ಸ್ವಚ್ಛ ಕಾರ್ಕಳ ಬ್ರಿಗೇಡ್‌ – ಕುದುರೆಮುಖ ವನ್ಯಜೀವಿ ವಿಭಾಗ ವತಿಯಿಂದ ಬೃಹತ್‌ ಸೈಕಲ್‌ ಜಾಥಾ

ಕಾರ್ಕಳ : ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಸ್ವಚ್ಛ ಭಾರತ್ ಮಿಷನ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸ್ವಚ್ಛ ಕಾರ್ಕಳ ಬ್ರಿಗೇಡ್, ಕುದುರೆಮುಖ ವನ್ಯಜೀವಿ ವಿಭಾಗ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಭಾನುವಾರ ಸೈಕಲ್‌ ಜಾಥಾ ನಡೆಯಿತು. ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಜಾಥಾಕ್ಕೆ ಉದ್ಘಾಟಿಸಿದರು. ಡಿಎಫ್‌ಓ ಗಣಪತಿ, ಎಸಿಎಫ್‌ ಕು. ಕಾಜಲ್ ಪಾಟೀಲ್, ಸಿದ್ದಾಪುರ ಎಸಿಎಫ್ ಪ್ರಕಾಶ್ ಪೂಜಾರಿ ಈ ಸಂದರ್ಭದಲ್ಲಿದ್ದರು.

ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಚ್ಛ ಕಾರ್ಕಳ ಬ್ರಿಗೇಡ್‌ ಮಾದರಿಯಾಗಿ ಗುರುತಿಸಿಕೊಂಡಿದೆ. ಭಾನುವಾರ ನಡೆದ ಸೈಕಲ್‌ ಜಾಥಾದಲ್ಲಿ 100ಕ್ಕೂ ಅಧಿಕ ಸ್ವಚ್ಛತಾ ಸೇನಾನಿಗಳು ಭಾಗವಹಿಸಿದ್ದರು. ಕುದುರೆಮುಖ ವನ್ಯಜೀವಿ ವಿಭಾಗ ಕಚೇರಿ – ಬಂಡಿಮಠ – ಶ್ರೀ ವೆಂಕಟರಮಣ ದೇವಸ್ಥಾನವಾಗಿ ಕಾರ್ಕಳ ಬಸ್ ಸ್ಟ್ಯಾಂಡ್ – ಅನಂತಶಯನ- ದಾನ ಶಾಲೆವರೆಗೆ ಜಾಥಾ ಸಾಗಿತು.





























































































































































































































error: Content is protected !!
Scroll to Top