ನಿಟ್ಟೆ : ಅಣ್ಣನನ್ನೇ ಕೊಲೆಗೈದ ತಮ್ಮ

ಕಾರ್ಕಳ : ನಿಟ್ಟೆ ಗ್ರಾಮದ ಹಾಮಜೆ ಬಳಿ ಅಣ್ಣನನ್ನು ಸ್ವಂತ ತಮ್ಮನೇ ಚೂರಿ ಇರಿದು ಕೊಲೆಗೈದ ಘಟನೆ ಮಾ. 6ರ ಮಧ್ಯಾಹ್ನ ನಡೆದಿದೆ. ಆನಜೆ ಶೇಖರ್‌ (43) ಎಂಬವರೇ ಕೊಲೆಗೀಡಾದ ವ್ಯಕ್ತಿ. ಶೇಖರ್‌ ತನ್ನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭ ಜಾಗದ ವಿಚಾರಕ್ಕೆ ತಕರಾರು ತೆಗೆದ ರಾಜು ಚೂರಿ ಇರಿದಿದ್ದು, ಶೇಖರ್‌ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.





























































































































































































































error: Content is protected !!
Scroll to Top