ಮಂಗಳೂರು, ಆ. 11 : ತುಳು ಸಿನೇಮಾ ಮತ್ತು ನಾಟಕಗಳ ಜನಪ್ರಿಯ ನಟ ಅರವಿಂದ ಬೋಳಾರ್ ಮತ್ತು ಮಂಗಳೂರಿನ ಲೋಕಲ್ ಚಾನೆಲ್ ನಿರೂಪಕರೊಬ್ಬರ ವಿರುದ್ಧ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ ದೂರು ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಬೋಳಾರ್ ಹಿಂದು ಜ್ಯೋತಿಷ್ಯರ ವೇಷ ಹಾಕಿ ಪುರೋಹಿತರಿಗೆ ಮತ್ತು ಜ್ಯೋತಿಷಿಗಳಿಗೆ ಕೀಳು ಮಟ್ಟದಲ್ಲಿ ಅವಹೇಳನ ಮತ್ತು ಅವಮಾನ ಮಾಡಿದ್ದಾರೆ ಎಂದು ಕುಂಜತ್ತಬೈಲಿನ ಶಿವರಾಜ್ ಎಂಬವರು ದೂರು ದಾಖಲಿಸಿದ್ದಾರೆ.