ಕಾರ್ಕಳ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದ ಹಿನ್ನೆಲೆಯಲ್ಲಿ ಬಜಗೋಳಿ ಯುವಕಾಂಗ್ರೆಸ್ ಸಂಭ್ರಮಾಚರಣೆ ಆಚರಿಸಿತು. ಈ ನಿಟ್ಟಿನಲ್ಲಿ ಆ. 4ರಂದೇ ಯುವ ಕಾಂಗ್ರೆಸ್ ವತಿಯಿಂದ ಬಜಗೋಳಿ ಪರಿಸರದ ಆಟೋ ಚಾಲಕರಿಗೆ, ಅಂಗಡಿ ಮಾಲಕರಿಗೆ ಭಗವಾಧ್ವಜ ವಿತರಿಸಲಾಯಿತು. ತಾ.ಪಂ. ಸದಸ್ಯ ಸುಧಾಕರ್ ಶೆಟ್ಟಿ, ಸಾಮಾಜಿಕ ಜಾಲತಾಣಗಳ ಉಡುಪಿ ಜಿಲ್ಲಾ ಸಹಸಂಚಾಲಕ ಪ್ರದೀಪ್ ಶೆಟ್ಟಿ ನಲ್ಲೂರು, ಮಾಜಿ ಪಂಚಾಯತ್ ಸದಸ್ಯ ಪೃಥ್ವಿರಾಜ್ ಜೈನ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.