ಸಾಣೂರು : ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ಅವರಿಗೆ ಬೀಳ್ಕೊಡುಗೆ

ಕಾರ್ಕಳ : ಸಾಣೂರು ಗ್ರಾ. ಪಂ. ಯಲ್ಲಿ ಕಳೆದ 3 ವರ್ಷಗಳಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಧು ಎಂ. ಸಿ. ಅವರು ತಾ. ಪಂ. ಸಹಾಯಕ ಲೆಕ್ಕಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ. ಇವರಿಗೆ ನ. 30 ರಂದು ಸಾಣೂರು ಗ್ರಾ. ಪಂಚಾಯತ್‌ನಲ್ಲಿ ಸಾರ್ವಜನಿಕ ಅಭಿನಂದನೆ ಹಾಗೂ ಬೀಳ್ಕೋಡುಗೆ ಸಮಾರಂಭ ನಡೆಯಿತು.

ಪಂಚಾಯತ್‌ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ
ಕೋವಿಡ್ ಸಂದರ್ಭದಲ್ಲಿ ಸಾಣೂರು ಗ್ರಾ. ಪಂ. ಉತ್ತಮ ವ್ಯವಸ್ಥೆಯ ನಿರ್ವಹಣೆ, ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನ, ಸಾರ್ವಜನಿಕರಿಗೆ ಉತ್ತಮ ಸೇವೆ, ಉತ್ತಮ ಆಡಳಿತದೊಂದಿಗೆ ಜಿಲ್ಲೆಯಲ್ಲಿ 7 ನೇ ಸ್ಥಾನ ಪಡೆಯುವಲ್ಲಿ ಮಧು ಅವರು ಪ್ರಮುಖ ಪಾತ್ರರಾಗಿದ್ದರು.

ಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವೇದಮೂರ್ತಿ ಶ್ರೀರಾಮ್ ಭಟ್, ಉಪಾಧ್ಯಕ್ಷ ಪ್ರಸಾದ ಪೂಜಾರಿ, ಕಾರ್ಯದರ್ಶಿ ಸವಿತಾ ಪ್ರಭು, ನರಸಿಂಹ ಕಾಮತ್, ಪ್ರವೀಣ್ ಕೋಟ್ಯಾನ್, ಯುವರಾಜ್ ಜೈನ್, ದೇವಾನಂದ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಗ್ರಾಮ ಲೆಕ್ಕಿಗ ಸಂಗಮೇಶ್, ಗ್ರಾ. ಪಂ. ಸದಸ್ಯರು, ಸಾಣೂರು ಯುವಕ ಮಂಡಲ ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಕರುಣಾಕರ್ ಎಸ್. ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.





























































































































































































































error: Content is protected !!
Scroll to Top