯಕ್ಷ ಡಾ.ಯೂಸುಫ್‌ ನಿಧನ

ಬೆಂಗಳೂರು, ಆ. 7: ವಕ್ಫ್‌ ಮಂಡಳಿಯ ಅಧ್ಯಕ್ಷ ಡಾ.ಮೊಹಮ್ಮದ್‌ ಯೂಸುಫ್‌ (74) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.7ರಂದು ನಿಧನರಾಗಿದ್ದಾರೆ. ಉದ್ಯಮಿಯಾಗಿದ್ದ ಡಾ.ಯೂಸುಫ್‌ ಸಮಾಜ ಸೇವಕ ಮತ್ತು ಮಾನವತಾವಾದಿಯಾಗಿ ಗುರುತಿಸಿಕೊಂಡಿದ್ದರು. ಸರಕಾರಿ ನೌಕರಿಯಲ್ಲಿದ್ದ ಅವರು ಬಳಿಕ  ಸ್ವಯಂ ನಿವೃತ್ತಿ ಪಡೆದು ಉದ್ಯಮಗಳನ್ನು ಸ್ಥಾಪಿಸಿದ್ದರು. ಕಳೆದ ಜನವರಿಯಲ್ಲಿ ಅವರು ವಕ್ಫ್‌ ಮಂಡಳಿ  ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು.

ವಕ್ಫ್‌ ಅಧ್ಯಕ್ಷ ಡಾ.ಯೂಸುಫ್‌ ನಿಧನ Read More »

ಕರ್ನಾಟಕ ಮಲ್ಲ ಪತ್ರಿಕೆಯ ಮಾಲಕ ಮುರಳೀಧರ ಶಿಂಗೋಟೆ ನಿಧನ

ಪುಣೆ, ಆ. 6- ಕರ್ನಾಟಕ ಮಲ್ಲ ಸಮೂಹ ಪತ್ರಿಕೆ ಹಾಗೂ ಅಂಬಿಕಾ ಪ್ರಿಂಟರ್ಸ್ & ಪಬ್ಲಿಕೇಶನ್ ನ ಸ್ಥಾಪಕ ಹಾಗೂ ಮಾಲಕರಾದ ಮುರಳೀಧರ ಅನಂತ ಬಾಬಾ ಶಿಂಗೋಟೆ (82) ಇಂದು ಮಧ್ಯಾಹ್ನ 1 ಗಂಟೆಗೆ ಪುಣೆಯ ಜುನ್ಹಾರ್ ತಾಲೂಕಿನ ಗಾಯ್ಮುಖ್ ವಾಡಿಯಲ್ಲಿ  ನಿಧನರಾಗಿದ್ದಾರೆ. 1938, ಮಾ.7ರಂದು  ಪುಣೆಯ ಜುನ್ಹಾರ್ ತಾಲೂಕಿನ ಉಮ್ರಾಜ್ ಗಾಂವ್ ನಲ್ಲಿ ಜನಿಸಿ, ಕೇವಲ ನಾಲ್ಕನೇ ತರಗತಿಯ ಪ್ರಾಥಮಿಕ ಶಿಕ್ಷಣವನ್ನು ಪಡೆದು, ಬದುಕನ್ನು ಅರಸುತ್ತಾ ಮುಂಬಯಿಗೆ ಬಂದ ಶಿಂಗೋಟೆಯವರು, ಇಲ್ಲಿಯ ಪ್ರಸಿದ್ಧ ದಾಂಗಟ್ ಏಜೆನ್ಸಿಯಲ್ಲಿ

ಕರ್ನಾಟಕ ಮಲ್ಲ ಪತ್ರಿಕೆಯ ಮಾಲಕ ಮುರಳೀಧರ ಶಿಂಗೋಟೆ ನಿಧನ Read More »

ಪೋಷಕ ನಟ ಹುಲಿವಾನ್‌ ಗಂಗಾದರಯ್ಯ ಕೊರೊನಾಕ್ಕೆ ಬಲಿ

ಬೆಂಗಳೂರು: ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ (70) ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು. ಕಿರುತೆರೆಯ ಪ್ರೇಮಲೋಕ ಧಾರವಾಹಿಯಲ್ಲಿ ಅವರು ನಟಿಸುತ್ತಾ ಇದ್ದರು. ಇತ್ತೀಚೆಗೆ ಧಾರಾವಾಹಿಯ ಶೂಟಿಂಗ್​ನಲ್ಲೂ ಅವರು ಭಾಗಿಯಾಗಿದ್ದರು. ಹಲವಾರು ಸಿನಿಮಾ, ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು. ರಂಗಭೂಮಿ, ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಹುಲಿವಾನ್‌  ಗಂಗಾಧರಯ್ಯ ತೆಂಗುಬೆಳೆಗಾರರೂ ಆಗಿದ್ದರು.

ಪೋಷಕ ನಟ ಹುಲಿವಾನ್‌ ಗಂಗಾದರಯ್ಯ ಕೊರೊನಾಕ್ಕೆ ಬಲಿ Read More »

error: Content is protected !!
Scroll to Top