Author name: newskarkala desk

ಕಥೊಲಿಕ್ ಸಭಾದಿಂದ ಆರ್ಥಿಕ ಸಹಾಯ

ಕಾರ್ಕಳ : ಕಥೊಲಿಕ್ ಸಭಾ ಕಾರ್ಕಳ ವಲಯ ಇದರ ವತಿಯಿಂದ ಅಜೆಕಾರಿನ ಕ್ಯಾನ್ಸರ್ ಪೀಡಿತ ವ್ಯಕ್ತಿಯ ಚಿಕಿತ್ಸೆಗಾಗಿ ರೂ. 5000 ನೀಡಲಾಯಿತು. ಕಥೋಲಿಕ್‌ ಸಭಾ ವಲಯಾಧ್ಯಕ್ಷ ರಾಬರ್ಟ್ ಮಿನೇಜಸ್ ಚೆಕ್ ಹಸ್ತಾಂತರಿಸಿದರು. ಸಭಾದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಡಿಸೋಜಾ, ಕಾರ್ಯದರ್ಶಿ ಓಲಿವಿಯಾ ಡಿಮೆಲ್ಲೊ, ಖಜಾಂಚಿ ಥಾಮಸ್‌ ನಜ್ರೆತ್ ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಕಥೊಲಿಕ್ ಸಭಾದಿಂದ ಆರ್ಥಿಕ ಸಹಾಯ Read More »

ಉಡುಪಿ ಲೋಕಾಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಣ್ಣಾಮಲೈಗೆ ಒಲವಿದೆಯೇ ?

ನ್ಯೂಸ್‌ ಕಾರ್ಕಳ ವಿಶೇಷ ಸಂದರ್ಶನ ಕರ್ನಾಟಕದ ಸಿಂಗಂ ಎಂದೇ ಖ್ಯಾತರಾದ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪ್ರಸ್ತುತ ಏನು ಮಾಡುತ್ತಿದ್ದಾರೆ ? ಅವರ ಮುಂದಿನ ರಾಜಕೀಯ ನಿಲುವು-ಒಲವೇನು ? ಎನ್ನುವ ಕುರಿತು ಅವರೊಂದಿಗೆ ನಡೆಸಿದ ಎಕ್ಸ್‌ಕ್ಲೂಸಿವ್‌ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. ಪೊಲೀಸ್ ಇಲಾಖೆಯ ಘನತೆ, ಗೌರವವನ್ನು ಹೆಚ್ಚಿಸಿದ ಅಪ್ಪಟ ಅಪರಂಜಿ ಅಣ್ಣಾಮಲೈ. ತನ್ನ ದಕ್ಷತೆ, ಕಾರ್ಯಕ್ಷಮತೆ, ಪ್ರಾಮಾಣಿಕತೆ, ಔದಾರ್ಯತೆ, ಮಾನವೀಯತೆಯ ಮೂಲಕವೇ ಇಡೀ ಕರ್ನಾಟಕದಾದ್ಯಂತ ಮನೆ ಮಾತಾದವರು. ತಮಿಳುನಾಡಿನ  ಕೊಯಮ್ಮತ್ತೂರು ಕರೂರು ಮೂಲದ ಅಣ್ಣಾಮಲೈ ತನ್ನ

ಉಡುಪಿ ಲೋಕಾಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಣ್ಣಾಮಲೈಗೆ ಒಲವಿದೆಯೇ ? Read More »

ಬಿಜೆಪಿ ವಕ್ತಾರರಾಗಿ ಕ್ಯಾ. ಗಣೇಶ್‌ ಕಾರ್ಣಿಕ್‌

ಬೆಂಗಳೂರು: ರಾಜ್ಯ ಬಿಜೆಪಿ ವಕ್ತಾರರಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್‌ ಆಯ್ಕೆಯಾಗಿರುತ್ತಾರೆ. ಜು. 31ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 10 ಮಂದಿ ಉಪಾಧ್ಯಕ್ಷರು, 4 ಮಂದಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ನೂತನ ವಕ್ತಾರರಾಗಿ ನೇಮಕಗೊಂಡ ಕ್ಯಾ. ಗಣೇಶ್‌ ಕಾರ್ಣಿಕ್‌ ಅವರು ಕಾರ್ಕಳ ತಾಲೂಕಿನ ಕೆರ್ವಾಶೆಯವರು.

ಬಿಜೆಪಿ ವಕ್ತಾರರಾಗಿ ಕ್ಯಾ. ಗಣೇಶ್‌ ಕಾರ್ಣಿಕ್‌ Read More »

ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ವರಮಹಾಲಕ್ಷ್ಮೀ ಪೂಜೆ

ಕಾರ್ಕಳ : ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ಕಾರ್ಕಳದ ಶ್ರೀ ಕಾಶಿಮಠದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ವ್ರತ ಹಾಗೂ ಚೂಡಿ ಪೂಜೆ ಜು. 31ರಂದು ಸರಳವಾಗಿ ನಡೆಯಿತು. ಜಿ.ಎಸ್‌.ಬಿ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ವರಮಹಾಲಕ್ಷ್ಮೀ ಪೂಜೆ Read More »

ನಾಗರಪಂಚಮಿ ಮನೆಯಲ್ಲೇ ಆಚರಿಸಿ : ಡಿಸಿ

ಉಡುಪಿ : ಶ್ರದ್ಧಾಕೇಂದ್ರಗಳಲ್ಲಿ ಜನಸಂದಣಿ ಕಂಡು ಬಂದರೆ ಕೊರೊನಾ ವೈರಸ್‌ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ನಾಗರ ಪಂಚಮಿ ಹಬ್ಬವನ್ನು ಎಲ್ಲರೂ ತಮ್ಮ ಮನೆಯಲ್ಲೇ ಆಚರಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರು ನಾಗರಪಂಚಮಿ ಹಬ್ಬಕ್ಕೆ ತಡೆ ಹೇರಿದ್ದಾರೆ ಎಂಬುದಾಗಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಜು. 24ರಂದು ಸ್ಪಷ್ಟೀಕರಣ ನೀಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ಈ ವರ್ಷ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುವಂತಿಲ್ಲ. ಸಾಮಾಜಿಕ ಅಂತರ ಪಾಲನೆ ಮಾಡಿದರೂ ವೈರಸ್‌

ನಾಗರಪಂಚಮಿ ಮನೆಯಲ್ಲೇ ಆಚರಿಸಿ : ಡಿಸಿ Read More »

ರೈತ ಮೋರ್ಚಾ ನೂತನ ಅಧ್ಯಕ್ಷರಾಗಿ ಜಯಕರ ಪೂಜಾರಿ ಹೆಬ್ರಿ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತ ಮೋರ್ಚಾದ ನೂತನ ಅಧ್ಯಕ್ಷರಾಗಿ ಜಯಕರ ಪೂಜಾರಿ ಹೆಬ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ಶೆಟ್ಟಿ ಇನ್ನಾ ಆಯ್ಕೆಯಾಗಿರುತ್ತಾರೆ. ೩ ಬಾರಿ ಹೆಬ್ರಿ ಗ್ರಾಮ ಪಂಚಾಯತ್ ಸದಸ್ಯರಾಗಿ, ೧ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಜಯಕರ ಪೂಜಾರಿ ಅವರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿ‍ರ್ವಹಿಸಿದ್ದ, ಈ ವೇಳೆ ಹೆಬ್ರಿ ಸಾಲುಮರದ ತಿಮ್ಮಕ್ಕ ಪಾರ್ಕ್‌ ನಿರ್ಮಾಣಗೊಂಡಿದೆ. ಹೆಬ್ರಿ ವಲಯ ಬಿಲ್ಲವ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿ‍ರ್ವಹಿಸುತ್ತಿರುವ ಇವರು ಹಲವಾರು ಸಾಮಾಜಿಕ,

ರೈತ ಮೋರ್ಚಾ ನೂತನ ಅಧ್ಯಕ್ಷರಾಗಿ ಜಯಕರ ಪೂಜಾರಿ ಹೆಬ್ರಿ Read More »

ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕ್ಕೆ ಹೋಟೆಲ್ ಮಾಲಿಕರ ಆಗ್ರಹ

ಕಾರ್ಕಳ: ಕಾನೂನು ರೀತ್ಯಾಕ್ಕೆ ವಿರುದ್ಧವಾಗಿ ತಾಲೂಕು ವ್ಯಾಪ್ತಿಯಲ್ಲಿ ತಲೆಎತ್ತಿರುವ ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾರ್ಕಳ ತಾಲೂಕು ಹೋಟೆಲ್ ಮಾಲಿಕರ ಸಂಘವು ಒತ್ತಾಯಿಸಿದೆ. ನಗರದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಜು. 21ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖ ಹರೀಶ್ ನಾಯಕ್ ಮಾತನಾಡಿ, ಹೊಟೇಲ್, ರೆಸ್ಟೋರೆಂಟ್ ಉದ್ಯಮ ಸ್ಥಾಪನೆಗೆ ಸಾಲ ಮೂಲಕ ಲಕ್ಷಾಂತರ ರೂ. ಬಂಡವಾಳ ಹೂಡಿ, ವಿವಿಧ ಇಲಾಖೆಗಳ ಮಾನ್ಯತೆ ಪತ್ರ ಪಡೆದು, ಸ್ಥಳೀಯಾಡಳಿತದಿಂದ ಪರವಾನಿಗೆ ಪಡೆದು ಕಾರ್ಮಿಕರ ಹಿತಕಾಪಾಡಿಕೊಂಡು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ.ಅನಧಿಕೃತ

ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕ್ಕೆ ಹೋಟೆಲ್ ಮಾಲಿಕರ ಆಗ್ರಹ Read More »

error: Content is protected !!
Scroll to Top