ಫೆ. 5 : ಹೆಬ್ರಿಯಲ್ಲಿ ಮರಾಠಿ ಸಮಾವೇಶ

ಹೆಬ್ರಿ : ಹೆಬ್ರಿ ವಲಯದ ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಫೆ. 5 ರಂದು ಚಾರದ ಮರಾಠಿ ಸಮುದಾಯ ಭವನದಲ್ಲಿ ಮರಾಠಿ ಸಮಾವೇಶ, ಛತ್ರಪತಿ ಶಿವಾಜಿ ಜಯಂತಿ, ವಾರ್ಷಿಕೋತ್ಸವ, ಶ್ರೀ ಸತ್ಯನಾರಾಯಯಣ ಪೂಜೆ, ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಚಿವ ವಿ. ಸುನೀಲ್‌ ಕುಮಾರ್‌ ಉದ್ಘಾಟಿಸಲಿರುವರು. ಮ. ಸ. ಸೇ. ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪವರ್ ಡೆವಲಪ್‌ಮೆಂಟ್ ಆ್ಯಂಡ್ ಎಂಪವರ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಪ್ರಸಾದ, ಜಿಲ್ಲಾ ಮ. ಸಂಘದ ಅಧ್ಯಕ್ಷ ಉಮೇಶ ನಾಯ್ಕ, ತಾಲೂಕು ಅಧ್ಯಕ್ಷ ಶಂಕರ ನಾಯ್ಕ, ಕಮಲಶಿಲೆ ಮಾನಂಜೆ ವ್ಯ.ಸೇ.ಸ.ಬ್ಯಾಂಕ್‌ ನಿರ್ದೇಶಕ ಜಯರಾಮ ನಾಯ್ಕ, ನಿವೃತ್ತ ಪೊಲೀಸ್ ಅಧಿಕಾರಿ ಪಾಂಡುರಂಗ ನಾಯ್ಕ, ಪಿ.ಡಬ್ಲೂ.ಡಿ. ಗುತ್ತಿಗೆದಾರ ದಿನಕರ ನಾಯ್ಕ ಹಾಗೂ ಕಾಡುಹೊಳೆ ಮ.ಸ.ಸೇ.ಸಂ. ಅಧ್ಯಕ್ಷ ಶೇಖರ್‌ ನಾಯ್ಕ ಉಪಸ್ಥಿತರಿರುವರು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































































































































error: Content is protected !!
Scroll to Top