ಹುಲಿಹೈದರ್ ಘರ್ಷಣೆ ಪ್ರಕರಣ : 7 ಮಂದಿ ಅರೆಸ್ಟ್ – ಪೊಲೀಸರಿಗೆ ಶರಣಾದ ಬಾಷಾವಲಿ ಕೊಲೆ ಆರೋಪಿ

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದ ಘರ್ಷಣೆಯಿಂದ ಇಬ್ಬರು ಸಾವನ್ನಪ್ಪಿದ ಪ್ರಕರಣ ಸಂಬಂಧ ಆರೋಪಿಗಳ ಹೆಡೆಮುರಿ ಕಟ್ಟುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದು, ಬುಧವಾರ ರಾತ್ರಿ ಮತ್ತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಪಂಪಾಪತಿ ನಾಯಕ್ ಪೊಲೀಸರ ಮುಂದೆ ಶರಣಾಗಿದ್ದಾನೆ. ಕೃತ್ಯ ನಡೆದ ಘಟನೆಯ ನಂತರ ಈತ ತಲೆಮರೆಸಿಕೊಂಡಿದ್ದನು. ಬುಧವಾರ ಕುಷ್ಟಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.





























































































































































































































error: Content is protected !!
Scroll to Top