ಕಾರ್ಕಳ : ಬಾಹುಬಲಿ ಕುರಿತು ಅವಹೇಳನಕಾರಿ ಮಾತನ್ನಾಡಿರುವ ಕಾಂಗ್ರೆಸ್ ಮುಖಂಡ ಅಯೂಬ್ ಖಾನ್ ವಿರುದ್ಧ ಸನ್ಮಿತ್ರ ಜೈನ್ ಅಸೋಸಿಯೇಷನ್ ಕಾರ್ಕಳ ತಂಡವು ಫೆ. 9ರಂದು ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಅವರಿಗೆ ದೂರು ನೀಡಲಾಯಿತು. ಅಸೋಸಿಯೇಷನ್ ಅಧ್ಯಕ್ಷ ಶೀತಲ್ ಜೈನ್ ಶಿರ್ಲಾಲ್, ಕಾರ್ಯದರ್ಶಿ ಭರತ್ ಕುಮಾರ್ ಜೈನ್ ಇರ್ವತ್ತೂರು, ನ್ಯಾಯವಾದಿ ಸೂರಜ್ ಜೈನ್, ಪ್ರಕಾಶ್ ಬಲಿಪ ಮಿಯ್ಯಾರು, ನಿರಂಜನ್ ಜೈನ್ ಕಾರ್ಕಳ, ಸಂಪತ್ ಜೈನ್ ಕಾರ್ಕಳ, ಪವನಂಜಯ ಹೆಗ್ಡೆ ಕಾರ್ಕಳ, ವಿಜಯ ಜೈನ್ ಇರ್ವತ್ತೂರು, ಶೀತಲ್ ಜೈನ್ ಇರ್ವತ್ತೂರು, ನಿರಂಜನ್ ಜೈನ್ ಈದು, ನಾಗವರ್ಮ ಜೈನ್ ಅವರು ಈ ಸಂದರ್ಭದಲ್ಲಿದ್ದಾರೆ.