ಕಾರ್ಕಳ : ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಏ. 28ರಿಂದ ಮೇ 8 ರವರೆಗೆ ನಡೆಯಲಿದ್ದು, ಇದರ ಪ್ರಯುಕ್ತ ಶೇಮೆಗುರಿ ರತ್ನಾಕರ ಆಚಾರ್ಯ ಅವರ ಕುಟುಂಬಸ್ಥರು ನಿರ್ಮಿಸಿದ ದೇವಸ್ಥಾನದ ಶಾಶ್ವತ ದ್ವಾರವನ್ನು ಏ. 24ರಂದು ಉದ್ಘಾಟಿಸಲಾಯಿತು.
ಈ ಸಂದರ್ಭ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಕ್ರಂ ಹೆಗ್ಡೆ, ಗ್ರಾ. ಪಂ. ಅಧ್ಯಕ್ಷ ಸಚ್ಚಿದಾನಂದ ಪ್ರಭು, ದೇವಸ್ಥಾನದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ರಘುರಾಮ್ ಶೆಟ್ಟಿ, ದೇವಸ್ಥಾನದ ಅರ್ಚಕ ಗುರುರಾಜ್ ಮಂಜಿತ್ತಾಯ, ರತ್ನಾಕರ ಮತ್ತು ಕುಟುಂಬಸ್ಥರು, ಬಾಲಕೃಷ್ಣ ಶೆಟ್ಟಿ, ಜೀತೇಂದ್ರ ಶೆಟ್ಟಿ, ಅಕ್ಕಿ ಪೂಜಾರ್ತಿ, ವಿನೂಪ್ ಹೆಗ್ಡೆ, ಸತೀಶ್ ನಾಯಕ್, ಸಹನಾ ಭಟ್. ಬಾಲಚಂದ್ರ ಶೆಟ್ಟಿ, ಉಮೇಶ್ ನಾಯಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.