ಬಾಲಕ ಸಂಜನ್‌ ಬಾಳಿಗೆ ಬೆಳಕಾದ ಇಂಧನ ಸಚಿವ ಸುನಿಲ್‌ ಕುಮಾರ್‌

ಕಾರ್ಕಳ : ಹೃದಯ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯ ದಾಖಲಾಗಿದ್ದ ಕಾರ್ಕಳ ತಾಲೂಕಿನ ಪುರಸಭಾ ವ್ಯಾಪ್ತಿಯ ಜೋಗಲ್ ಬೆಟ್ಟು ನಿವಾಸಿ ಸಂಜನ್‌ ಬಾಳಿಗೆ ಸಚಿವ ಸುನಿಲ್‌ ಕುಮಾರ್‌ ಬೆಳಕಾಗಿದ್ದಾರೆ. ಭುವನೇಂದ್ರ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ 17 ವರ್ಷದ ಸಂಜನ್‌ ಅವರಿಗೆ ಹೃದಯ ಸಮಸ್ಯೆ ಕಾಡಿತ್ತು. ತೀರಾ ಬಡ ಕುಟುಂಬದ ಕಾರಣ ಬಾಲಕನ ಚಿಕಿತ್ಸೆ ವೆಚ್ಛ ಲಕ್ಷಾಂತರ ರೂ. ಭರಿಸಲು ಮನೆಯವರು ಶಕ್ತರಾಗಿರಲಿಲ್ಲ. ಹೀಗಾಗಿ ದಿಕ್ಕು ತೋಚದಂತ ಪರಿಸ್ಥಿತಿ ಕುಟುಂಬ ವರ್ಗದ್ದು. ಹೀಗಾಗಿ ಪಿಯು ಕಾಲೇಜಿನ ಪ್ರಾಂಶುಪಾಲ ರಮೇಶ್‌ ಅವರು ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನಿಟ್ಟೆ ನವೀನ್‌ ನಾಯಕ್‌ ಅವರಿಗೆ ಸಮಸ್ಯೆ ಕುರಿತು ತಿಳಿಸಿದರು.
ನವೀನ್‌ ನಾಯಕ್‌ ಅವರು ತಕ್ಷಣವೇ ಸಚಿವ ಸುನಿಲ್‌ ಕುಮಾರ್‌ ಗಮನಕ್ಕೆ ತಂದರು. ಕೂಡಲೇ ಸ್ಪಂದಿಸಿದ ಸುನಿಲ್‌ ಕುಮಾರ್‌ ಸಂಜನ್‌ ತಾಯಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿ, ಧೈರ್ಯ ತುಂಬಿದರು. ಆಸ್ಪತ್ರೆ ಬಿಲ್‌ ಅನ್ನು ತನ್ನ ಕಚೇರಿಗೆ ತಲುಪಿಸುವಂತೆ ಕೇಳಿಕೊಂಡರು. ನಾರಾಯಣ ಹೃದಯಾಲಯ ಆಡಳಿತ ಸಮಿತಿಯವರಿಗೂ ಕರೆ ಮಾಡಿ ಬಾಲಕನಿಗೆ ಉತ್ತಮ ಚಿಕಿತ್ಸೆ ನೀಡುವಂತೆ ತಿಳಿಸಿ, ಆಸ್ಪತ್ರೆ ಬಿಲ್‌ ಅನ್ನು ತಾನೇ ವೈಯಕ್ತಿಕ ನೆಲೆಯಲ್ಲಿ ಪಾವತಿಸುವುದಾಗಿ ತಿಳಿಸಿದರು.

ಸ‍ಂಘ-ಸಂಸ್ಥೆ ದಾನಿಗಳಿಂದಲೂ ನೆರವು
ಬಾಲಕನ ಮನೆಯವರ ಬಡತನ ಕಂಡು ಹಲವಾರು ಸಂಘ-ಸಂಸ್ಥೆಗಳು, ಹಿಂದೂ ಸಂಘಟನೆಗಳು, ದಾನಿಗಳು ನೆರವಾಗಿದ್ದರು. ಅಪರೇಷನ್ ಥಿಯೇಟರಿಗೆ ದಾಖಲಿಸಿದ ನಂತರ ಡಿಸ್ಚಾರ್ಜ್ ಆಗುವ ತನಕ ಸರಿಸುಮಾರು 4 ಲಕ್ಷ ರೂ. ವೆಚ್ಚ ತಗಲಲಿದ್ದು, ಅದರಲ್ಲಿ ಆಯುಶ್ಮಾನ್ ಯೋಜನೆಯಡಿ 1 ಲಕ್ಷ 20ಸಾವಿರ ಬಿಡುಗಡೆಯಾಗಿದೆ.





























































































































































































































error: Content is protected !!
Scroll to Top