ಕಾರ್ಕಳ : ಜೆಡಿಎಸ್ನ ಹಿರಿಯ ನಾಯಕ, ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ (ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ) ಅವರು ಗುರುವಾರ ಬೆಳಗ್ಗೆ ನ್ಯೂಸ್ ಕಾರ್ಕಳ ಕಚೇರಿಗೆ ಭೇಟಿಯಿತ್ತರು. ಚಿಕ್ಕಮಗಳೂರಿನಿಂದ ಶಿವಮೊಗ್ಗ ಪ್ರಯಾಣಿಸುತ್ತಿದ್ದ ಅವರು ನ್ಯೂಸ್ ಕಾರ್ಕಳ ಕಚೇರಿಗೆ ಭೇಟಿ ನೀಡಿ ಕೆಲ ಹೊತ್ತು ಕಳೆದರು. ಪ್ರಚಲಿತ ರಾಜಕೀಯ ವಿದ್ಯಮಾನ ಬಗ್ಗೆ ಮಾತನಾಡಿದ ಅವರು ನ್ಯೂಸ್ ಕಾರ್ಕಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ನ್ಯೂಸ್ ಕಾರ್ಕಳ ಹೊರತಂದ ಕಾರ್ಕಳ ಉತ್ಸವ ಪುಸ್ತಕವನ್ನು ದತ್ತ ಅವರಿಗೆ ಹಸ್ತಾಂತರಿಸಲಾಯಿತು.
ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದ ದತ್ತ ಅವರು ಜೆಡಿಎಸ್ ಸೇರಿ ಪಕ್ಷದ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರು. 2006ರಿಂದ 2012ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ, 2013ರಿಂದ 2018ರ ಅವಧಿಗೆ ಕಡೂರು ಕ್ಷೇತ್ರದ ಶಾಸಕರಾಗಿದ್ದರು. ಅಗಾಧ ಜ್ಞಾನ ಹೊಂದಿದ್ದ ದತ್ತಾ ಅವರು ಅತ್ಯಂತ ಸರಳ, ಸಜ್ಜನಿಕೆ, ಪ್ರಾಮಾಣಿಕ ರಾಜಕಾರಣಿ ಎಂದೇ ಹೆಸರುವಾಸಿಯಾದವರು. ಪಕ್ಷಭೇದವಿಲ್ಲದೇ ಎಲ್ಲರೂ ಮೆಚ್ಚುವಂತ ನಾಯಕನಾಗಿರುವ ದತ್ತ ಉತ್ತಮ ಸಂಸದೀಯ ಪಟುವಾಗಿಯೂ ಗುರುತಿಸಿಕೊಂಡಿದ್ದರು.