ರವಿ ಪೂಜಾರಿಯನ್ನು ಮುಂಬೈ ಪೊಲೀಸರ ಕಸ್ಟಡಿಗೊಪ್ಪಿಸಲು ಆದೇಶ

ಬೆಂಗಳೂರು, ನ.15: ಬೆಂಗಳೂರಿನ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ನ್ಯಾಯಾಲಯ 10 ದಿನಗಳ ಮಟ್ಟಿಗೆ ಮುಂಬಯಿ ಪೊಲೀಸರ ಕಸ್ಟಡಿಗೊಪ್ಪಿಸಿದೆ. 2015ರ ಪ್ರಕರಣವೊಂದಕ್ಕೆ ಸಂಬಂಧಿಸಿ ರವಿ ಪೂಜಾರಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವ ಅಗತ್ಯವಿದೆ ಎಂದು ಮುಂಬಯಿ ಪೊಲೀಸರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ರವಿ ಪೂಜಾರಿಯನ್ನು ಮುಂಬಯಿ ಪೊಲೀಸರ ಕಸ್ಟಡಿಗೊಪ್ಪಿಸಲು ಆದೇಶಿಸಿತು.
ಡಿ.12 ಕ್ಕಿಂತ ಮೊದಲು ರವಿ ಪೂಜಾರಿಯನ್ನು ಕಸ್ಟಡಿಗೆ ತೆಗೆದುಕೊಂಡು ಸಂಪೂರ್ಣ ಸುರಕ್ಷೆಯಲ್ಲಿ ಮುಂಬಯಿಗೆ ಕರೆದೊಯ್ಯಲು ನ್ಯಾಯಾಲಯ ಮುಂಬೈ ಪೊಲೀಸರಿಗೆ ಸೂಚಿಸಿದೆ.





























































































































































































































error: Content is protected !!
Scroll to Top