ವೈರಲ್ ಸುದ್ದಿ

ಮಗಳ ಮದುವೆಗೆ ಮೀಸಲಿಟ್ಟ 2 ಲಕ್ಷ ರೂ. ಹಣವನ್ನು ಆಕ್ಸಿಜನ್ ಖರೀದಿಗಾಗಿ ದೇಣಿಗೆ ನೀಡಿದ ರೈತ!

ನೀಮೂಚ್: ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ರೈತನೊಬ್ಬ ತನ್ನ ಮಗಳ ಅದ್ಧೂರಿ ಮದುವೆಗೆ ಕೂಡಿಟ್ಟ ಹಣವನ್ನು ಜೀವಸಂರಕ್ಷಕ ಆಮ್ಲಜನಕ ಖರೀದಿಸಲು ದಾನ ಮಾಡಿದ್ದಾರೆ. ಗ್ವಾಲ್ ದೇವಿಯಾನ್ ಗ್ರಾಮದ ಚಂಪಲಾಲ್ ಗುರ್ಜಾರ್ 2 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಜಿಲ್ಲಾಧಿಕಾರಿ ಮಯಾಂಕ್ ಅಗರ್ ವಾಲ್ ಅವರಿಗೆ ನೀಡಿದ್ದಾರೆ. ಎರಡು ಸಿಲಿಂಡರ್ ಖರೀದಿಸಿರುವ ಮಯಾಂಕ್ ಅಗರ್ ವಾಲ್ ಒಂದು ಸಿಲಿಂಡರ್ ಅನ್ನು ಜಿಲ್ಲಾಸ್ಪತ್ರೆಗೆ ಮತ್ತೊಂದನ್ನು ಜೀರನ್ ತೆಹ್ಸಿಲ್ ಆಸ್ಪತ್ರೆಗೆ ನೀಡಿದ್ದಾರೆ. ಕೃಷಿಕರಾಗಿರುವ ಗುರ್ಜಾರ್ […]

ಮಗಳ ಮದುವೆಗೆ ಮೀಸಲಿಟ್ಟ 2 ಲಕ್ಷ ರೂ. ಹಣವನ್ನು ಆಕ್ಸಿಜನ್ ಖರೀದಿಗಾಗಿ ದೇಣಿಗೆ ನೀಡಿದ ರೈತ! Read More »

‘ಎಚ್ಚರ’ ಪಿಂಕ್‌ ವಾಟ್ಸಾಪ್‌ ಎಂಬ ಮೋಹಕ್ಕೆ ಬಲಿಯಾಗದಿರಿ !

ಇಂದು ಬಹುತೇಕರ ವಾಟ್ಸಾಪ್‌ ಮತ್ತು ಇತರ ಸಾಮಾಜಿಕ ತಾಣಗಳ ವೇದಿಕೆಗಳಲ್ಲಿ ಪಿಂಕ್‌ ವಾಟ್ಸಾಪ್‌ ಎಂಬ ಹೊಸ ವಾಟ್ಸಾಪ್‌ ವರ್ಶನ್‌ ಬಂದಿದೆ ಎಂದು ಅದನ್ನು ಒತ್ತಲು ಹೇಳಿ ಲಿಂಕ್‌ ಕಳಿಸಿದ್ದರು. ಇದನ್ನು ನಿಜವೆಂದು ತಿಳಿದು ಒತ್ತಿದವರಿಗೆ ತಿಳಿಯದೆಯೇ ಅವರಿರುವ ಎಲ್ಲಾ ಗ್ರೂಪ್‌ಗಳಿಗೆ ಅದರ ಲಿಂಕ್‌ ಹಂಚಿಕೆಯಾಗುತ್ತಿತ್ತು. ಹೀಗೆ ಅದೇ ಸಂದೇಶ ಪ್ರತಿ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಇಂದು ಹಲವಾರು ಬಾರಿ ಪುನಾರಾವರ್ತನೆಯಾಗುತ್ತಿತ್ತು.ವಾಸ್ತವದಲ್ಲಿ ಇದೊಂದು ವೈರಸ್‌ ರೂಪವಾಗಿದ್ದು, ಇದನ್ನು ಒತ್ತಿದವರ ಮೊಬೈಲ್‌ ಹಾಗೂ ವಾಟ್ಸಾಪ್‌ ಕೆಲ ಕಾಲ ಸ್ಥಗಿತಗೊಳ್ಳುತ್ತಿತ್ತು. ಪಿಂಕ್‌ ವಾಟ್ಸಾಪ್‌

‘ಎಚ್ಚರ’ ಪಿಂಕ್‌ ವಾಟ್ಸಾಪ್‌ ಎಂಬ ಮೋಹಕ್ಕೆ ಬಲಿಯಾಗದಿರಿ ! Read More »

2 ನೇ ಮದುವೆಗೆ ಕುಟುಂಬ ಸದಸ್ಯರ ಅಡ್ಡಿ: 11 ಸಾವಿರ ವೋಲ್ಟೇಜ್ ಇರುವ ವಿದ್ಯುತ್ ಕಂಬ ಹತ್ತಿ ಕುಳಿತ ತಾತ!

ಧೋಲ್ಪುರ್: ಈಗಿನ ಕಾಲದಲ್ಲಿ ಹುಡುಗರಿಗೆ ಒಂದು ಮದುವೆಯಾಗುವುದೇ ದುಸ್ತರವಾಗಿದೆ. ಅಂಥದ್ದರಲ್ಲಿ ತನ್ನ ಕುಟುಂಬ ಸದಸ್ಯರು ತಾನು ಎರಡನೇ ಮದುವೆಯಾಗುವುದಕ್ಕೆ ಅಡ್ಡಿಯಾದರು ಎಂಬ ಕಾರಣಕ್ಕೆ 60 ವರ್ಷದ ವೃದ್ಧನೋರ್ವ 11 ಸಾವಿರ ವೋಲ್ಟೇಜ್ ಇರುವ ವಿದ್ಯುತ್ ಕಂಬ ಹತ್ತಿ ಕುಳಿತ ವಿಲಕ್ಷಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ.  ಧೋಲ್ಪುರ್ ಜಿಲ್ಲೆಯ ವೃದ್ಧ ಸೋಬ್ರಾನ್ ಅವರ ಪತ್ನಿ ಮೃತಪಟ್ಟಿದ್ದು, ಎರಡನೇ ಮದುವೆ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ತನ್ನ 5 ಮಕ್ಕಳ ಮುಂದಿಟ್ಟಿದ್ದಾರೆ. ಆದರೆ ಮಕ್ಕಳು ಇದಕ್ಕೆ ಹೆಚ್ಚು ಮಹತ್ವ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ವೃದ್ಧ

2 ನೇ ಮದುವೆಗೆ ಕುಟುಂಬ ಸದಸ್ಯರ ಅಡ್ಡಿ: 11 ಸಾವಿರ ವೋಲ್ಟೇಜ್ ಇರುವ ವಿದ್ಯುತ್ ಕಂಬ ಹತ್ತಿ ಕುಳಿತ ತಾತ! Read More »

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ವ್ಯಕ್ತಿಯಿಂದ ಕಿರುಕುಳ – ಪೊಲೀಸರೆದುರೇ ಆರೋಪಿಗೆ ಕಪಾಳ ಮೋಕ್ಷ ಮಾಡಿದ ಯುವತಿ

ಮಂಗಳೂರು : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಪಕ್ಕದಲ್ಲಿ ಕುಳಿತಿದ್ದ ಯುವಕ ಕಿರುಕುಳ ನೀಡಿ ಇನ್‌ಸ್ಟ್ಯಾ ಗ್ರಾಮ್‌ನಲ್ಲಿ ವೈರಲ್‌ ಆಗಿದ್ದ ಕಾಮುಕನನ್ನು ಮಂಗಳೂರು ನಗರ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯನ್ನು ಕಾಸರಗೋಡು ನಿವಾಸಿ ಹುಸೇನ್‌ (41) ಎಂದು ಗುರುತಿಸಲಾಗಿದೆ. ಕಪಾಳಮೋಕ್ಷಆರೋಪಿಯ ಕುರಿತು ಮಾಹಿತಿ ನೀಡುವ ಸಲುವಾಗಿ ಪೊಲೀಸ್‌ ಕಮಿಷನರ್‌ ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಆರೋಪಿಯನ್ನು ಮಾಧ್ಯಮದವರ ಮುಂದೆ ಕರೆತರಲಾಗಿದ್ದು, ಈ ವೇಳೆ ಅಲ್ಲಿಯೇ ಇದ್ದ ಯುವತಿ ಆರೋಪಿಯನ್ನು ಕಂಡೊಡನೆ ಪೊಲೀಸರ ಮುಂದೆಯೇ ಕಪಾಳಮೋಕ್ಷ ಮಾಡಿರುತ್ತಾರೆ.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ವ್ಯಕ್ತಿಯಿಂದ ಕಿರುಕುಳ – ಪೊಲೀಸರೆದುರೇ ಆರೋಪಿಗೆ ಕಪಾಳ ಮೋಕ್ಷ ಮಾಡಿದ ಯುವತಿ Read More »

ವೀರಪ್ಪನ್‌ ವೆಬ್‌ ಸಿರೀಸ್‌ನಲ್ಲಿ ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಅಭಿನಯ

ಬೆಂಗಳೂರು, ಅ.1: ಒಂದು ಕಾಲದಲ್ಲಿ ಇಡೀ ದೇಶವನ್ನೇ ನಡುಗಿಸಿದ್ದ ನರಹಂತಕ ವೀರಪ್ಪನ್ ಕುರಿತು ತಯಾರಾಗುತ್ತಿರುವ  ವೆಬ್ ಸಿರೀಸ್ ನಲ್ಲಿ   ಬಾಲಿವುಡ್‌ ನಟ ಸುನಿಲ್‌ ಶೆಟ್ಟಿಯವರು ನಟಿಸಲಿದ್ದಾರಂತೆ.  ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ವೆಬ್ ಸಿರೀಸ್  ಈಗಾಗಲೇ 36 ದಿನಗಳ ಶೂಟಿಂಗ್ ಮುಗಿಸಿದೆ . ಈ ಕುರಿತು  ಈಗಾಗಲೇ ಸುನಿಲ್‌ ಶೆಟ್ಟಿ ಜೊತೆಗೆ  ಮಾತುಕತೆ ನಡೆಸಲಾಗಿದ್ದು ಅವರು ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಸುನೀಲ್ ಶೆಟ್ಟಿಯವರು ಈ ವೆಬ್‌ ಸಿರೀಸ್‌ನಲ್ಲಿ  ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಪಾತ್ರದಲ್ಲಿ

ವೀರಪ್ಪನ್‌ ವೆಬ್‌ ಸಿರೀಸ್‌ನಲ್ಲಿ ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಅಭಿನಯ Read More »

ಸಿರಿಬಾಗಿಲು ಪ್ರತಿಷ್ಠಾನದ ಕೊರೊನಾ ಯಕ್ಷ ಜಾಗೃತಿಗೆ WHO ಮೆಚ್ಚುಗೆ

ಕಾಸರಗೋಡು, ಸೆ. 15 : ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕೊರೊನಾ ವೈರಸ್‌ ಸೋಂಕಿನ ಕುರಿತು ಜಾಗೃತಿ ಮೂಡಿಸಲು ನಡೆಸಿದ ಯಕ್ಷಗಾನ ಗೊಂಬೆಯಾಟ  ವಿಶ್ವ ಆರೋಗ್ಯ ಸಂಸ್ಥೆ (WHO) ಮೆಚ್ಚುಗೆಗೆ ಪಾತ್ರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಕ್ರಾಮಿಕ ಪಿಡುಗು ಉಲ್ಬಣ ಮತ್ತು ಪ್ರತಿಸ್ಪಂದನಾ ಜಾಲ ಎಂಬ ವಿಭಾಗವು ಕಾಲಕಾಲಕ್ಕೆ ಜಾಗತಿಕ ಮಟ್ಟದಲ್ಲಿ ಕೊರೊನಾ ಉಂಟು ಮಾಡಿರುವ ಪರಿಣಾಮಗಳು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕ ಹಾಗೂ ಸ್ಥಳೀಯ ಮಟ್ಟದಲ್ಲಿ ನಡೆದ ಪ್ರಯತ್ನಗಳ ಪರಿವೀಕ್ಷಣೆ

ಸಿರಿಬಾಗಿಲು ಪ್ರತಿಷ್ಠಾನದ ಕೊರೊನಾ ಯಕ್ಷ ಜಾಗೃತಿಗೆ WHO ಮೆಚ್ಚುಗೆ Read More »

ಉಡುಪಿಯಲ್ಲಿಂದು 167 ಕೊರೊನಾ ಪಾಸಿಟಿವ್‌

ಪಾಸಿಟಿವ್‌ 167 ನೆಗೆಟಿವ್‌ 812 ಒಟ್ಟು ಡಿಸ್ಚಾರ್ಜ್‌ 250 ಸಕ್ರಿಯ ಪ್ರಕರಣ 2221 ಇದುವರೆಗೆ ಮೃತರಾದವರು 3(ಬುಧವಾರ) ಉಡುಪಿ ಇಂದಿನ ಪಾಸಿಟಿವ್‌ 92 ಕುಂದಾಪುರ 19 ಕಾರ್ಕಳ 52 ಪುರುಷರು 00 ಮಹಿಳೆಯರು 00

ಉಡುಪಿಯಲ್ಲಿಂದು 167 ಕೊರೊನಾ ಪಾಸಿಟಿವ್‌ Read More »

error: Content is protected !!
Scroll to Top