• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕ್ರೈಂ

ಸುಶಾಂತ್‌ನ 15 ಕೋ.ರೂ.ಯನ್ನು ಗೆಳತಿ ರಿಯಾ ಲಪಟಾಯಿಸಿದರೆ? -ತಂದೆಯ ದೂರಿನಲ್ಲಿದೆ ಗಂಭೀರ ಆರೋಪ

ಪಾಟ್ನಾ, ಜು. 29: ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್‌ ತಂದೆ ಹಲವು ಗಂಭೀರವಾದ ಆರೋಪಗಳನ್ನು ಹೊರಿಸಿದ್ದಾರೆ. ಪಾಟ್ನಾದ ರಾಜೀವ್‌ ನಗರ್‌ ಪೊಲೀಸ್‌ ಠಾಣೆಯಲ್ಲಿ  ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬದವರು ಸೇರಿ ಆರು ಮಂದಿಯ ವಿರುದ್ಧ ಸುಶಾಂತ್‌ ತಂದೆ ಕೃಷ್ಣ ಕುಮಾರ್‌ ಸಿಂಗ್‌  ದೂರು ದಾಖಲಿಸಿದ್ದಾರೆ. ಮಗನ ಸಾವಿಗೆ ರಿಯಾ ಮತ್ತು ಆಕೆಯ ಕುಟುಂಬದವರೇ ಕಾರಣ.ಮಗನನ್ನು ಅವರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ […]

ಸುಶಾಂತ್‌ನ 15 ಕೋ.ರೂ.ಯನ್ನು ಗೆಳತಿ ರಿಯಾ ಲಪಟಾಯಿಸಿದರೆ? -ತಂದೆಯ ದೂರಿನಲ್ಲಿದೆ ಗಂಭೀರ ಆರೋಪ Read More »

ಪಿಕ್‌ ಅಪ್‌ನಲ್ಲಿ ಬಾಳೆಗೊನೆ ನಡುವೆ ಗಾಂಜಾ ಸಾಗಾಟ

  ಮಂಜೇಶ್ವರ : ಲಾಕ್‌ ಡೌನ್‌ ಜಾರಿಯಲ್ಲಿದ್ದರೂ ಮಾದಕ ವಸ್ತುಗಳ  ಕಳ್ಳ ಸಾಗಾಟ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಕರ್ನಾಟಕ –ಕೇರಳ ಗಡಿ ಭಾಗವಾಗಿರುವ ಮಂಜೇಶ್ವರದ ಕುಂಜತ್ತೂರಿನಲ್ಲಿ ಪಿಕಪ್ ವಾಹನದಲ್ಲಿ ಬಾಳೆಗೊನೆಗಳ ಮಧ್ಯೆ ಬಚ್ಚಿಟ್ಟು ಗಾಂಜಾ ಸಾಗಾಟ ಮಾಡಿದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಕುಂಜತ್ತೂರಿನಲ್ಲಿ ಕಾರ್ಯಾಚರಣೆ ನಡೆಸಿದ ಮಂಜೇಶ್ವರ ಪೊಲೀಸರು ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ಪಡೆದಿದ್ದಾರೆ. ಪಿಕಪ್ ವಾಹನದಲ್ಲಿದ್ದ ಅರೋಪಿಗಳು ಪರಾರಿಯಾಗಿದ್ದಾರೆ.

ಪಿಕ್‌ ಅಪ್‌ನಲ್ಲಿ ಬಾಳೆಗೊನೆ ನಡುವೆ ಗಾಂಜಾ ಸಾಗಾಟ Read More »

ರೆಸಾರ್ಟ್‌ನಲ್ಲಿ ಬರ್ತ್‌ಡೇ ಪಾರ್ಟಿ ಮಾಡಿದ ವೈದ್ಯರು

ಪುಣೆ : ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸರಕಾರದಿಂದ ಹಿಡಿದು ಎಲ್ಲರೂ ಹೇಳುತ್ತಿದ್ದಾರೆ. ಅದರೆ ಕೆಲವೊಮ್ಮೆ ಹೀಗೆ ಬುದ್ಧಿ ಹೇಳುವವರಿಂದಲೇ ನಿಯಮ  ಉಲ್ಲಂಘನೆಯಾಗುತ್ತಿದೆ. ಪುಣೆಯಲ್ಲಿ ಇಂಥ ಒಂದು  ಘಟನೆ ಸಂಭವಿಸಿದೆ. ದುರಂತವೆಂದರೆ ಇಲ್ಲಿ ಜನರಿಗೆ ಅರಿವು ಮೂಡಿಸಬೇಕಾದ ವೈದ್ಯರಿಂದಲೇ ಲಾಕ್‌ ಡೌನ್‌ ನಿಯಮ ಉಲ್ಲಂಘನೆಯಾಗಿದೆ. ಪುಣೆಯ ಹೊರಭಾಗವಾದ ಶಿರೂರ್‌ ನಲ್ಲಿರುವ ಒಂದು ರೆಸಾರ್ಟ್‌ ನಲ್ಲಿ ನಡೆಯುತ್ತಿದ್ದ ಭರ್ಜರಿ ಬರ್ತ್‌ ಡೇ ಪಾರ್ಟಿಯೊಂದಕ್ಕೆ ದಾಳಿ ಮಾಡಿರುವ ಪೊಲೀಸರು 11 ವೈದ್ಯರು ಹಾಗೂ ರೆಸಾರ್ಟ್‌ನ

ರೆಸಾರ್ಟ್‌ನಲ್ಲಿ ಬರ್ತ್‌ಡೇ ಪಾರ್ಟಿ ಮಾಡಿದ ವೈದ್ಯರು Read More »

ಬ್ಯಾಂಕಿನಿಂದ ಬರೀ ಅರ್ಧ ನಿಮಿಷದಲ್ಲಿ 10 ಲ.ರೂ.ಎಗರಿಸಿದ 10 ವರ್ಷದ ಬಾಲಕ

ಇಂದೋರ್‌ : ಮಧ್ಯ ಪ್ರದೇಶದ ಇಂದೋರ್‌ ನಲ್ಲಿ 10 ವರ್ಷದ ಬಾಲಕನೊಬ್ಬ ಬರೀ 30 ಸೆಕೆಂಡಿನಲ್ಲಿ 10 ಲ. ರೂ. ಎಗರಿಸಿ ಇಡೀ ಭದ್ರತಾ ವ್ಯವಸ್ಥೆಯನ್ನೇ ಅಣಕಿಸಿದ್ದಾನೆ. ನೀಮುಚ್‌ ಜಿಲ್ಲೆಯ ಜವಾಡ್‌ ನಲ್ಲಿರುವ ಸಹಕಾರಿ ಬ್ಯಾಂಕಿನ ಶಾಖೆಗೆ ಗ್ರಾಹಕರು ತುಂಬಿರುವ ಹೊತ್ತಿನಲ್ಲೇ ಬಂದ ಬಾಲಕ ಯಾರ ಅರಿವಿಗೂ ಬಾರದಂತೆ ಹಣ ಎಗರಿಸಿ ದಂಗು ಬಡಿಸಿದ್ದಾನೆ.ಕ್ಯಾಶಿಯರ್‌ ಯಾವುದೋ ಕೆಲಸಕ್ಕೆ ಕೌಂಟರ್‌ ನಿಂದ ಎದ್ದು ಹೋದ ಸಂದರ್ಭವನ್ನು ಬಳಸಿ ಈ ಕೃತ್ಯವನ್ನು ಎಸಗಿದ್ದಾನೆ.   ಹಳೆ ಚಿಂದಿ ಉಡುಪು ಧರಿಸಿದ್ದ

ಬ್ಯಾಂಕಿನಿಂದ ಬರೀ ಅರ್ಧ ನಿಮಿಷದಲ್ಲಿ 10 ಲ.ರೂ.ಎಗರಿಸಿದ 10 ವರ್ಷದ ಬಾಲಕ Read More »

ತಮಿಳು ನಟ ವಿಜಯ್‌ ಮನೆಗೆ ಹುಸಿ ಬಾಂಬ್ ಬೆದರಿಕೆ

ಚೆನ್ನೈ: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌  ತಲಪತಿ ವಿಜಯ್ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಚೆನ್ನೈನ ಪೊಲೀಸ್ ಕಂಟ್ರೋಲ್ ರೂಂಗೆ  ಭಾನುವಾರ ಮಧ್ಯರಾತ್ರಿ ಬಂದ ಕರೆಯೊಂದು ಕೆಲವು ತಾಸು ಕೋಲಾಹಲ ಎಬ್ಬಿಸಿತು. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು ಕರೆ ಮಾಡಿದವನನ್ನು ಪತ್ತೆಹಚ್ಚಿದರು. ಪೊಲೀಸ್ ಕಂಟ್ರೋಲ್ ರೂಂಗೆ ಮಧ್ಯರಾತ್ರಿ ಬಾಂಬ್ ಬೆದರಿಕೆ ಕರೆ ಬಂದಿದೆ. ಪೊಲೀಸ್ ತಂಡಗಳು ಮತ್ತು ಬಾಂಬ್ ಸ್ಕ್ವಾಡ್ ಮನೆಗೆ ಧಾವಿಸಿ ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ. ಈ

ತಮಿಳು ನಟ ವಿಜಯ್‌ ಮನೆಗೆ ಹುಸಿ ಬಾಂಬ್ ಬೆದರಿಕೆ Read More »

ಅನಧಿಕೃತವಾಗಿ ದೇಣಿಗೆ ವಸೂಲಿ –ವ್ಯಕ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ ಜನರು

ಕಾರ್ಕಳ : ಮುಂಡ್ಕೂರು ಪರಿಸರದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಂದ ಹಾಗೂ ಅಂಗಡಿಮುಂಗಟ್ಟುಗಳಿಂದ ದೇಣಿಗೆ ವಸೂಲಿ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆವಿಷನ್ ಸಹಾಯನಿಧಿ ಸೇವಾ ಟ್ರೆಸ್ಟ್ ಕರ್ನಾಟಕ ಎಂಬ ಹೆಸರಿನಲ್ಲಿ ಮುದ್ರಿತವಾದ ಡೊನೆಷನ್ ಪುಸ್ತಕವನ್ನು ವ್ಯಕ್ತಿಯೋರ್ವನು ಹಿಡಿದುಕೊಂಡು ಮುಂಡ್ಕೂರು ಪರಿಸರದ ಸಾರ್ವಜನಿಕರಿಂದ ಹಾಗೂ ಅಂಗಡಿಗಳಿಂದ ದೇಣಿಗೆ ವಸೂಲು  ಮಾಡುತ್ತಿದ್ದು ಆತನನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ಕೊಡದೆ ತಪ್ಪಿಸಲೆತ್ನಿಸಿದನು. ಡೊನೇಷನ್ ರಶೀದಿಯಲ್ಲಿರುವ ಸಂಪರ್ಕ ಸಂಖ್ಯೆಗೂ ಪೋನ್ ಮಾಡಿದಾಗ ಉತ್ತರ ಸಿಗದಿದ್ದ ಕಾರಣ ಜನರು ಕೂಡಲೇ ಆತನನ್ನು

ಅನಧಿಕೃತವಾಗಿ ದೇಣಿಗೆ ವಸೂಲಿ –ವ್ಯಕ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ ಜನರು Read More »

ನೇತ್ರಾವತಿ ಸೇತುವೆಯಲ್ಲಿ ಇನ್ನೊಂದು ಆತ್ಮಹತ್ಯೆ

 ಕೊಡೆ ಇಟ್ಟು ವ್ಯಕ್ತಿಯೊಬ್ಬ ನೀರಿಗೆ ಹಾರಿದ ವ್ಯಕ್ತಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಜೆಪ್ಪಿನಮೊಗರು ನೇತ್ರಾವತಿ ಸೇತುವೆಯ ಮೇಲೆ ಕೊಡೆ ಇಟ್ಟು ವ್ಯಕ್ತಿಯೊಬ್ಬರು ನೀರಿಗೆ ಹಾರಿದ ಘಟನೆ ಇಂದು ಸಂಭವಿಸಿದೆ. ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗಿದ್ದು ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯು ಹೆಚ್ಚುತ್ತಿದೆ.ಹಾರಿದ ವ್ಯಕ್ತಿಯ ವಿವರಗಳು ತಿಳಿದು ಬಂದಿಲ್ಲ. ಉಳ್ಳಾಲ ಠಾಣಾ ಪೊಲೀಸರು ಕೊರೊನಾ ಸೋಂಕಿನಿಂದಾಗಿ ಕ್ವಾರಂಟೈನ್ ನಲ್ಲಿದ್ದಾರೆ. ನಗರದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ನೇತ್ರಾವತಿ ಸೇತುವೆಯಲ್ಲಿ ಇನ್ನೊಂದು ಆತ್ಮಹತ್ಯೆ Read More »

ಗೂಂಡಾಗಳಿಂದ ಗುಂಡಿನ ದಾಳಿ – 8 ಪೊಲೀಸರು ಬಲಿ

ಕಾನ್ಪುರ : ವಿಕಾಸ್ ದುಬೆ ಎಂಬ ಗೂಂಡಾನನ್ನು ಪತ್ತೆಹಚ್ಚಲು ಹೋಗಿದ್ದ ಪೊಲೀಸ್ ತಂಡದ ಮೇಲೆ ರೌಡಿಗಳು ಗುಂಡಿನ ದಾಳಿ ನಡೆಸಿದ್ದು, ಉಪ ನಿರೀಕ್ಷಕ ದೇವೇಂದ್ರ ಮಿಶ್ರಾ ಸೇರಿದಂತೆ 8 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿರುವ ಘಟನೆ ಉತ್ತರ ಪ್ರದೇಶದ  ಕಾನ್ಪುರದಲ್ಲಿ ನಡೆದಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಾನ್ಪುರದ ಚೌಬೆಪುರ್ ನ ಬಿತೂರ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಇತರ 7 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ದಾಳಿ ಸಮಯದಲ್ಲಿ ಸ್ಥಳದಲ್ಲಿ ಎಎಸ್ ಪಿ ಮತ್ತು ಪೊಲೀಸ್

ಗೂಂಡಾಗಳಿಂದ ಗುಂಡಿನ ದಾಳಿ – 8 ಪೊಲೀಸರು ಬಲಿ Read More »

ಸುಶಾಂತ್‌ ಸಿಂಗ್‌ ಆತ್ಮಹತ್ಯೆ- ಸಂಜಯ್‌ ಲೀಲಾ ಭನ್ಸಾಲಿಗೆ ವಿಚಾರಣೆ ಉರುಳು

 ಮುಂಬಯಿ : ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಖ್ಯಾಗ ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರನ್ನು ಪ್ರಶ್ನಿಸಲಿದಾರೆ.ಇತ್ತೀಚೆಗಷ್ಟೆ ನಟಿ ಸಂಜನಾ ಸಾಂಘಿ ಅವರನ್ನು ಪ್ರಶ್ನಿಸಲಾಗಿತ್ತು. ಈ ಪ್ರಕರಣಕ್ಕೆಬ ಸಂಬಂಧಿಸಿ ಈಗಾಗಲೇ ಪೊಲೀಸರು ನಸರ್ದೇಶಕ ಶೇಖರ್‌ ಕಪೂರ್‌, ಸುಶಾಂತ್‌ ಸ್ನೇಹಿತ ಸಂದೀಪ್‌ ಸಿಂಗ್‌ ಸೇರಿ 25 ಬಾಲಿವುಡ್ಡಿಗರನ್ನು ಪ್ರಶ್ನಿಸಲಾಗಿದೆ. ಸುಶಾಂತ್‌ ನಟಿಸಿದ ಕೊನೆಯ ಚಿತ್ರಕ್ಕೆ ಸಂಜನಾ ಸಾಂಘಿ ನಾಯಕಿಯಾಗಿದ್ದರು., ಸುಶಾಂತ್‌ ಜೂ.14 ರಂದು ಬಾಂದ್ರದಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಶಾಂತ್‌ ಸಿಂಗ್‌ ಆತ್ಮಹತ್ಯೆ- ಸಂಜಯ್‌ ಲೀಲಾ ಭನ್ಸಾಲಿಗೆ ವಿಚಾರಣೆ ಉರುಳು Read More »

error: Content is protected !!
Scroll to Top