Author name: News desk

ಖ್ಯಾತ ಸಂತೂರ್‌ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ವಿಧಿವಶ

ಮುಂಬೈ : ಖ್ಯಾತ ಸಂತೂರ್ ವಾದಕ, ಪದ್ಮ ವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ(84) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕಿಡ್ನಿ ಸಮಸ್ಯೆಯ ಕಾರಣ ಕಳೆದ ಆರು ತಿಂಗಳಿನಿಂದ ಅವರು ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದರು.ಖ್ಯಾತ ಸಂತೂರ್ ವಾದಕರಾಗಿದ್ದ ಶರ್ಮಾ ಸಂಗೀತ ನಿರ್ದೇಶಕರು ಸಹ ಆಗಿದ್ದರು. ಜಮ್ಮುವಿನಲ್ಲಿ ಜನಿಸಿದ ಪಂಡಿತ್ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಸಂತೂರ್ ನುಡಿಸುವುದರ ಕಲಿಕೆ ಪ್ರಾರಂಭಿಸಿದರು. 1955ರಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಸಂತೂರ್ ಪ್ರದರ್ಶನ ನೀಡುವ ಮೂಲಕ ಸಂತೂರ್‌ ವಾದನವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದರು. ಹರಿಪ್ರಸಾದ್ […]

ಖ್ಯಾತ ಸಂತೂರ್‌ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ವಿಧಿವಶ Read More »

ಕಾರ್ಕಳದಲ್ಲಿ ದಾಖಲೆ ಬರೆಯುತ್ತಿರುವ ಚಿಣ್ಣರ ಮೇಳ 2022

ಕಾರ್ಕಳ : ನಗರದಲ್ಲಿ ಸ್ಥಾಪನೆ ಆಗಿರುವ ಯಕ್ಷರಂಗಾಯಣದ ಮೊದಲ ಪ್ರಸ್ತುತಿಯಾದ ಮಕ್ಕಳ ಬೇಸಿಗೆ ಶಿಬಿರವು ಕೋಟಿ ಚೆನ್ನಯ ಥೀಮ್ ಪಾರ್ಕ್‌ನ ಪರಿಸರದಲ್ಲಿ ಮೆ.9 ರಂದು ಆರಂಭವಾಗಿ ಮುಂದಿನ ಮೇ 15ರವರೆಗೆ ನಡೆಯಲಿದೆ. ರಂಗ ಮಾಂತ್ರಿಕ ಜೀವನ್ ರಾಂ ಸುಳ್ಯ ಅವರು ಶಿಬಿರದ ನಿರ್ದೇಶಕರಾಗಿ ಈ ಶಿಬಿರವನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.‌ ಸುನೀಲ್‌ ಕುಮಾರ್ ಅವರ ಆಶಯದಂತೆ ಅವರ ನೇರ ಮಾರ್ಗದರ್ಶನದಲ್ಲಿ ಈ ಶಿಬಿರ ಭಾರೀ ಯಶಸ್ವೀ ಆಗುತ್ತಿದೆ. ಉದ್ಘಾಟನಾ

ಕಾರ್ಕಳದಲ್ಲಿ ದಾಖಲೆ ಬರೆಯುತ್ತಿರುವ ಚಿಣ್ಣರ ಮೇಳ 2022 Read More »

ಕಾರ್ಕಳದಲ್ಲಿ ಪ್ರಥಮ ಬಾರಿಗೆ ಲೇಡೀಸ್ ಫಿಟ್ನೆಸ್ ಹೌಸ್ ಶುಭಾರಂಭ

ಕಾರ್ಕಳ : ಜೋಡುರಸ್ತೆ ಶ್ರೀದುರ್ಗಾಕೃಪಾ ಕೆನರಾ ಬ್ಯಾಂಕ್‌ ಕಟ್ಟಡದಲ್ಲಿ ಮೇ 8ರಂದು ಲೇಡೀಸ್ ಫಿಟ್ನೆಸ್ ಶುಭಾರಂಭಗೊಂಡಿತು. ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಕೆ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿ, ಶುಭಹಾರೈಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಂತರಾಷ್ಟ್ರೀಯ ಕ್ರೀಡಾಪಟು ಅಪ್ಸರಾ ಆರ್.‌ ಕಟೀಲ್‌ ಮಾತನಾಡಿ, ಆರೋಗ್ಯದ ರಕ್ಷಣೆಗೆ ಫಿಟ್ನೆಸ್‌ ಅಗತ್ಯ. ಮಹಿಳೆಯರಿಗಾಗಿಯೇ ಜೋಡುರಸ್ತೆಯಲ್ಲಿ ಫಿಟ್ನೆಶ್‌ ಕೇಂದ್ರ ಸ್ಥಾಪಿಸಿರುವುದು ಕಾರ್ಕಳದ ಜನತೆಗೆ ಸಂತಸದ ವಿಚಾರವೆಂದರು. ಕ್ರೈಸ್ಟ್ ಕಿಂಗ್ ಚರ್ಚ್‌ನ ಧರ್ಮಗುರು ರೆ.ಫಾ. ವಿಜಿತ್ ಮಥಾಯಿಸ್, ಬಂಗ್ಲೆಗುಡ್ಡೆ ತವೈಬ್ ಗಾರ್ಡನ್ ಪ್ರಾಂಶುಪಾಲ ಉಸ್ತಾದ್ ಮಹಮ್ಮದ್

ಕಾರ್ಕಳದಲ್ಲಿ ಪ್ರಥಮ ಬಾರಿಗೆ ಲೇಡೀಸ್ ಫಿಟ್ನೆಸ್ ಹೌಸ್ ಶುಭಾರಂಭ Read More »

ಬಿಜಾಪುರದ ಸೈನಿಕ್ ಶಾಲೆಯಲ್ಲಿ ಹೆಣ್ಮಕ್ಕಳಿಗೂ ಪ್ರವೇಶ : ಭೌತಿಕ ತರಗತಿಗಳು ಆರಂಭ

ವಿಜಯಪುರ : ಬಿಜಾಪುರ ಸೈನಿಕ ಶಾಲೆ ಪ್ರಸಕ್ತ ವರ್ಷದಿಂದ ದೈನಂದಿನ ತರಗತಿಗಳಿಗೆ ಬಾಲಕಿಯರಿಗೆ ಪ್ರವೇಶಕ್ಕೆ ಅವಕಾಶ ನೀಡಿದೆ. 1963 ರಿಂದ ಇದೇ ಮೊಟ್ಟ ಮೊದಲ ಬಾರಿಗೆ ಮಹಿಳಾ ಪ್ರಾಂಶುಪಾಲರು ನೇಮಕವಾಗಿದ್ದಾರೆ. 2020-21ನೇ ಸಾಲಿಗೆ ಬಾಲಕಿಯರಿಗೂ ಪ್ರವೇಶಾತಿ ನೀಡಿದ್ದು ಕೋವಿಡ್ ಕಾರಣದಿಂದ ಶಾಲೆಯಲ್ಲಿ ಇದುವರೆಗೂ ಆನ್ ಲೈನ್ ತರಗತಿ ನಡೆಯುತ್ತಿತ್ತು. ಆದರೆ ಮೊದಲ ಬಾರಿಗೆ ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಪ್ರಸ್ತುತ 7 ಮತ್ತು 8ನೇ ತರಗತಿಯಲ್ಲಿ 18 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇನ್ನೂ 8-10 ವಿದ್ಯಾರ್ಥಿನಿಯರು ಹಾಜರಾಗಲಿದ್ದಾರೆ. 6ನೇ

ಬಿಜಾಪುರದ ಸೈನಿಕ್ ಶಾಲೆಯಲ್ಲಿ ಹೆಣ್ಮಕ್ಕಳಿಗೂ ಪ್ರವೇಶ : ಭೌತಿಕ ತರಗತಿಗಳು ಆರಂಭ Read More »

ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಭ್ರಷ್ಟಾಚಾರವನ್ನು ಎಂದೂ ಸಹಿಸುವುದಿಲ್ಲ – ಸಿಎಂ

ಬೆಂಗಳೂರು: ನನ್ನ ಸರ್ಕಾರ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬವನ್ನು ಸಹಿಸುವುದಿಲ್ಲ. ನಿಮ್ಮೆಲ್ಲರನ್ನು ನಾನು ಗಮನಿಸುತ್ತಿದ್ದೇನೆ. ನೀವೆಲ್ಲರೂ ನನ್ನ ರಡಾರ್ ಕಣ್ಗಾವಲಿನಲ್ಲಿದ್ದೀರಿ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನಾನು ನಿಮ್ಮನ್ನು ವಿಚಾರಿಸಿ ಕೊಳ್ಳಬೇಕಾಗುತ್ತದೆ ಎಂದು ಜಿ. ಪಂ. ಸಿಇಓಗಳಿಗೆ ಮುಖ್ಯಮಂತ್ರಿ ಬಸವರಾಜ ಎಂ. ಬೊಮ್ಮಾಯಿ ಎಚ್ಚರಿಸಿದರು. ಮೆ.10 ರಂದು ಬೆಂಗಳೂರಿನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಜಿ. ಪಂ.ಗಳ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳ ಸಭೆಯಲ್ಲಿ ಸಿಇಒಗಳಿಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ನೀವೆಲ್ಲರೂ ಯುವಕರಿದ್ದೀರಿ.

ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಭ್ರಷ್ಟಾಚಾರವನ್ನು ಎಂದೂ ಸಹಿಸುವುದಿಲ್ಲ – ಸಿಎಂ Read More »

ಉಡುಪಿ ಕೆಮ್ಮಣ್ಣು ಬಳಿಯ ಮೂಡುತೋನ್ಸೆಯಲ್ಲಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆ

ಉಡುಪಿ: ವಿಜಯನಗರ ಸಾಮ್ರಾಜ್ಯದ ದೊರೆ ಇಮ್ಮಡಿ ದೇವರಾಯನ ಕಾಲದ ಶಾಸನವು ಉಡುಪಿ ಜಿಲ್ಲೆಯ ಕೆಮ್ಮಣ್ಣು ಬಳಿಯ ಮೂಡುತೋನ್ಸೆಯಲ್ಲಿ ಪತ್ತೆಯಾಗಿದೆ. ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಶ್ರುತೇಶ್ ಆಚಾರ್ಯ ಅವರ ಸಂಶೋಧನೆಗೆ ಪುರಾತತ್ವಶಾಸ್ತ್ರಜ್ಞ ಎಸ್. ಎ. ಕೃಷ್ಣಯ್ಯ ಮತ್ತು ನಿವೃತ್ತ ಶಿಕ್ಷಕ ಕೆ. ಶ್ರೀಧರ್ ಭಟ್ ಅವರು ಈ ಅಪರೂಪದ ಶಾಸನವನ್ನು ಕಂಡುಹಿಡಿಯುವಲ್ಲಿ ಮಾರ್ಗದರ್ಶನ ನೀಡಿದ್ದರು. ಶಾಸನವನ್ನು ಗ್ರಾನೈಟ್ ಕಲ್ಲಿನ ಮೇಲೆ ಕೆತ್ತಲಾಗಿದೆ ಮತ್ತು ಇದು ಕನ್ನಡದಲ್ಲಿ 24 ಸಾಲುಗಳನ್ನು ಒಳಗೊಂಡಿದೆ. ಶಾಸನವು ‘ಶ್ರೀ ಗಣಾಧಿಪತೇಯೇ ನಮಃ’ ಎಂಬ

ಉಡುಪಿ ಕೆಮ್ಮಣ್ಣು ಬಳಿಯ ಮೂಡುತೋನ್ಸೆಯಲ್ಲಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆ Read More »

ಪಂಜಾಬ್ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಗ್ರೆನೇಡ್ ಸ್ಫೋಟ

ಮೊಹಾಲಿ: ಪಂಜಾಬ್ ಪೊಲೀಸ್‌ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದೆ. ವರದಿಗಳ ಪ್ರಕಾರ ಕಟ್ಟಡದ ಮೂರನೇ ಮಹಡಿಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ ಅನ್ನು ಎಸೆಯಲಾಗಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದೆ. ಸ್ಫೋಟದಲ್ಲಿ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ. ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿದೆ. ಸ್ಫೋಟ ಸಂಬಂಧ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಸೂಚಿಸಿದ್ದಾರೆ.

ಪಂಜಾಬ್ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಗ್ರೆನೇಡ್ ಸ್ಫೋಟ Read More »

ಭಾರಿ ಮಳೆಗೆ ಉದ್ಘಾಟನೆಯಾದ 2 ತಿಂಗಳಲ್ಲಿ ಕುಸಿದ ಕ್ರೀಡಾಂಗಣ ಗ್ಯಾಲರಿ

ಬೆಂಗಳೂರು : ಉದ್ಘಾಟನೆಯಾದ 2 ತಿಂಗಳಲ್ಲಿಯೇ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿ ಕುಸಿದು ಬಿದ್ದಿರುವ ಘಟನೆ ಬೆಂಗಳೂರಿನ ಹೆಎಚ್ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಭಾನುವಾರ ಸುರಿದ ಭಾರೀ ಗಾಳಿಮಳೆಗೆ ಗ್ಯಾಲರಿ ಕುಸಿದು ಬಿದ್ದಿದೆ. ಈ ಕ್ರೀಡಾಂಗಣವನ್ನು ಕಳೆದ ಮಾ. 1ರಂದು ಸಿ.ಎಂ. ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು. ರೂ. 50 ಕೋಟಿ ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. ಕ್ರೀಡಾಂಗಣದ ಒಂದು ಗ್ಯಾಲರಿ ಮೇಲೆ ಮರ ಬಿದ್ದಿದ್ದು ಮತ್ತೊಂದು ಗ್ಯಾಲರಿ ನೇರಾ ಧರೆಗುರುಳಿದೆ. ಬಿಬಿಎಂಪಿ

ಭಾರಿ ಮಳೆಗೆ ಉದ್ಘಾಟನೆಯಾದ 2 ತಿಂಗಳಲ್ಲಿ ಕುಸಿದ ಕ್ರೀಡಾಂಗಣ ಗ್ಯಾಲರಿ Read More »

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸಲೀಂ ಫ್ರೂಟ್ ಎನ್ಐಎ ವಶಕ್ಕೆ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸಲೀಂ ಫ್ರೂಟ್ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂನ ಸಹಾಯಕ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್‌ ನನ್ನು ವಶಕ್ಕೆ ಪಡೆದುಕೊಂಡಿದ್ದು, ದಕ್ಷಿಣ ಮುಂಬೈನಲ್ಲಿರುವ ಸಲೀಮ್ ನಿವಾಸದ ಮೇಲೆ ಮೆ.9 ರಂದು ಎನ್ಐಎ ದಾಳಿ ನಡೆಸಿತ್ತು. ಕಪ್ಪುಹಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮುಂಬೈನಲ್ಲಿರುವ ದಾವೂದ್ ಇಬ್ರಾಹಿಂ ಆಸ್ತಿಗಳ ಕೇರ್ ಟೇಕರ್ ಸಲೀಂ ಫ್ರೂಟ್ ಅವರಿಗೆ ಜಾರಿ ನಿರ್ದೇಶನಾಲಯ ಈ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸಲೀಂ ಫ್ರೂಟ್ ಎನ್ಐಎ ವಶಕ್ಕೆ Read More »

ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ : 10 ಕೆಜಿಗೂ ಹೆಚ್ಚು ಹೆರಾಯಿನ್ ವಶ

ಜಲಂಧರ್: ಪಾಕಿಸ್ತಾನದ ಡ್ರೋನ್ ಭಾರತೀಯ ಸೇನೆಯ ಯೋಧರು ಹೊಡೆದುರುಳಿಸಿದ್ದು ಈ ವೇಳೆ ಸುಮಾರು 10 ಕೆಜಿಗೂ ಹೆಚ್ಚಿನ ಪ್ರಮಾಣದ ಅಕ್ರಮ ಹೆರಾಯಿನ್ ಅನ್ನು ವಶಕ್ಕೆ ಪಡೆದಿದ್ದಾರೆ. ಮೆ.8ರಂದು ಭಾನುವಾರ ತಡರಾತ್ರಿ ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆ ಪ್ರವೇಶಿಸುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದೆ. ಸೋಮವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪಾಕಿಸ್ತಾನದಿಂದ ಡ್ರೋನ್ ಭಾರತದ ಗಡಿಯನ್ನು ಪ್ರವೇಶಿಸುತ್ತಿರುವುದನ್ನು ಭದ್ರತಾ ಪಡೆಗಳ ಸಿಬ್ಬಂದಿ ಗುರುತಿಸಿ ಎಚ್ಚೆತ್ತ ಯೋಧರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಡ್ರೋನ್

ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ : 10 ಕೆಜಿಗೂ ಹೆಚ್ಚು ಹೆರಾಯಿನ್ ವಶ Read More »

error: Content is protected !!
Scroll to Top