ಹೆಬ್ರಿ : ಹೆಬ್ರಿಯ ಕನ್ಯಾನ ಶಿವಕೃಪಾದಲ್ಲಿ ಎಸ್ ಕೆ. ಫರ್ನೀಚರ್ ಉದ್ಯಮ ಸಮೂಹ ದಲ್ಲಿ ಬುಧವಾರ ಸಂಜೆ ಶ್ರೀರಾಮ ಭಜನಾ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ನಡೆಯಿತು.
ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಸೂರಿಮಣ್ಣು ಮಠ ಶಿವಪುರ, ಶ್ರಿದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೊಂಜಾಡಿ, ಶ್ರೀ ಅರ್ಧನಾರೀಶ್ವರ ಭಜನಾ ಮಂಡಳಿ ಮುಟ್ಲುಪಾಡಿ, ಶ್ರೀ ಅರ್ಧನಾರೀಶ್ವರ ಮಹಿಳಾ ಭಜನಾ ಮಂಡಳಿ ಮುಟ್ಲುಪಾಡಿ, ಶ್ರೀರಾಮ ಕ್ಷತ್ರೀಯ ಭಜನಾ ಮಂಡಳಿ ಅಂಡಾರು ತಂಡದವರಿಂದ ಭಕ್ತಿ ವೈಭವದ ಸಂಭ್ರಮ ನಡೆಸಿಕೊಟ್ಟರು. ಹಲವಾರು ಮಂದಿ ಭಕ್ತ ಸಮೂಹ ಸಾಕ್ಷಿಯಾದರು.
ಕಾರ್ಯಕ್ರಮದ ವ್ಯವಸ್ಥಾಪಕರಾದ ಕೆ. ಶ್ರೀನಿವಾಸ. ಸೇರ್ವೆಗಾರ್, ಜಯಶ್ರೀ ಎಸ್ ಸೇರ್ವೆಗಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.