• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

Uncategorized

ಪಿಟಿಐಗೆ 84 ಕೋಟಿ ರೂ. ದಂಡ

ದಿಲ್ಲಿ : ಕಟ್ಟಡ ನಿರ್ಮಾಣ ಪ್ಲಾನ್ ಉಲ್ಲಂಘಿಸಿ ಕಚೇರಿಯನ್ನು ಕಟ್ಟಿರುವ ಆರೋಪದ ಮೇಲೆ ಪ್ರಮುಖ ನ್ಯೂಸ್‌ ಏಜೆನ್ಸಿಯಾಗಿರುವ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ  ಕೇಂದ್ರ ವಸತಿ ಮತ್ತು ನಗರ ವ್ಯವವಹಾರ ಸಚಿವಾಲಯ 84 ಕೋಟಿ ರೂ. ದಂಡ ವಿಧಿಸಿ ನೊಟೀಸ್ ಹೊರಡಿಸಿದೆ. ಪಿಟಿಐ ಚೀನಾ ರಾಯಬಾರಿ ಸನ್ ವಿಸಾಂಗ್ ಸಂದರ್ಶನ ನಡೆಸಿದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ. ಕಚೇರಿ ನಿರ್ಮಾಣಕ್ಕೆ ನೀಡಿದ್ದ ಪ್ಲಾನ್ ಗಿಂತ ಭಿನ್ನವಾಗಿ ಪಿಟಿಐ ಕಟ್ಟಡ ನಿರ್ಮಾಣ ಮಾಡಿರುವುದಾಗಿ ಆರೋಪಿಸಿರುವ […]

ಪಿಟಿಐಗೆ 84 ಕೋಟಿ ರೂ. ದಂಡ Read More »

ಮಂಗಳವಾರ ದ್ವಿತೀಯ ಪಿಯುಸಿ ಫಲಿತಾಂಶ

ಬೆಂಗಳೂರು: ಜುಲೈ‌ 14ರಂದು ಮಂಗಳವಾರ  ದ್ವಿತೀಯ ಪಿಯುಸಿ ಪರೀಕ್ಷೆ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ  ಸುರೇಶ್‌ ಕುಮಾರ್‌ ಅವರು ಘೋಷಣೆ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ 11.30ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳ ಮೊಬೈಲ್‌ಗೆ ಫಲಿತಾಂಶ ಬರಲಿದೆ. 12 ಗಂಟೆಗೆ ಫಲಿತಾಂಶವನ್ನು  ವೆಬ್‌ಸೈಟ್‌ನಲ್ಲಿ ನೋಡಬಹುದು. http://www.karresults.nic.in ಲಿಂಕ್‌ಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಕೊರೋನಾ ವೈರಸ್‌ ಕಾರಣದಿಂದ ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್‌ ಪರೀಕ್ಷೆಯನ್ನು ಜೂನ್‌ 18ರಂದು ನಡೆಸಲಾಗಿತ್ತು. ಇದೀಗ ಮೌಲ್ಯಮಾಪನ ಯಶಸ್ವಿಯಾಗಿ ನಡೆದಿದ್ದು, ಫಲಿತಾಂಶ

ಮಂಗಳವಾರ ದ್ವಿತೀಯ ಪಿಯುಸಿ ಫಲಿತಾಂಶ Read More »

ಅರುಣಾಚಲ ಪ್ರದೇಶದಲ್ಲಿ 6 ನಾಗಾ ಉಗ್ರರ ಹತ್ಯೆ- ಚೀನದ ಶಸ್ತ್ರಾಸ್ತ್ರಗಳು ವಶ

ತಿರಾಪ್: ಅರುಣಾಚಲ ಪ್ರದೇಶದ ಖೋನ್ಸಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸೇನೆಯು ಭಯೋತ್ಪಾದಕರ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆಸಿದೆ. ಇಲ್ಲಿ ತಿರಾಪ್ ಜಿಲ್ಲೆಯಲ್ಲಿ ಸೇನೆಯು 6 ಭಯೋತ್ಪಾದಕರನ್ನು ಹತ್ಯೆಗೈದಿದೆ. ಈ ಎಲ್ಲ ಭಯೋತ್ಪಾದಕರು ನಾಗಾ ಉಗ್ರ ಸಂಘಟನೆಯ (ಎನ್‌ಎಸ್‌ಸಿಎನ್-ಐಎಂ) ಸದಸ್ಯರಾಗಿದ್ದರು.  ಹತ್ಯೆಗೀಡಾದ ಭಯೋತ್ಪಾದಕರಿಂದ ಚೀನದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರುಣಾಚಲ ಪ್ರದೇಶದ  ಡಿಜಿಪಿ ಆರ್. ಪಿ.ಉಪಾಧ್ಯಾಯ ಶನಿವಾರ ಮುಂಜಾನೆ 4.30 ರ ಸುಮಾರಿಗೆ ಪೊಲೀಸ್ ಮತ್ತು ಅಸ್ಸಾಂ ರೈಫಲ್ಸ್ ಜಂಟಿ ತಂಡ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ ನಾಗ

ಅರುಣಾಚಲ ಪ್ರದೇಶದಲ್ಲಿ 6 ನಾಗಾ ಉಗ್ರರ ಹತ್ಯೆ- ಚೀನದ ಶಸ್ತ್ರಾಸ್ತ್ರಗಳು ವಶ Read More »

6 ಗೂಂಡಾಗಳು ಮಟಾಷ್‌, 12 ಮಂದಿ ನಾಪತ್ತೆ

 8 ಪೊಲೀಸರನ್ನು ಸಾಯಿಸಿದ ಪಾತಕಿಗಳ ಬೇಟೆಗೆ ತಯಾರಾಗಿದ್ದಾರೆ ಉತ್ತರ ಪ್ರದೇಶ ಪೊಲೀಸರು ಲಕ್ನೊ : ಗ್ಯಾಂಗ್‌ ಲೀಡರ್‌ ವಿಕಾಸ್‌ ದುಬೆ ಸೇರಿ  6 ಗೂಂಡಾಗಳು ಮಟಾಷ್‌, 12 ಮಂದಿ ನಾಪತ್ತೆ, ಮೂವರು ಕಂಬಿಯ ಹಿಂದೆ. ಇದು ಜು.3ರಂದು  8  ಮಂದಿ ಪೊಲೀಸರನ್ನು ಹೊಂಚಿ ಹಾಕಿ ಕೊಂದ ಪಾತಕಿ  ಗ್ಯಾಂಗ್‌ಗೆ ಆಗಿರುವ ಗತಿ. ತಲೆಮರೆಸಿಕೊಂಡಿರುವವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ಹತ್ಯೆಗೆ ಷಡ್ಯಂತ್ರ ರಚಿಸಿದ್ದ ಗ್ಯಾಂಗ್‌ ಲೀಡರ್‌ ವಿಕಾಸ್‌ ದುಬೆ ಶುಕ್ರವಾರ ಬೆಳಗ್ಗೆ ಕಾನ್ಪುರ ಸಮೀಪ ಪೊಲೀಸರ

6 ಗೂಂಡಾಗಳು ಮಟಾಷ್‌, 12 ಮಂದಿ ನಾಪತ್ತೆ Read More »

ಐಟಿ ಕಂಪನಿಯ 18,000 ಟೆಕ್ಕಿಗಳಿಗೆ ಪಿಂಕ್ ಸ್ಲಿಪ್

ಬೆಂಗಳೂರು:ಕೊರೊನಾ ಪಿಡುಗು ಒಂದೊಂದೆ ಕ್ಷೇತ್ರವನ್ನು ಆಪೋಶನ ತೆಗೆದುಕೊಳ್ಳುತ್ತಿದೆ.ಇದೀಗ ಐಟಿ ಕ್ಷೇತ್ರದ ಸರದಿ. ದೇಶದ ಪ್ರಮುಖ ಐಟಿ ಸಂಸ್ಥೆ ಕಾಗ್ನಿಜಂಟ್ ತನ್ನ 18,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಮುಂದಾಗಿದೆ. ಈ ಸುದ್ದಿ ಬಗ್ಗೆ ಕರ್ನಾಟಕ ರಾಜ್ಯ ಐಟಿ/ ಐಟಿಯೇತರ ಉದ್ಯೋಗಿಗಳ ಯೂನಿಯನ್ (ಕೆಐಟಿಯು) ಗರಂ ಆಗಿದ್ದು, ಕಾನೂನು ಸಮರ ಆರಂಭಿಸಿದೆ. ಕೊರೊನಾ ಮಹಾಮಾರಿಯಿಂದಾಗಿ ಐಟಿ ಕಂಪನಿಗಳಿಗೆ ತಕ್ಕಮಟ್ಟಿನ ಆರ್ಥಿಕ ಹೊಡೆತ ಬಿದ್ದಿದೆ. ಆದರೆ, ಯಾವುದೇ ಕಾರಣಕ್ಕೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬೇಡಿ ಎಂದು ಪ್ರಧಾನಿ ಮೋದಿಯಿಂದ ಸ್ಥಳೀಯ ಐಟಿ

ಐಟಿ ಕಂಪನಿಯ 18,000 ಟೆಕ್ಕಿಗಳಿಗೆ ಪಿಂಕ್ ಸ್ಲಿಪ್ Read More »

ರೈಲುಗಳ ಖಾಸಗೀಕರಣಕ್ಕೆ ಸಿದ್ಧತೆ

ದಿಲ್ಲಿ : ಭಾರತೀಯ ರೈಲ್ವೇ ಕೆಲವು ರೈಲುಗಳನ್ನು ಖಾಸಗಿಯವರಿಗೆ ವಹಿಸಲು ತಯಾರಿ ನಡೆಸಿದೆ. ಆರಂಭದಲಿಲ 151 ರೈಲುಗಳನ್ನು ಆಯ್ದ ಮಾರ್ಗಗಳಲ್ಲಿ ಖಾಸಗಿಯವರು ಓಡಿಸಲಿದ್ದಾರೆ.. ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಡೆಸಲಾಗುವುದು. ಈ ರೈಲುಗಳ ಶುಲ್ಕಕ್ಕೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು ಶುಲ್ಕ ದುಬಾರಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಏಕೆಂದರೆ ಕೇವಲ 5 ಪ್ರತಿಶತದಷ್ಟು ರೈಲುಗಳನ್ನು ಖಾಸಗಿ ನಿರ್ವಾಹಕರಿಗೆ ನೀಡಲಾಗುವುದು. ರೈಲ್ವೆ ಉಳಿದ 95% ರೈಲುಗಳನ್ನು ಓಡಿಸುತ್ತದೆ ಎಂದವರು ಮಾಹಿತಿ ನೀಡಿದ್ದಾರೆ. ಎಪ್ರಿಲ್ 2023ರ

ರೈಲುಗಳ ಖಾಸಗೀಕರಣಕ್ಕೆ ಸಿದ್ಧತೆ Read More »

ಮೋದಿ ಲಡಾಕ್‌ ಭೇಟಿಗೆ ಚೀನ ಲೇವಡಿ

ದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಡಾಖ್‌ಗೆ ಭೇಟಿ ನೀಡಿದ ಅಚ್ಚರಿಯ ಬೆಳವಣಿಗೆಗೆ ಚೀನ ವ್ಯಂಗ್ಯವಾಗಿ  ಪ್ರತಿಕ್ರಿಯಿಸಿದೆ. ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಜೀವೋ ಲಿಜಿಯಾನ್ “ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಮುಂದಾಗಿದೆ, ಈ ಹಂತದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮಕ್ಕೆ ಮುಂದಾಗಬಾರದು ಅಂತ ಹೇಳಿಕೊಂಡಿದ್ದಾರೆ. ಸಿಒಎಎಸ್ ಜನರಲ್ ನರವಣೆ ಮತ್ತು ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ

ಮೋದಿ ಲಡಾಕ್‌ ಭೇಟಿಗೆ ಚೀನ ಲೇವಡಿ Read More »

ಕೊರೊನಾ ಲಸಿಕೆ ಆಗಸ್ಟ್ 15ರಂದು ಬಿಡುಗಡೆ?

ದಿಲ್ಲಿ: ಕೊರೊನಾ ವೈರಸ್ ಲಸಿಕೆಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯೊಂದು ಬಂದಿದ್ದು ದೇಶದಲ್ಲಿ ತಯಾರಾಗುತ್ತಿರುವ   ಲಸಿಕೆಯನ್ನು ಮುಂದಿನ ತಿಂಗಳು ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಭಾರತೀಯ ವಿಜ್ಞಾನಿಗಳು ತಮ್ಮ ಸಿದ್ಧತೆಗಳನ್ನು ಹೆಚ್ಚಿಸಿದ್ದು ಕ್ಲಿನಿಕಲ್ ಪ್ರಯೋಗಗಳನ್ನು ಸಹ ವೇಗಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಸಿದ್ಧಪಡಿಸಲಾದ ಲಸಿಕೆಕೊರೊನಾ ಲಸಿಕೆ ತಯಾರಿಸುವಲ್ಲಿ ಭಾರತ ಬಹುತೇಕ ಯಶಸ್ವಿಯಾಗಿದೆ. ಈಗ ಇದನ್ನು ವಿಶ್ವದ ಮೊದಲ ಕೊರೊನಾ ಲಸಿಕೆ ಅಥವಾ ಎರಡನೆಯದು ಎಂದು

ಕೊರೊನಾ ಲಸಿಕೆ ಆಗಸ್ಟ್ 15ರಂದು ಬಿಡುಗಡೆ? Read More »

ಕೊರೊನಾ ಯಕ್ಷ ಜಾಗೃತಿ ಯಕ್ಷಗಾನ ಬೊಂಬೆಯಾಟ ಶೀಘ್ರದಲ್ಲೇ ಬಿಡುಗಡೆ

    ಕಳೆದ ಮಾರ್ಚ್ ತಿಂಗಳಲ್ಲಿ ಕೊರೊನಾ ಯಕ್ಷ ಜಾಗೃತಿ ಯಕ್ಷಗಾನ ಪ್ರದರ್ಶನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿ ವಿಶ್ವ ವಿಖ್ಯಾತಿಯಾದ ಸಿರಿಬಾಗಿಲು ವೆಂಕಪ್ಪಯ್ಯ  ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು  ಸಂಸ್ಥೆಯು ತಮ್ಮ  ಮುಂದಿನ  ಸಂಯೋಜನೆಯು,  ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಸಹಯೋಗ, ಪ್ರದರ್ಶನದೊಂದಿಗೆ  ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಸಹಕಾರದೊಂದಿಗೆ ನಿರ್ಮಾಣವಾಗುತ್ತಿರುವ ಕೊರೊನ ಯಕ್ಷ ಜಾಗೃತಿ ಬೊಂಬೆಯಾಟ ಪ್ರದರ್ಶನ ವನ್ನು ಸಾಮಾಜಿಕ ಜಾಲತಾಣಗಳ ಮೂಲಕ ದೇಶ ವಿದೇಶಗಳಲ್ಲಿ ಪ್ರಚುರಪಡಿಸುವ ಕಾರ್ಯದ ಪೂರ್ವ ಸಿದ್ಧತೆಗಳು ಭರದಿಂದ

ಕೊರೊನಾ ಯಕ್ಷ ಜಾಗೃತಿ ಯಕ್ಷಗಾನ ಬೊಂಬೆಯಾಟ ಶೀಘ್ರದಲ್ಲೇ ಬಿಡುಗಡೆ Read More »

error: Content is protected !!
Scroll to Top