cheating case

100 ಕೋ. ರೂ. ವಂಚನೆ ಪ್ರಕರಣ : ನಟ ಪ್ರಕಾಶ್‌ ರಾಜ್‌ಗೆ ಸಮನ್ಸ್‌

ತಮಿಳುನಾಡಿನ ಪ್ರಸಿದ್ಧ ಜುವೆಲ್ಲರಿ ಕಂಪನಿಯಿಂದ ಜನರಿಗೆ ಪಂಗನಾಮ ಹೊಸದಿಲ್ಲಿ : 100 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್‌ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿಯಾಗಿದೆ.ತಮಿಳುನಾಡಿನ ತಿರುಚ್ಚಿ ಮೂಲದ ಪ್ರಣವ್ ಜ್ಯುವೆಲರ್ಸ್ ಎಂಬ ಆಭರಣ ಮಾರಾಟ ಸಂಸ್ಥೆಯೊಂದಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾಗುತ್ತಿರುವ 100 ಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದೆ. ನಟ ಪ್ರಕಾಶ್ ರಾಜ್‌ ಪ್ರಣವ್ ಜ್ಯುವೆಲರ್ಸ್​ ರಾಯಭಾರಿ ಆಗಿದ್ದರು, ಈ ಕಾರಣದಿಂದಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ತಿಳಿಸಿದೆ.ಬಹಳ ಸಮಯದಿಂದಲೂ […]

100 ಕೋ. ರೂ. ವಂಚನೆ ಪ್ರಕರಣ : ನಟ ಪ್ರಕಾಶ್‌ ರಾಜ್‌ಗೆ ಸಮನ್ಸ್‌ Read More »

ಚೈತ್ರಾ ಗ್ಯಾಂಗ್‌ ವಂಚನೆ ಪ್ರಕರಣ : ಹಾಲಶ್ರೀಗೆ ಜಾಮೀನು

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಅಮೀಷ ಒಡ್ಡಿದ ಗೋವಿಂದ ಬಾಬು ಪೂಜಾರಿಗೆ ಕೋಟ್ಯಂತರ ರೂ. ವಂಚಿಸದ ಪ್ರಕರಣದಲ್ಲಿ ಜೈಲುಪಾಲಾಗಿರುವ 3ನೇ ಆರೋಪಿ ಅಭಿನವ ಹಾಲಶ್ರೀಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ವಂಚನೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬಂದಾಗ ತಲೆಮರೆಸಿಕೊಂಡಿದ್ದ ಹಾಲಶ್ರೀ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯನ್ನು ಬೆಂಗಳೂರಿನ ಸಿಸಿಹೆಚ್ 57ನೇ ನ್ಯಾಯಾಲಯ ವಜಾಗೊಳಿಸಿತ್ತು. ಜಾಮೀನು ನೀಡದಂತೆ ಈ ಹಿಂದೆ ಸಿಸಿಬಿ ಆಕ್ಷೇಪಣೆ ಸಲ್ಲಿಸಿತ್ತು. ಬಳಿಕ ಹಾಲಶ್ರೀ ಪರ ವಕೀಲರು, ವಂಚನೆ ಪ್ರಕರಣದಲ್ಲಿ

ಚೈತ್ರಾ ಗ್ಯಾಂಗ್‌ ವಂಚನೆ ಪ್ರಕರಣ : ಹಾಲಶ್ರೀಗೆ ಜಾಮೀನು Read More »

ವಂಚನೆ ಪ್ರಕರಣ : ಮುಂದಿನ ವಾರ ಚೈತ್ರಾ ವಿರುದ್ಧ ಚಾರ್ಜ್‌ಶೀಟ್‌

ಬೈಂದೂರಿನ ಉದ್ಯಮಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಬೆಂಗಳೂರು : ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಯವಗೆ ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ನಂಬಿಸಿ 7 ಕೋಟಿ ರೂಪಾಯಿ ವಂಚಿಸಿದ ಚೈತ್ರಾ ಮತ್ತು ಗ್ಯಾಂಗ್ ವಿರುದ್ಧ ಸಿಸಿಬಿ ತನಿಖೆ ಪೂರ್ಣಗೊಂಡಿದ್ದು, ಡೀಲ್ ಸಂಬಂಧ 68 ಸಾಕ್ಷ್ಯಗಳನ್ನ ಕಲೆ ಹಾಕಿದೆ. ಸಿಸಿಬಿ ಪೊಲೀಸರು ಮುಂದಿನ ವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ. ಚೈತ್ರಾ ವಂಚನೆ ಪ್ರಕರಣದಲ್ಲಿ‌ ಸಿಸಿಬಿ ಪೊಲೀಸರು ಬರೋಬ್ಬರಿ 4.11 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್,

ವಂಚನೆ ಪ್ರಕರಣ : ಮುಂದಿನ ವಾರ ಚೈತ್ರಾ ವಿರುದ್ಧ ಚಾರ್ಜ್‌ಶೀಟ್‌ Read More »

ವಂಚನೆ ಪ್ರಕರಣ : ಕೋಟದಲ್ಲಿ ಚೈತ್ರಾ ವಿಚಾರಣೆ

ಬಟ್ಟೆ ಅಂಗಡಿ ಪ್ರಾರಂಭಿಸಲು ಅನುಮತಿ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಉಡುಪಿ: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ 7 ಕೋ. ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೆರೆಯಾಗಿರುವ ಚೈತ್ರಾಳನ್ನು ಪೊಲೀಸರು ನಿನ್ನೆ ಕೋಟಕ್ಕೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಕೋಟದ ಯುವಕನಿಗೆ ಬಟ್ಟೆ ಅಂಗಡಿ ತೆರೆಯಲು ಅನುಮತಿ ತೆಗೆಸಿಕೊಡುವುದಾಗಿ ಹೇಳಿ ಲಕ್ಷಗಟ್ಟಲೆ ರೂ. ವಂಚಿಸಿದ ಇನ್ನೊಂದು ಕೇಸ್‌ ಚೈತ್ರಾಳ ಮೇಲಿದ್ದು, ಇದರ ತನಿಖೆಗಾಗಿ ಚೈತ್ರಾಳನ್ನು ಕರೆತರಲಾಗಿತ್ತು.ಕೋಟದ ಕೋಡಿ ನಿವಾಸಿ ಸುದಿನ ಎನ್ನುವವರು ಚೈತ್ರಾ

ವಂಚನೆ ಪ್ರಕರಣ : ಕೋಟದಲ್ಲಿ ಚೈತ್ರಾ ವಿಚಾರಣೆ Read More »

ಚೈತ್ರಾ ಕುಂದಾಪುರ ಇನ್ನೊಂದು ವಂಚನೆ ಪ್ರಕರಣ ಬೆಳಕಿಗೆ

ಬಟ್ಟೆ ಅಂಗಡಿ ತೆಗೆಸಿಕೊಡುವುದಾಗಿ ಕೋಟದ ಯುವಕನಿಂದ ಹಣ ಪಡೆದು ವಂಚನೆ ಉಡುಪಿ : ಬಹುಕೋಟಿ ರೂ. ವಂಚನೆ ಪ್ರಕರಣದ ಮುಖ್ಯ ಆರೋಪಿಯಾಗಿ ಸೆರೆಯಲ್ಲಿರುವ ಭಾಷಣಕಾರ್ತಿ ಚೈತ್ರಾ ಕುಂದಾಪುರ ತನ್ನೂರಿನಲ್ಲಿ ಇನ್ನೊಂದು ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಬಟ್ಟೆ ಅಂಗಡಿಯನ್ನು ತೆರೆದುಕೊಂಡುವುದಾಗಿ ನಂಬಿಸಿ 5 ಲಕ್ಷ ರೂ. ವಂಚಿಸಿದ ಕುರಿತು ಕೋಟಾ ಠಾಣೆಯಲ್ಲಿ ಸಂತ್ರಸ್ತರು ಚೈತ್ರಾ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಉಡುಪಿಯಲ್ಲಿ ವ್ಯಕ್ತಿಯೊಬ್ಬರಿಗೆ ಬಟ್ಟೆ ಅಂಗಡಿ ತೆರೆಯಲು ಅಗತ್ಯ ಅನುಮತಿ, ವ್ಯವಸ್ಥೆ ಮಾಡಿಕೊಡುವುದಾಗಿ ಚೈತ್ರಾ

ಚೈತ್ರಾ ಕುಂದಾಪುರ ಇನ್ನೊಂದು ವಂಚನೆ ಪ್ರಕರಣ ಬೆಳಕಿಗೆ Read More »

ವಂಚನೆ ಪ್ರಕರಣ : ಗೋವಿಂದ ಬಾಬು ಪೂಜಾರಿ ವಿರುದ್ಧ ಇ.ಡಿಗೆ ಚೈತ್ರಾ ದೂರು

ಅಕ್ರಮ ಹಣ ವರ್ಗಾವಣೆ ವ್ಯವಹಾರದ ತನಿಖೆ ನಡೆಸಲು ಆಗ್ರಹ ಉಡುಪಿ: ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣ ಹೊಸ ಹೊಸ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಬೆಂಗಳೂರು ಸಿಸಿಬಿ ಪೊಲೀಸರಿಂದ ಸೆರೆಯಾಗಿರುವ ಚೈತ್ರಾ ಇದೀಗ ಈ ಪ್ರಕರಣದ ದೂರುದಾರರಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾಳೆ.ಗೋವಿಂದ ಬಾಬು ಪೂಜಾರಿ ಐದು ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಕ್ಕೆ (ED) ಪತ್ರ ಬರೆದು ಈ

ವಂಚನೆ ಪ್ರಕರಣ : ಗೋವಿಂದ ಬಾಬು ಪೂಜಾರಿ ವಿರುದ್ಧ ಇ.ಡಿಗೆ ಚೈತ್ರಾ ದೂರು Read More »

ವಂಚನೆ ದೂರು : ವಾಗ್ಮಿ ಚೈತ್ರಾ ಕುಂದಾಪುರ ಪೊಲೀಸ್‌ ವಶಕ್ಕೆ

ಚುನಾವಣೆಯಲ್ಲಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಉಡುಪಿ : ಚುನಾವಣೆಯಲ್ಲಿ ಟಿಕೆಟ್‌ ಕೊಡಿಸುತ್ತೇನೆಂದು ನಂಬಿಸಿ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಬೈಂದೂರಿನ ವ್ಯಕ್ತಿಯೊಬ್ಬರಿಗೆ ಕೋಟಿಗಟ್ಟಲೆ ಹಣ ಪಡೆದು ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಪೊಲೀಸರು ಖ್ಯಾತ ವಾಗ್ಮಿ ಚೈತ್ರಾ ಕುಂದಾಪುರ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.ಹಿಂದೂ ಸಂಘಟನೆ ಕಾರ್ಯಕರ್ತೆಯಾಗಿರುವ ಚೈತ್ರಾ ಕುಂದಾಪುರ ಮತ್ತು ಅವರ ಜತೆಗಾರರನ್ನು ಬೆಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆದುಕೊಂಡು ಹೊಗಿದ್ದಾರೆ ಎಂದು ತಿಳಿದುಬಂದಿದೆ.ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು

ವಂಚನೆ ದೂರು : ವಾಗ್ಮಿ ಚೈತ್ರಾ ಕುಂದಾಪುರ ಪೊಲೀಸ್‌ ವಶಕ್ಕೆ Read More »

ಬಂಧನ ಭೀತಿಯಲ್ಲಿ ಬಾಲಿವುಡ್‌ ನಟಿ ಜಾಕಲಿನ್‌ ಫರ್ನಾಂಡಿಸ್‌

ಇಷ್ಟರ ತನಕ ಬಂಧಿಸದ ಇಡಿಗೆ ನ್ಯಾಯಾಲಯ ತೀವ್ರ ತರಾಟೆ ಹೊಸದಿಲ್ಲಿ : ಬಹುಕೋಟಿ ವಂಚಕ ಸುಕೇಶ್‌ ಚಂದ್ರಶೇಖರ್‌ ಗೆಳೆತನ ಮಾಡಿ ಅವನ ಕೃತ್ಯಗಳಲ್ಲಿ ಸಹಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್‌ನ ಜನಪ್ರಿಯ ನಟಿ ಜಾಕಲಿನ್‌ ಫರ್ನಾಂಡಿಸ್‌ಗೆ ಬಂಧನ ಭೀತಿ ಎದುರಾಗಿದೆ. ಗುರುವಾರ ನಡೆದ ವಿಚಾರಣೆಯಲ್ಲಿ ಇಷ್ಟರ ತನಕ ನಟಿಯನ್ನು ಬಂಧಿಸದ ಜಾರಿ ನಿರ್ದೇಶನಾಲಯವನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಪೊಲೀಸರು ಕೈಕೋಳದೊಂದಿಗೆ ನಟಿಯ ಮನೆಯ ಬಾಗಿಲು ಬಡಿಯುವ ಸಾಧ್ಯತೆಯಿದೆ.ಜಾರಿ ನಿರ್ದೇಶನಾಲಯ ನಟಿಯ ಪ್ರಕರಣಕ್ಕೆ ಸಂಬಂಧಿಸಿ

ಬಂಧನ ಭೀತಿಯಲ್ಲಿ ಬಾಲಿವುಡ್‌ ನಟಿ ಜಾಕಲಿನ್‌ ಫರ್ನಾಂಡಿಸ್‌ Read More »

error: Content is protected !!
Scroll to Top